‘ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ಆಕ್ಷೇಪಾರ್ಹ ಹೇಳಿಕೆ– ಹಾರ್ದಿಕ್, ರಾಹುಲ್ಗೆ ತಲಾ ₹20 ಲಕ್ಷ ದಂಡ’ (ಪ್ರ.ವಾ., ಏ.21). ಎಲ್ಲರೂ ಬಯಸಿದಂತೆ, ಎಲ್ಲವೂ ‘ಸುಖಾಂತ್ಯ’ವಾಗಿದೆ! ವರ್ಲ್ಡ್ ಕಪ್ಗೆ ಆಯ್ಕೆ, ಒಂದು ‘ಭಾರಿ’ (!) ಮೊತ್ತದ ದಂಡ. ಇನ್ನೂ ‘ಹುಡುಗರು’, ‘ಜೀವನದಲ್ಲಿ ಬೆಳವಣಿಗೆಯ ಪಾಠ’ ಎಂದೆಲ್ಲ ಸಾಂತ್ವನ... ಇಂಥ ‘ದಿಗ್ಗಜರು’ಗಳ ಮಧ್ಯೆ, ಮಧ್ಯಮ ವರ್ಗದ ನೈತಿಕ ಅಧಃಪತನದ ಕುರಿತು ಚಿಂತೆ-ಚಿಂತನೆಯಾದರೂ ಏಕೆ ಬೇಕು, ಯಾರಿಗೆ ಬೇಕು ಮತ್ತು ಯಾರಿಗಾಗಿ ಬೇಕು?