ಸಾಮಾನ್ಯವಾಗಿ ಗಣ್ಯವ್ಯಕ್ತಿಗಳು ದಿವಂಗತರಾದಾಗ ಮೇರು ವ್ಯಕ್ತಿ, ಯುಗಪುರುಷ ಎಂದೆಲ್ಲ ಬಣ್ಣಿಸಲಾಗುತ್ತದೆ. ಕೆಲವೊಮ್ಮೆ ಇದು ನಿಜವಿದ್ದರೂ, ಒಮ್ಮೊಮ್ಮೆ ಅತಿಶಯೋಕ್ತಿ ಕೂಡ ಆಗುತ್ತದೆ. ಮರಣ ಹೊಂದುವ ಮಹನೀಯರ ಒಳ್ಳೆಯ ಗುಣಗಳನ್ನಷ್ಟೇ ಪ್ರಸ್ತಾಪಿಸು
ತ್ತೇವೆ. ಯಾಕೆಂದರೆ, ಹಿಂದೂ ಧರ್ಮದಲ್ಲಿ ನಿಧನರಾದವರನ್ನು ದೇವರಿಗೆ ಹೋಲಿಸುತ್ತೇವೆ. ಶರಣ ಸಂಸ್ಕೃತಿಯು, ‘ಮರಣವೇ ಮಹಾನವಮಿ’ ಎಂದು ಹೇಳುತ್ತದೆ. ಪುರಾಣಗಳಲ್ಲಿ ದೇವರುಗಳ ಬಗ್ಗೆ, ಅವತಾರಗಳ ಬಗ್ಗೆ ಕೇಳಿರುತ್ತೇವೆ.