‘ದೇಶದಲ್ಲಿ ಹಿಂದಿ ಭಾಷೆಯನ್ನು ಹೇರಬೇಕು ಎಂದು ನಾನು ಹೇಳಿಲ್ಲ, ಬದಲಿಗೆ, ದ್ವಿತೀಯ ಭಾಷೆಯಾಗಿ ಬಳಸಬೇಕು ಎಂದು ಪ್ರತಿಪಾದಿಸಿದ್ದೆ’ ಎಂದು ಕೇಂದ್ರ ಗೃಹ ಸಚಿವರು ಸ್ಪಷ್ಟಪಡಿಸಿದ್ದಾರೆ (ಪ್ರ.ವಾ., ಸೆ.19). ಗೃಹ ಸಚಿವರ ಮುಂಚಿನ ಹೇಳಿಕೆಯ ವಿರುದ್ಧ ದಕ್ಷಿಣದ ರಾಜ್ಯಗಳಲ್ಲಿ ತೀವ್ರ ಪ್ರತಿಭಟನೆಗಳು ನಡೆದ ಕಾರಣ, ಅವರು ಒಂದು ಹೆಜ್ಜೆ ಹಿಂದಿಟ್ಟಿರಬಹುದು ಎನಿಸುತ್ತದೆ. ಏನೇ ಇರಲಿ, ಈಗ ಅವರು ‘ಹೇರಿಕೆ’ ಪ್ರಶ್ನೆಯೇ ಇಲ್ಲ ಎಂದಿದ್ದಾರೆ. ಪ್ರಾದೇಶಿಕ ಭಾಷೆಗಳ ಕುರಿತು ಗೃಹ ಸಚಿವರ ಮಾತುಗಳು ಗಮನಾರ್ಹವಾಗಿವೆ: ‘ಯಾರೂ ತಮ್ಮ ಮಾತೃಭಾಷೆಯನ್ನು ಕಳೆದುಕೊಳ್ಳಬಾರದು. ಅವುಗಳನ್ನು ಗಟ್ಟಿಗೊಳಿಸಲು ಚಳವಳಿಗಳು ನಡೆಯಬೇಕು...’ ಎಂದು ಸಾರಿದ್ದಾರೆ.