* ವಿಶ್ವಕಪ್ ಜಿಮ್ನಾಸ್ಟಿಕ್ಸ್ಗೆ ಆಯ್ಕೆಯಾದ ಕನ್ನಡಿಗ ನೀವು. ಈ ಟೂರ್ನಿಯಲ್ಲಿ ಪಾಲ್ಗೊಳ್ಳಲು ಅವಕಾಶ ಪಡೆದ ದಕ್ಷಿಣ ಭಾರತದ ಮೊದಲ ಜಿಮ್ನಾಸ್ಟ್ ಕೂಡ. ಸಿದ್ಧತೆಗಳು ಹೇಗೆ ನಡೆದಿವೆ ಮತ್ತು ದೋಹಾ ವಿಶ್ವಕಪ್ನಲ್ಲಿ ಏನು ನಿರೀಕ್ಷೆ ಇದೆ?
ಮಿತಿಮೀರಿದ ಆತ್ಮವಿಶ್ವಾಸವನ್ನು ಹೊಂದಿಲ್ಲ. ಇಂತಿಷ್ಟೇ ಗಳಿಸಬೇಕು, ದೊಡ್ಡ ಸಾಧನೆಯೇ ಆಗಬೇಕು ಎಂಬ ಧೋರಣೆಯೂ ಇಲ್ಲ. ಕಠಿಣ ಅಭ್ಯಾಸ ಮಾಡಿದ್ದೇನೆ. ಕಲಿತ ವಿದ್ಯೆಯನ್ನು ಸ್ಪರ್ಧಾಕಣದಲ್ಲಿ ಸಂಪೂರ್ಣವಾಗಿ ಪಣಕ್ಕಿಡುವುದು ನನ್ನ ಉದ್ದೇಶ. 2020ರ ಟೋಕಿಯೊ ಒಲಿಂಪಿಕ್ಸ್ಗೆ ಅರ್ಹತೆ ಗಳಿಸುವುದು ಮುಖ್ಯ ಗುರಿ.