‘ಸಮಾಜದ ಎಲ್ಲ ಕ್ಷೇತ್ರಗಳಲ್ಲೂ ಒಳ್ಳೆಯವರು– ಕೆಟ್ಟವರು ಇದ್ದೇ ಇರುತ್ತಾರೆ. ಇದರಲ್ಲಿ ಎರಡು ಮಾತಿಲ್ಲ. ಯಾರೋ ಒಬ್ಬ ತಪ್ಪು ಮಾಡಿದ ಎಂದು ಇಡೀ ಪೊಲೀಸ್ ಇಲಾಖೆಯನ್ನೇ ದೂರಕ್ಕಾಗುತ್ತಾ. ನಿಮ್ಮಲ್ಲೂ ಕೆಟ್ಟವರಿದ್ದಾರೆ ಎಂದು ಇಡೀ ಪತ್ರಕರ್ತರನ್ನು ದೂರುವುದು ಒಳ್ಳೆಯದೇನ್ರೀ. ಕ್ರಮ ತೆಗೆದುಕೊಳ್ಳದಿದ್ರೆ ಕೇಳಿ, ಸುಮ್ನೇ ಎಲ್ಲದಕ್ಕೂ ಆರೋಪಗಳನ್ನು ಮಾಡಬಾರದು’ ಎಂದು ಅಲೋಕ್ಕುಮಾರ್ ಹೇಳುತ್ತಿದ್ದಂತೆ, ಪತ್ರಕರ್ತರ ಸಮೂಹ ಪ್ರಶ್ನಾವಳಿಯ ಸ್ವರೂಪವನ್ನೇ ಬದಲಿಸಿಕೊಂಡಿತು. ಸುತ್ತಲೂ ನಿಂತಿದ್ದ ಪೊಲೀಸರು ಮುಗುಳ್ನಕ್ಕರು.