ವಿಧಾನಸಭಾ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳಿಗೆ ಮತದಾರರು ಒಳ್ಳೆಯ ಪಾಠ ಕಲಿಸಿದ್ದಾರೆನ್ನುವುದು (ಪ್ರ.ವಾ., ಸಂಪಾದಕೀಯ, ಮೇ 16) ನಿಜ. ಆದರೆ ಕಲಿಯುವ ವಿದ್ಯಾವಂತಿಕೆ ಗೊಡ್ಡು ರಾಜಕೀಯಕ್ಕಿಲ್ಲ. ಬರಲಿರುವ ಸರ್ಕಾರದ ಆದ್ಯತೆ ಜನಪರ ಆಡಳಿತವಾಗಬೇಕು ಎನ್ನುವುದು ಪಥ್ಯವಾದ ಮಾತೇ ಹೌದು. ಏಕೆಂದರೆ ಮತದಾರರು ಅತ್ಯುನ್ನತ ಪ್ರಜ್ಞಾವಂತಿಕೆ ಮೆರೆದಿದ್ದಾರೆ.