ಸ್ಲೀಪರ್ನ ದರ ತೆತ್ತು, ಟಿ.ಸಿ. ಸಾಹೇಬರ ಕೆಂಗಣ್ಣಿಗೆ ಗುರಿಯಾಗಿ, ಅವರ ಕೈ ಬಿಸಿ ಮಾಡಿ ಬೋಗಿಯ ತಳದಲ್ಲಿ ಕುಳಿತು ಬರುವ ‘ಸೌಭಾಗ್ಯ’ ಕಲಬುರ್ಗಿಯ ಪ್ರಯಾಣಿಕರದ್ದಾಗಿರುತ್ತದೆ. ಅದಿಲ್ಲದಿದ್ದರೆ ದುಬಾರಿ ದರ ತೆತ್ತು ರಸ್ತೆ ಮೂಲಕ ಬರಬೇಕು. ಕೇಂದ್ರ ರೈಲ್ವೆ ವಲಯಕ್ಕೆ ಸಾಕಷ್ಟು ಆದಾಯವನ್ನು ತಂದುಕೊಡುವ ಈ ವಿಭಾಗದ ಬಗ್ಗೆ ರೈಲ್ವೆ ಇಲಾಖೆಯು ಅಸಡ್ಡೆ ತೋರುತ್ತಾ ಬಂದಿದೆ. ಕುಂತಿ ಮಕ್ಕಳಿಗೆ ರಾಜ್ಯವಿಲ್ಲ ಎಂಬಂತೆ ನಮ್ಮ ಬವಣೆ ಮುಗಿಯುತ್ತಿಲ್ಲ.