ಈ ಪ್ರಕ್ರಿಯೆಯಲ್ಲಿ ಬಡಿಗೇರ ಮನೆತನದ ರಾಜು ಬಡಿಗೇರ ಹಾಗೂ ಮಾನಪ್ಪ ಹಾದಿಮನಿ ಕೂಡಾ ಕಾಮಣ್ಣನ ತಲೆ ತಯಾರಿಸಿ, ಕಾಮ ದಹನ ಕಾರ್ಯಕ್ಕೆ ಸಹಕರಿಸುತ್ತ ಬಂದಿದ್ದಾರೆ. ಇಂದು ಹೋಳಿ ಹುಣ್ಣಿಮೆ. ಅಂದು ಕಾಮಣ್ಣನ ತಲೆಗಳನ್ನು ಹಲಗೆ, ರಣಕಹಳೆ ವಾದ್ಯಗಳೊಂದಿಗೆ ಕೈಯಲ್ಲಿ ಕತ್ತಿ ಹಿಡಿದು, ಹೋಳಿ ಪದ ಹಾಡುತ್ತ ಭಕ್ತಿ, ಶ್ರದ್ಧೆಯಿಂದ ತಗೆದುಕೊಂಡು ಹೋಗಿ, ಪ್ರತಿಷ್ಠಾಪಿಸಿ, ಪೂಜೆ ಮಾಡಿ, ನಂತರ ಮರುದಿನ ದಹನ ಮಾಡುವುದು ಸಂಪ್ರದಾಯ.