ಬೆಂಗಳೂರು ಚಿತ್ರಗಳು: ಒಂದು ಕಡೆ ಶಾಲೆ ತೆರೆಯಲು ಸಿದ್ಧತೆ, ಮತ್ತೊಂದು ಕಡೆ ನಿಷೇಧಾಜ್ಞೆ
ಶುಕ್ರವಾರದಿಂದ ಶಾಲಾ–ಕಾಲೇಜುಗಳು ಪುನಾರಂಭಗೊಳ್ಳುತ್ತಿರುವುದರಿಂದ ಚಾಮರಾಜಪೇಟೆಯ ವಿಶ್ವೇಶ್ವರಯ್ಯ ಬಿಬಿಎಂಪಿ ಪಬ್ಲಿಕ್ ಶಾಲೆ ಮತ್ತು ಕಾಲೇಜನ್ನು ಶಿಕ್ಷಕ ಸಿಬ್ಬಂದಿ ಸಿಂಗಾರಗೊಳಿಸುತ್ತಿದ್ದ ದೃಶ್ಯ ಗುರುವಾರ ಕಂಡು ಬಂತು. ಮತ್ತೊಂದು ಕಡೆ, ಕೊರೊನಾ ರೂಪಾಂತರಿ ಸೋಂಕು ಹರಡುವಿಕೆ ತಡೆಗಾಗಿ ಹೊಸ ವರ್ಷದ ಮುನ್ನಾದಿನವಾದ ಗುರುವಾರ ಮಧ್ಯಾಹ್ನದಿಂದಲೇ ನಗರದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ನಗರದ ಪ್ರಮುಖ ರಸ್ತೆಗಳಲ್ಲಿ ಪೊಲೀಸರು ಟೆಂಟ್ಗಳನ್ನು ನಿರ್ಮಿಸಿಕೊಂಡು ನಾಕಾಬಂದಿ ಬಿಗಿಗೊಳಿಸಿದ್ದಾರೆ. –ಪ್ರಜಾವಾಣಿ ಚಿತ್ರ
ಶುಕ್ರವಾರದಿಂದ ಶಾಲಾ–ಕಾಲೇಜುಗಳು ಪುನಾರಂಭಗೊಳ್ಳುತ್ತಿರುವುದರಿಂದ ಚಾಮರಾಜಪೇಟೆಯ ವಿಶ್ವೇಶ್ವರಯ್ಯ ಬಿಬಿಎಂಪಿ ಪಬ್ಲಿಕ್ ಶಾಲೆ ಮತ್ತು ಕಾಲೇಜನ್ನು ಶಿಕ್ಷಕ ಸಿಬ್ಬಂದಿ ಸಿಂಗಾರಗೊಳಿಸಿದರು
ADVERTISEMENT
ಶಾಲೆ–ಕಾಲೇಜು ಮುಂಭಾಗ ರಂಗೋಲಿ, ತೋರಣದ ಸಿಂಗಾರ
ಗುರುವಾರ ಮಧ್ಯಾಹ್ನದಿಂದಲೇ ನಗರದಲ್ಲಿ ನಿಷೇಧಾಜ್ಞೆ
ನಗರದ ಪ್ರಮುಖ ರಸ್ತೆಗಳಲ್ಲಿ ಪೊಲೀಸರು ಟೆಂಟ್ಗಳನ್ನು ನಿರ್ಮಿಸಿಕೊಂಡು ನಾಕಾಬಂದಿ ಬಿಗಿ
ಹೊಸವರ್ಷಾಚರಣೆಗೆ ಕ್ಷಣಗಣನೆ ಆರಂಭವಾಗಿರುವುದರಿಂದ ಶ್ರೀನಗರದ ಕಾಳಿದಾಸ ಬಡಾವಣೆಯ ಬೇಕರಿಯೊಂದರಲ್ಲಿ ಕೇಕ್ ಖರೀದಿಸಲು ಜನ ಮುಗಿಬಿದ್ದರು –ಪ್ರಜಾವಾಣಿ ಚಿತ್ರ