Photos: ಹೊಸಪೇಟೆಯ ತುಂಗಭದ್ರಾ ಜಲಾಶಯದ ಕೆಳಮಟ್ಟದ ಕಾಲುವೆಗೆ ನೀರು
ಹೊಸಪೇಟೆ (ವಿಜಯನಗರ): ಇಲ್ಲಿನ ತುಂಗಭದ್ರಾ ಜಲಾಶಯದ ಕೆಳಮಟ್ಟದ ಕಾಲುವೆಗೆ (ಎಲ್ಎಲ್ಸಿ) ಗುರುವಾರ ಸಂಜೆ ನೀರು ಹರಿಸಲಾಯಿತು. ಕರ್ನಾಟಕ ಪಾಲಿನ 400 ಕ್ಯುಸೆಕ್ ನೀರು ಸದ್ಯ ಹರಿಸಲಾಗುತ್ತಿದೆ. ದಿನ ಕಳೆದಂತೆ ನೀರು ಹರಿಸುವ ಪ್ರಮಾಣ ಹೆಚ್ಚಾಗಲಿದೆ. ಇನ್ನಷ್ಟೇ ಆಂಧ್ರ ಪ್ರದೇಶದವರು ನೀರಿಗೆ ಬೇಡಿಕೆ ಸಲ್ಲಿಸಬೇಕಿರುವುದರಿಂದ ಅವರ ಪಾಲಿನ ನೀರು ಹರಿಸಿಲ್ಲ.