Photos| ಉಡುಪಿಯಲ್ಲಿ ನಿರಂತರ ಮಳೆ: ಕೆಲ ಪ್ರದೇಶಗಳು ಜಲಾವೃತ
ಉಡುಪಿ: ಜಿಲ್ಲೆಯಲ್ಲಿ ಎಡೆಬಿಡದೆ ಮಳೆ ಸುರಿಯುತ್ತಿದೆ. ಮೂಡನಿಡಂಬೂರು ಜನವಸತಿ ಪ್ರದೇಶ ಜಲಾವೃತಗೊಂಡಿದ್ದು, ಮನೆಗಳಿಗೆ ನೀರುನುಗ್ಗಿದೆ. ಬನ್ನಂಜೆ, ಮಠದಬೆಟ್ಟು ಪರಿಸರದಲ್ಲೂ ಹಲವು ಮನೆಗಳಿಗೆ ನೀರು ನುಗ್ಗಿದ್ದು ನಾಗರಿಕರಿಗೆ ಸಮಸ್ಯೆ ಎದುರಾಯಿತು.ಕಲ್ಸಂಕ ಕಾಲುವೆ ತುಂಬಿ ಹರಿಯುತ್ತಿದ್ದು ಕಾಲುವೆ ಅಕ್ಕಪಕ್ಕದ ಮನೆಗಳು ಜಲಾವೃತಗೊಂಡಿವೆ.ಕೃಷ್ಣಮಠದ ರಾಜಾಂಗಣದ ಪಾರ್ಕಿಂಗ್ ಪ್ರದೇಶ ಕೆರೆಯಂತಾಗಿದೆ.ಕುಂದಾಪುರ, ಬೈಂದೂರು, ಕಾರ್ಕಳ, ಹೆಬ್ರಿ, ಕಾಪು, ಬ್ರಹ್ಮಾವರ ತಾಲ್ಲೂಕುಗಳಲ್ಲೂ ಮಳೆಯ ಅಬ್ಬರ ಜೋರಾಗಿದೆ. ಹಲವು ಕಡೆಗಳಲ್ಲಿ ಮರಬಿದ್ದು ಮನೆಗಳಿಗೆ ಭಾಗಶಃ ಹಾನಿಯಾಗಿದೆ.
Last Updated 17 ಜುಲೈ 2020, 8:04 IST