ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂತಹ ಸ್ವಾಮಿಗಳು ಬೇಕು

Last Updated 29 ಜನವರಿ 2018, 19:30 IST
ಅಕ್ಷರ ಗಾತ್ರ

‘ಕೇಂದ್ರ ಸರ್ಕಾರ ನಮ್ಮನ್ನು ಸಂಪರ್ಕಿಸದೆ ಪದ್ಮಶ್ರೀ ಪ್ರಶಸ್ತಿ ಘೋಷಿಸಿದೆ. ಗುರುತಿಸಿದ್ದಕ್ಕೆ ಅನಂತ ಧನ್ಯವಾದ. ಸಮಾಜದಲ್ಲಿ ಅಸಾಧಾರಣ ಸೇವೆಗೈದ ಸಾಧಕರಿದ್ದಾರೆ. ಅಂತಹವರಿಗೆ ಇದನ್ನು ನೀಡಿದರೆ ಒಳ್ಳೆಯದು. ನಮಗೆ ಇದರ ಅವಶ್ಯಕತೆಯಿಲ್ಲ’ ಎಂದು ಸಿದ್ಧೇಶ್ವರ ಸ್ವಾಮೀಜಿ ಹೇಳಿರುವ ಮಾತಿನಿಂದ ನಮಗೆ ಅವರ ಸರಳತೆ, ನೇರ ನಿಲುವು, ಸಮಾಜಕ್ಕೆ ನಿಸ್ವಾರ್ಥ ಸೇವೆ ಸಲ್ಲಿಸುವ ರೀತಿ ನೀತಿಗಳು ತಿಳಿಯುತ್ತವೆ.

ಇತ್ತೀಚೆಗೆ ಜಾತಿ ರಾಜಕಾರಣ ಮಾಡಿ, ಜಾತಿಗಳನ್ನು ವಿಭಜಿಸಿ, ಕೋಮು ಸೌಹಾರ್ದಕ್ಕೆ ದಕ್ಕೆ ತರುವಂಥ ಮತ್ತು ಪ್ರಶಸ್ತಿಗಳಿಗೆ ಹಂಬಲಿಸುವ ಕಪಟ ಕಾವಿಧಾರಿಗಳ  ಮಧ್ಯದಲ್ಲಿ ಸಿದ್ಧೇಶ್ವರ ಸ್ವಾಮೀಜಿ ನಿಲುವು ಅನುಕರಣೀಯ. ಅವರಿಗೆ ಸಾವಿರ ಶರಣು.

ಎಲ್.ಪಿ.ಕುಲಕರ್ಣಿ, ಬಾದಾಮಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT