ಇಲ್ಲಿನ ತಾತ್ಕಾಲಿಕ ಉಪನಗರಗಳಿಗೆ ಭೇಟಿ ನೀಡಿದ ಬಳಿಕ ‘ಪ್ರಜಾವಾಣಿ’ ಜತೆ ಅವರು ಮಾತನಾಡಿದರು. ಈಗಾಗಲೇ ಜೈನ ಧರ್ಮದ 200 ಅನಿವಾಸಿ ಭಾರತೀಯರು ತಮ್ಮ ಹೆಸರನ್ನು ಎನ್ಆರ್ಐ ಗ್ರೂಪಿಗೆ ನೋಂದಾಯಿಸಿಕೊಂಡಿದ್ದಾರೆ. ಜರ್ಮನ್, ಕೀನ್ಯಾ, ದುಬೈ, ಬ್ರೆಜಿಲ್, ಇಂಗ್ಲೆಂಡ್, ಇಂಡೋನೇಶಿಯಾ ಮೊದಲಾದ ದೇಶಗಳಿಂದ ಇಲ್ಲಿಗೆ ಆಗಮಿಸುತ್ತಿದ್ದಾರೆ. ರಾಜ್ಯದಲ್ಲಿರುವ ಪ್ರಾಚೀನ ಜಿನ ಬಸದಿ, ಕ್ಷೇತ್ರದಲ್ಲಿ ಪ್ರಾಕೃತ ಭಾಷೆಯ ಬೆಳವಣಿಗೆ ಹಾಗೂ ಅಭಿವೃದ್ಧಿಗೆ ಅನಿವಾಸಿಯರಿಂದ ‘ನಮ್ಮ ಊರು, ನಮ್ಮ ನಾಡು’ ಎಂಬ ಯೋಜನೆಯಲ್ಲಿ ಕೊಡುಗೆ ನಿರೀಕ್ಷಿಸಲಾಗಿದ್ದು, ಅವುಗಳಿಗೆ ವಿದೇಶಾಂಗ ಇಲಾಖೆ ಮೂಲಕ ರಿಯಾಯಿತಿ ಕೊಡಿಸಲಾಗುವುದು ಎಂದು ತಿಳಿಸಿದರು.