ಬೆಂಗಳೂರಲ್ಲೇ ನರಸಮ್ಮಗೆ ಚಿಕಿತ್ಸೆ ಮುಂದುವರಿಕೆ
ತುಮಕೂರು: ಶ್ವಾಸಕೋಶದಲ್ಲಿ ಸಮಸ್ಯೆ ಕಾಣಿಸಿಕೊಂಡು ಸೋಮವಾರ ಬೆಂಗಳೂರು ಕನ್ನಿಂಗ್ಯಾಮ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾದ ಸೂಲಗಿತ್ತಿ ನರಸಮ್ಮ ಅವರಿಗೆ ಅಲ್ಲಿಯೇ ಚಿಕಿತ್ಸೆ ಮುಂದುವರಿಸಲಾಗಿದೆ ಎಂದು ನರಸಮ್ಮ ಅವರ ಪುತ್ರ ಪಾವಗಡ ಶ್ರೀರಾಮ ತಿಳಿಸಿದ್ದಾರೆ.
ಈ ದಿನ ಚಿಕಿತ್ಸೆ ಪಡೆದು ಮತ್ತೆ ಸಂಜೆ ತುಮಕೂರಿನ ಆದರ್ಶ ನರ್ಸಿಂಗ್ ಹೋಮ್ ಗೆ ಕರೆದುಕೊಂಡು ಹೋಗುವ ಉದ್ದೇಶವಿತ್ತು. ಆದರೆ, ವೈದ್ಯರ ಸಲಹೆ ಮೇರೆಗೆ ಇಲ್ಲಿಯೇ ಚಿಕಿತ್ಸೆ ಮುಂದುವರಿಸಲಾಗಿದೆ ಎಂದು ತಿಳಿಸಿದರು.