ಪ್ರಕರಣದ ವಿವರ: ತಮಿಳುನಾಡಿನ ಸೆಂಥಿಲ್, ಕೆಲಸ ಹುಡುಕಿಕೊಂಡು ಪತ್ನಿ ರಾಣಿ ಹಾಗೂ ಮಗನ ಜತೆ ಬೆಂಗಳೂರಿಗೆ ಬಂದಿದ್ದ. ಸಂಜಯ
ನಗರದ ಸಂಜೀವಪ್ಪ ಕಾಲೊನಿಯಲ್ಲಿ ವಾಸವಿದ್ದ. ಪಿಯುಸಿಯಲ್ಲಿ ಉತ್ತೀರ್ಣರಾಗಿದ್ದ ರಾಣಿ, ಮದುವೆ ನಂತರ ಶಿಕ್ಷಣ ಮೊಟಕುಗೊಳಿಸಿದ್ದರು. ಪತ್ನಿಯನ್ನು ಶಿಕ್ಷಕಿಯನ್ನಾಗಿ ಮಾಡುವ ಕನಸು ಕಂಡಿದ್ದ ಸೆಂಥಿಲ್, ತಿರಪತ್ತೂರಿನ ಟಿ.ಸಿ.ಎಚ್ ಕಾಲೇಜಿಗೆ ಸೇರಿಸಿದ್ದ. ವ್ಯಾಸಂಗದ ವೇಳೆಯಲ್ಲಿ ರಾಣಿ ಅವರಿಗೆ ಸಹಪಾಠಿಯೊಬ್ಬರ ಪರಿಚಯವಾಗಿತ್ತು.