‘ಮುಖ್ಯಮಂತ್ರಿಯಾಗಿ ‘ರಾಜಧರ್ಮ’ ಪಾಲಿಸುವ ಮೂಲಕ ಐದು ವರ್ಷ ಸುಭದ್ರ ಆಡಳಿತ ನಡೆಸುತ್ತೇನೆ. ಈ ಬಗ್ಗೆ ಯಾರಿಗೂ ಅಪನಂಬಿಕೆ ಬೇಕಿಲ್ಲ. ಒಂದು ವರ್ಷ ಮಾತ್ರ ಮುಖ್ಯಮಂತ್ರಿ ಆಗಿರುತ್ತೇನೆ ಎಂದು ಹೇಳಿಲ್ಲ. ಆಡಳಿತ ನಡೆಸುವ ಸಂಬಂಧ ಎಲ್ಲೂ ಅಸಹಾಯಕತೆ ತೋರಿಸಿಲ್ಲ.ಮೈತ್ರಿ ಸರ್ಕಾರದ ಬಗ್ಗೆ ಇಲ್ಲಸಲ್ಲದ ಸುದ್ದಿಗಳನ್ನು ಹರಡಲಾಗುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.