ನಗರ ಹೊರವಲಯದ ಯರಮರಸ್ ಡಯಟ್ ಸಮೀಪ ಅಪಘಾತ ನಡೆದಿದೆ. ಕುಕನೂರಿನಲ್ಲಿ ಚಿಕ್ಕ ಹೋಟೆಲ್ ಇಟ್ಟುಕೊಂಡಿರುವ ಮಲ್ಲಿಕಾರ್ಜುನ ಹಾಗೂ ಹೊಲ-ಮನೆ ಕೆಲಸ ಮಾಡುವ ನರಸಮ್ಮ ದಂಪತಿ ಮಗನಾದ ಮಹೇಂದ್ರ ಪಿಯುಸಿ ಓದುತ್ತಿದ್ದ. ಓದಿನೊಂದಿಗೆ ಪ್ರತಿದಿನವೂ ತಮ್ಮ ಜಮೀನಿನಲ್ಲಿ ಬೆಳೆಯುವ ತರಕಾರಿಯನ್ನು ರಾಯಚೂರಿನ ತರಕಾರಿ ಮಾರಕಟ್ಟೆಯಲ್ಲಿ ಮಾರಾಟ ಮಾಡುತ್ತಿದ್ದ.