ಈ ಚಿತ್ರದಲ್ಲಿ ಚಂದನ್, ಐಶ್ವರ್ಯಾ ಇಬ್ಬರದೂ ಪತ್ರಕರ್ತರ ಪಾತ್ರ. ಅರ್ಜುನ್ ಸರ್ಜಾ ಅವರ ಪ್ರವೇಶದೊಂದಿಗೆ ಟ್ರೇಲರ್ ಆರಂಭವಾಗುತ್ತದೆ. ಪ್ರೀತಿ, ಪ್ರೇಮ, ಪ್ರೇಮಿಗಳ ಕಿತ್ತಾಟ, ಹಾಸ್ಯ ಎಲ್ಲವೂ ಈ ಚಿತ್ರದಲ್ಲಿರುವಂತೆ ಕಾಣುತ್ತದೆ. ಕೊನೆಯ ದೃಶ್ಯ ರೋಮಾಂಚನಕಾರಿಯಾಗಿದೆ. ಬೆಂಕಿಯುಂಡೆಯ ಮಧ್ಯದಿಂದ ಪಾರಾಗಿ ಚಂದನ್ ಹಾಗೂ ಐಶ್ವರ್ಯಾ ಓಡಿಬರುವ ದೃಶ್ಯ ನೋಡಿದರೆ ಚಿತ್ರದ ಕತೆಯ ಬಗ್ಗೆ ಕುತೂಹಲ ಹುಟ್ಟುತ್ತದೆ.