ಹಣ ಹಂಚಿಕೆ: ಜಿಲ್ಲೆಯ ಮಾಲೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ನೇತೃತ್ವದಲ್ಲಿ ನಡೆದ ಕಾಂಗ್ರೆಸ್ನ ರೋಡ್ ಶೋಗೆ ಬಂದಿದ್ದ ಜನರಿಗೆ ಪಕ್ಷದ ಮುಖಂಡರು ಹಣ ಹಂಚಿದರು. ಪ್ರತಿ ವ್ಯಕ್ತಿಗೆ ತಲಾ ₹ 300 ಕೊಟ್ಟು ರೋಡ್ ಶೋಗೆ ಕರೆದುಕೊಂಡು ಬರಲಾಗಿತ್ತು.ಅಲ್ಲದೇ, ನಿಯಮಬಾಹಿರವಾಗಿ ಮಕ್ಕಳನ್ನು ಕರೆತಂದು ಪ್ರಚಾರ ಮಾಡಿಸಲಾಯಿತು. ಮಕ್ಕಳು ಕಾಂಗ್ರೆಸ್ ಪಕ್ಷದ ಚಿಹ್ನೆ ಇರುವ ಟೋಪಿ ಧರಿಸಿ ಹಾಗೂ ಬಾವುಟ ಹಿಡಿದು ನರ್ತಿಸಿದರು.