ಶಿವಮೊಗ್ಗ: ಬಿಡುವಿಲ್ಲದ ಪ್ರಚಾರ ಮಧ್ಯೆಯೂ ಸೋಮವಾರ ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎಸ್.ಮಧು ಬಂಗಾರಪ್ಪ ಶಿಕಾರಿಪುರ ತಾಲ್ಲೂಕಿನ ಮುದ್ದನಹಳ್ಳಿಯಲ್ಲಿ ಮಕ್ಕಳ ಜತೆ ಕಬಡ್ಡಿ ಆಡಿ ಗಮನ ಸೆಳೆದರು.
ಮುದ್ದನಹಳ್ಳಿ ಗ್ರಾಮದ ದೇವಸ್ಥಾನದ ಅವರಣದ ಕಬಡ್ಡಿ ಅಂಕಣದಲ್ಲಿ ಮಕ್ಕಳು ಕಬಡ್ಡಿ ಆಡುತ್ತಿದ್ದರು. ಮತಯಾಚನೆಗೆ ಗ್ರಾಮಕ್ಕೆ ಬಂದಿದ್ದ ಅವರು ಸ್ವಲ್ಪ ಸಮಯ ಆಟವಾಡಿದರು. ಮಧು ಅವರ ಉತ್ಸಾಹ ಕಂಡ ಗ್ರಾಮಸ್ಥರು ಸಂತಸದ ಕಡಲಲ್ಲಿ ತೇಲಿದರು. ಜೈಕಾರ ಹಾಕಿ ಹುರಿದುಂಬಿಸಿದರು.