ಲಖನೌ:ಸಕ್ಕರೆ ಕಾರ್ಖಾನೆಗಳಿಂದ ರೈತರಿಗೆ ಬರಬೇಕಿರುವ ₹10 ಸಾವಿರ ಕೋಟಿ ಬಾಕಿಇದ್ದರೆ ಹೇಗೆ ತಾನೆ ರೈತರು ಸಂತೋಷದಿಂದ ಇರಲು ಸಾಧ್ಯ. ಸರ್ಕಾರ ಉತ್ತರ ಪ್ರದೇಶದ ರೈತರ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ. ರೈತ ವಿರೋಧಿಯಾಗಿದ್ದು, ಬಂಡವಾಳಶಾಹಿಗಳ ಪರವಾಗಿ ಕೆಲಸ ಮಾಡುತ್ತಿದೆ ಎಂದು ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಆರೋಪಿಸಿದರು.