ನರೇಂದ್ರ ಮೋದಿ ದೇಶದ ಪ್ರಧಾನಿಯಾದ ನಂತರ ಇಡೀ ವಿಶ್ವದಲ್ಲಿನ ಭಾರತೀಯರು ಹೆಮ್ಮೆಯಿಂದ ನಮ್ಮದು ಭಾರತ ಎಂದು ಹೇಳಿಕೊಳ್ಳುತ್ತಿದ್ದಾರೆ. ಪುಲ್ವಾಮ ಘಟನೆಯ ನಂತರ ಉಗ್ರರ ವಿರುದ್ಧ ತೆಗೆದುಕೊಂಡ ದಿಟ್ಟ ನಿರ್ಧಾರಗಳು ಮೋದಿ ಅವರ ಸಾಮರ್ಥ್ಯ ಸಾಬೀತು ಮಾಡಿವೆ. ಆದರೆ, ಕೆಲವರು ಮಾತ್ರ ಸಾಕ್ಷ್ಯ ಕೇಳುತ್ತಾ ಕುಳಿತಿದ್ದಾರೆಎಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.