ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾರಿ ಬಂದವರನ್ನು ದೂರವಿಡಿ: ವಯನಾಡ್ ಮತದಾರರಿಗೆ ನಿರ್ಮಲಾ ಸೀತಾರಾಮನ್ ಕರೆ

ಎನ್‌ಡಿಎ ಅಭ್ಯರ್ಥಿ ಪರ ಮತಯಾಚನೆ
Last Updated 21 ಏಪ್ರಿಲ್ 2019, 13:00 IST
ಅಕ್ಷರ ಗಾತ್ರ

ವಯನಾಡ್‌: ‘ದೆಹಲಿಯಿಂದ ಹಾರಿ ಬಂದವರನ್ನು ವಯನಾಡ್‌ನ ಜನರು ತಿರಸ್ಕರಿಸಬೇಕು’ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಮತದಾರರಲ್ಲಿ ಮನವಿ ಮಾಡಿದರು.

ವಯನಾಡ್‌ ಲೋಕಸಭಾ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ತುಷಾರ್‌ ವೆಳ್ಳಪಳ್ಳಿ ಅವರ ಪರವಾಗಿ ಭಾನುವಾರ ಪ್ರಚಾರ ರ್‍ಯಾಲಿ ನಡೆಸಿದ ಬಳಿಕ ಅವರು ಮಾತನಾಡಿದರು.

‘ಕೇರಳ ಕಳೆದ ವರ್ಷ ಭೀಕರ ನೆರೆಯನ್ನು ಎದುರಿಸಿತು. ರಾಜ್ಯ ಸರ್ಕಾರ ಸರಿಯಾದ ಸಮಯದಲ್ಲಿ ಅಣೆಕಟ್ಟೆಗಳ ಬಾಗಿಲನ್ನು ತೆರೆದಿರುತ್ತಿದ್ದರೆ ಈ ಅನಾಹುತವನ್ನು ತಡೆಯಬಹುದಾಗಿತ್ತು. ಆದರೆ ಸರ್ಕಾರ ಅದರಲ್ಲಿ ವಿಫಲವಾಯಿತು. ಈಗ ದೆಹಲಿಯಿಂದ ಹಾರಿಬಂದವರು ಇಲ್ಲಿ ಚುನಾವಣೆ ಎದುರಿಸುತ್ತಿದ್ದಾರೆ. ಜನರು ಇವರನ್ನು ತಿರಸ್ಕರಿಸಬೇಕು’ ಎಂದರು.

ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ವಯನಾಡ್‌ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದು ಅವರ ಸಹೋದರಿ ಪ್ರಿಯಾಂಕಾ ಅವರು ಇಲ್ಲಿಗೆ ಬಂದು ಸಹೋದರನ ಪರವಾಗಿ ಈಗಾಗಲೇ ಪ್ರಚಾರ ನಡೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT