ಧಾರವಾಡ: ಸಮ್ಮೇಳನದಲ್ಲಿ ಧಾರವಾಡ ಕೇಂದ್ರ ಕಾರಾಗೃಹದ ಮಳಿಗೆ.ಗಮನ ಸೆಳೆಯುತ್ತಿದ್ದು, ಇದರಲ್ಲಿನ ಕರಕುಶಲ ವಸ್ತುಗಳನ್ನು ಮಹಿಳಾ ಮತ್ತು ಪುರುಷ ಖೈದಿಗಳು ಸಿದ್ಧಪಡಿಸಿರುವುದು ವಿಶೇಷ.
ಈ ಮಳಿಗೆಗಳಲ್ಲಿ ಗೃಹಾಲಂಕಾರಿ ವಸ್ತುಗಳು, ಕನ್ನಡ ಬಾವುಟಗಳು, ಕೆಂಪು- ಹಳದಿ ಬಣ್ಣದ ಶಾಲ್ಗಳು, ಕಿನ್ನಾಳ ಕಲೆಯ ವಸ್ತುಗಳು, ಮಹಿಳೆಯರ ಅಲಂಕಾರಿಕ ವಸ್ತುಗಳ ಪ್ರದರ್ಶನ ಮತ್ತು ಮಾರಾಟವನ್ನು ಕೇಂದ್ರ ಕಾರಾಗ್ರಹದ ಅಧೀಕ್ಷಕಿ ಡಾ. ಅನಿತಾ ನೇತ್ರತ್ವದಲ್ಲಿ ಏರ್ಪಡಿಸಲಾಗಿದೆ.
ಸಾರ್ವಜನಿಕರಿಂದ ಖೈದಿಗಳ ಮಳಿಗೆಗೆ ಉತ್ತಮ ಪ್ರತಿಕ್ರಿಯೆ ದೊರೆತಿದೆ.