<p>ಕವಿ ಕಾಳಿದಾಸ ಅದೆಲ್ಲಿಗೋ ಹೋದಾಗ ಅದ್ಯಾರೋ ರಾಜ ಅವನಿಗೆ ಒಗಟಿನ ರೂಪದಲ್ಲಿ ಅರ್ಧ ಪದ್ಯವೊಂದನ್ನು ಕೊಟ್ಟು, ಆ ಪದ್ಯವನ್ನು ಪೂರ್ತಿ ಮಾಡಲು ಹೇಳಿದನಂತೆ.<br /> `ಕಮಲೇ ಕಮಲೋತ್ಪತ್ತಿಃ<br /> ಶ್ರೂಯತೇ ನ ತು ದೃಶ್ಯತೇ~<br /> (ಕಮಲದೊಳಗೆ ಕಮಲ ಇದೆಯೆಂದು ಕೇಳಿದ್ದೇನೆ, ಆದರೆ ಕಂಡಿಲ್ಲ).<br /> <br /> ಇದು ರಾಜ ಕೊಟ್ಟ ಅರ್ಧ ಪದ್ಯ. ಕಾಳಿದಾಸ ಅದನ್ನು ಈ ರೀತಿ ಪೂರ್ತಿ ಮಾಡಿದನಂತೆ.<br /> `ಬಾಲೇ, ತವ ಮುಖಾಂಭೋಜೇ<br /> ದೃಶ್ಯದ್ವೇ ಇಂದೀವರದ್ವಯಂ~<br /> (ಬಾಲಿಕೆಯೇ, ನಿನ್ನ ಮುಖಕಮಲದಲ್ಲಿ ಕಣ್ಣುಗಳೆಂಬ ಎರಡು ಕಮಲಗಳು ಕಾಣಿಸುತ್ತಿವೆ).<br /> ರಾಜಾ ಖುಷ್ ಹುವಾ. ಆದರೆ ಯಡ್ಯೂರಪ್ಪಾ ಖುಷ್ ನಹೀ ಹುವಾ.<br /> <br /> ಕಮಲದೊಳಗಿದ್ದುಕೊಂಡೇ ಸೈಕಲ್ ಸವಾರಿ ಮಾಡಲಾರಂಭಿಸಿರುವ ಬೂಸಿಯ ಅವರದು ಬಿಜೆಪಿಯೊಳಗೊಂದು ಕೆಜೆಪಿಯಾಗಿರುವುದರಿಂದ ಇದೂ ಒಂಥರಾ `ಕಮಲೇ ಕಮಲೋತ್ಪತ್ತಿ~ಯೇ. ಬೇಕಾದರೆ ಇದನ್ನು `ಕಮಲೇ ಕಮಾಲೋತ್ಪತ್ತಿ~ ಎನ್ನಬಹುದು. <br /> <br /> ಈ ರೀತಿ `ನೀ ಮಾಯೆಯೊಳಗೋ, ನಿನ್ನೊಳು ಮಾಯೆಯೋ~ ಎಂಬ ಮಾಯಾಜಾಲದಲ್ಲಿ ಸಿಲುಕಿರುವ ಬಿಎಸ್ವೈ ಅವರಾಗಲೀ, `ಬಯಲು ಆಲಯದೊಳಗೊ, ಆಲಯವು ಬಯಲೊಳಗೊ~ ಎಂದು ತಿಳಿಯದಂತಾಗಿರುವ ಕೇಸೀಶ್ವರಪ್ಪ ಅವರಾಗಲೀ ಈಚಿನ ದಿನಗಳಲ್ಲಿ ಸರ್ವಥಾ ಸವಿನಿದ್ದೆ ಮಾಡಿರಲಿಕ್ಕಿಲ್ಲ. <br /> <br /> ಶೆಟ್ಟರಂತೂ, `ಜಗದೀಶನನ್ನಾಡಿಸುವಾ ಜಗಳವೇ ನಾಟಕರಂಗ~ ಎಂದು ಸ್ವಯಂರೂಪಾಂತರಿತ ಕನ್ನಡ ಶ್ಲೋಕ ಅಥವಾ ಗೀತೆ ಅಥವಾ ಕನ್ನಡ ಶೋಕಗೀತೆ ಹಾಡುತ್ತ, `ಇನ್ನೂ ಯಾಕ ಬರಲಿಲ್ಲಾವ~ ಎಂದು ಆಪದ್ಬಾಂಧವ-ಅನಾಥ (ಪ್ರಜ್ಞೆ ಹೊಂದಿದವನ) ರಕ್ಷಕ ಭಗವಂತನನ್ನು ನೆನೆಯುತ್ತ ಥೇಟ್ `ಹುಬ್ಬಳ್ಳಿಯಾಂವ~ ಆಗಿ (ಕಮಲದ)ಹೂ ಹಿಡಿದು ನಿಂತಿದ್ದಾರೆ (ಭಗವಂತ ಬಂದರೆ ಏರಿಸಲು).<br /> <br /> ಇಂತಹ ವಿಚಿತ್ರ-ವಿಷಯ- ವಿಕಟ-ವಿಕ್ಷಿಪ್ತ-ವಿಭ್ರಾಂತ ಸನ್ನಿವೇಶದಲ್ಲಿ ಡೋಹಣಗೇರಿ ಪಟ್ಟಣದ ರಾಜಕೀಯೇತರ ಸಂಘಟನೆಯೊಂದು ರಸಪ್ರಶ್ನೆ ಸ್ಪರ್ಧೆಯನ್ನು ಏರ್ಪಡಿಸಿತ್ತು. ಈ ಕೆಳಗಿನ ಪ್ರಶ್ನೆಗಳಿಗೆ ತಲಾ ನಾಲ್ಕು ಉತ್ತರಗಳಿದ್ದು ಸ್ಪರ್ಧಿಯು ಸರಿ ಉತ್ತರವನ್ನು ಬರೆಯಬೇಕಾಗಿತ್ತು. `ಕರೋಡ್ಪತಿ, ಕೋಟ್ಯಾಧಿಪತಿ~ ಕಾರ್ಯಕ್ರಮಗಳಲ್ಲಿರುವಂತೆ ಯಾವ ಲೈಫ್ಲೈನೂ ಇಲ್ಲಿ ಇರಲಿಲ್ಲ. ಸ್ಪರ್ಧಿಗಳನ್ನು ಲೈನಾಗಿ ಕೂರಿಸಿ, ಲೈನ್ ಹಾಕಿದ ಖಾಲಿಹಾಳೆಯನ್ನು ಅವರ ಕೈಗೆ ಕೊಡಲಾಗಿತ್ತು, ಅಷ್ಟೆ. ಪ್ರಶ್ನೆಗಳೂ ಉತ್ತರಗಳೂ ಹೀಗಿದ್ದವು.<br /> <br /> <strong>* ಬಿಜೆಪಿಯೊಳಗೆ ಕೆಜೆಪಿ. ಇದು ಸರಿಯೇ? ನ್ಯಾಯಬದ್ಧವೇ?<br /> </strong>1. ಹೌದು.<br /> 2. ಅಲ್ಲ.<br /> 3. ಭಾಗಶಃ ಹೌದು.<br /> 4. ನಿಮ್ಮದೇ ಉತ್ತರ ಬರೆಯಿರಿ.<br /> <br /> <strong>* ಯಡಿಯೂರಪ್ಪನವರ ಮೇಲೆ ಇನ್ನೂ ಶಿಸ್ತುಕ್ರಮ ಕೈಗೊಳ್ಳದಿರುವುದು ಶಿಸ್ತಿನ ಪಕ್ಷ ತಾನೆಂದು ಹೇಳಿಕೊಳ್ಳುತ್ತಿರುವ ಬಿಜೆಪಿಗೆ ಅಂಟಿದ ಕಳಂಕವಲ್ಲವೆ?</strong><br /> 1. ಹೌದು.<br /> 2. ಅಲ್ಲ.<br /> 3. ಭಾಗಶಃ ಹೌದು.<br /> 4. ನಿಮ್ಮದೇ ಉತ್ತರ ಬರೆಯಿರಿ.<br /> <br /> <strong>* ಕೆಜೆಪಿ ಸ್ಥಾಪನೆ ಕುರಿತು ಸಮಾಲೋಚಿಸಲು ಬಿಎಸ್ವೈ ಕರೆದ ಮೀಟಿಂಗ್ಗೆ ಬಿಜೆಪಿಯ ಕೆಲವು ಮಂತ್ರಿಗಳು ಹೋಗಿದ್ದಾಗ್ಯೂ ಅವರ ವಿರುದ್ಧ ಬಿಜೆಪಿಯು ಕ್ರಮ ಕೈಗೊಳ್ಳದಿರುವುದು ತಪ್ಪಲ್ಲವೆ?</strong><br /> 1. ಹೌದು.<br /> 2. ಅಲ್ಲ.<br /> 3. ಭಾಗಶಃ ಹೌದು.<br /> 4. ನಿಮ್ಮದೇ ಉತ್ತರ ಬರೆಯಿರಿ.<br /> <br /> <strong>* ಸೈಕಲ್ಲು ಕಮಲವನ್ನು ಹೊಸಕಿಹಾಕುತ್ತದೆ. ಸೈಕಲ್ ಸವಾರನ ಕಿವಿಗೆ (ಕಮಲದ) ಹೂ ಇಡಲಾಗುತ್ತದೆ. ಸೈಕಲ್ಲು, ಕಮಲ ಎರಡೂ ಮಣ್ಣು ಮುಕ್ಕುತ್ತವೆ.</strong><br /> 1. ಮೊದಲನೇ ಹೇಳಿಕೆ ನಿಜವಾಗುತ್ತದೆ.<br /> 2. ಎರಡನೇ ಹೇಳಿಕೆ ನಿಜವಾಗುತ್ತದೆ.<br /> 3. ಮೂರನೇ ಹೇಳಿಕೆ ನಿಜವಾಗುತ್ತದೆ.<br /> 4. ನಿಮ್ಮದೇ ಉತ್ತರ ಬರೆಯಿರಿ.<br /> <strong><br /> * ಇಬ್ಬರ ಜಗಳ, ಮೂರನೆಯವನಿಗೆ ಲಾಭ. ಇಬ್ಬರ ಜಗಳ, ಮೂರನೆಯವನಿಗೆ ನಷ್ಟ. ಇಬ್ಬರ ಜಗಳ, ಮೂರನೆಯವನಿಗೂ ನಷ್ಟ (ಹೀಗಾದರೆ ಕಷ್ಟ).</strong><br /> 1.ಮೊದಲನೇ ಗಾದೆ ನಿಜವಾಗುತ್ತದೆ.<br /> 2. ಎರಡನೇ ಗಾದೆ ನಿಜವಾಗುತ್ತದೆ.<br /> 3. ಮೂರನೇ ಗಾದೆ ನಿಜವಾಗುತ್ತದೆ.<br /> 4. ನಿಮ್ಮದೇ ಉತ್ತರ ಬರೆಯಿರಿ.<br /> <br /> ಈ ಪಂಚ ಪ್ರಶ್ನೆಗಳಿಗೆ ಪಾಂಚ್ ಸೌ ಮಂದಿ ಉತ್ತರಿಸಿದ್ದರು. ಬಹುಮಾನ ಬಂದದ್ದು ಏಕಮೇವಾದ್ವಿತೀಯ ಉತ್ತರಭೂಪನಾದಂಥ ತೆಪರನಿಗೆ. (ಸ್ಪರ್ಧೆಯ ದಿನ `ಫುಲ್~ ಫಾರ್ಮ್ನಲ್ಲಿದ್ದ ತೆಪರನ ಫುಲ್ಫಾರ್ಮ್, ತೆರದೂರು ಪರಪ್ಪ ರವಣಪ್ಪ). ತೆಪರನು ಅವನದೇ ಉತ್ತರ ಬರೆದಿದ್ದ. ವಿಶೇಷವೆಂದರೆ, ಐದೂ ಪ್ರಶ್ನೆಗಳಿಗೂ ಒಂದೇ ಉತ್ತರ ಬರೆದಿದ್ದ! ಅದು ಹೀಗಿತ್ತು.<br /> `ಯಲಕ್ಷನ್ ಬರ್ಲಿ, ಯಲ್ಲ ಗೊತ್ತಾಕ್ಕತಿ~.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕವಿ ಕಾಳಿದಾಸ ಅದೆಲ್ಲಿಗೋ ಹೋದಾಗ ಅದ್ಯಾರೋ ರಾಜ ಅವನಿಗೆ ಒಗಟಿನ ರೂಪದಲ್ಲಿ ಅರ್ಧ ಪದ್ಯವೊಂದನ್ನು ಕೊಟ್ಟು, ಆ ಪದ್ಯವನ್ನು ಪೂರ್ತಿ ಮಾಡಲು ಹೇಳಿದನಂತೆ.<br /> `ಕಮಲೇ ಕಮಲೋತ್ಪತ್ತಿಃ<br /> ಶ್ರೂಯತೇ ನ ತು ದೃಶ್ಯತೇ~<br /> (ಕಮಲದೊಳಗೆ ಕಮಲ ಇದೆಯೆಂದು ಕೇಳಿದ್ದೇನೆ, ಆದರೆ ಕಂಡಿಲ್ಲ).<br /> <br /> ಇದು ರಾಜ ಕೊಟ್ಟ ಅರ್ಧ ಪದ್ಯ. ಕಾಳಿದಾಸ ಅದನ್ನು ಈ ರೀತಿ ಪೂರ್ತಿ ಮಾಡಿದನಂತೆ.<br /> `ಬಾಲೇ, ತವ ಮುಖಾಂಭೋಜೇ<br /> ದೃಶ್ಯದ್ವೇ ಇಂದೀವರದ್ವಯಂ~<br /> (ಬಾಲಿಕೆಯೇ, ನಿನ್ನ ಮುಖಕಮಲದಲ್ಲಿ ಕಣ್ಣುಗಳೆಂಬ ಎರಡು ಕಮಲಗಳು ಕಾಣಿಸುತ್ತಿವೆ).<br /> ರಾಜಾ ಖುಷ್ ಹುವಾ. ಆದರೆ ಯಡ್ಯೂರಪ್ಪಾ ಖುಷ್ ನಹೀ ಹುವಾ.<br /> <br /> ಕಮಲದೊಳಗಿದ್ದುಕೊಂಡೇ ಸೈಕಲ್ ಸವಾರಿ ಮಾಡಲಾರಂಭಿಸಿರುವ ಬೂಸಿಯ ಅವರದು ಬಿಜೆಪಿಯೊಳಗೊಂದು ಕೆಜೆಪಿಯಾಗಿರುವುದರಿಂದ ಇದೂ ಒಂಥರಾ `ಕಮಲೇ ಕಮಲೋತ್ಪತ್ತಿ~ಯೇ. ಬೇಕಾದರೆ ಇದನ್ನು `ಕಮಲೇ ಕಮಾಲೋತ್ಪತ್ತಿ~ ಎನ್ನಬಹುದು. <br /> <br /> ಈ ರೀತಿ `ನೀ ಮಾಯೆಯೊಳಗೋ, ನಿನ್ನೊಳು ಮಾಯೆಯೋ~ ಎಂಬ ಮಾಯಾಜಾಲದಲ್ಲಿ ಸಿಲುಕಿರುವ ಬಿಎಸ್ವೈ ಅವರಾಗಲೀ, `ಬಯಲು ಆಲಯದೊಳಗೊ, ಆಲಯವು ಬಯಲೊಳಗೊ~ ಎಂದು ತಿಳಿಯದಂತಾಗಿರುವ ಕೇಸೀಶ್ವರಪ್ಪ ಅವರಾಗಲೀ ಈಚಿನ ದಿನಗಳಲ್ಲಿ ಸರ್ವಥಾ ಸವಿನಿದ್ದೆ ಮಾಡಿರಲಿಕ್ಕಿಲ್ಲ. <br /> <br /> ಶೆಟ್ಟರಂತೂ, `ಜಗದೀಶನನ್ನಾಡಿಸುವಾ ಜಗಳವೇ ನಾಟಕರಂಗ~ ಎಂದು ಸ್ವಯಂರೂಪಾಂತರಿತ ಕನ್ನಡ ಶ್ಲೋಕ ಅಥವಾ ಗೀತೆ ಅಥವಾ ಕನ್ನಡ ಶೋಕಗೀತೆ ಹಾಡುತ್ತ, `ಇನ್ನೂ ಯಾಕ ಬರಲಿಲ್ಲಾವ~ ಎಂದು ಆಪದ್ಬಾಂಧವ-ಅನಾಥ (ಪ್ರಜ್ಞೆ ಹೊಂದಿದವನ) ರಕ್ಷಕ ಭಗವಂತನನ್ನು ನೆನೆಯುತ್ತ ಥೇಟ್ `ಹುಬ್ಬಳ್ಳಿಯಾಂವ~ ಆಗಿ (ಕಮಲದ)ಹೂ ಹಿಡಿದು ನಿಂತಿದ್ದಾರೆ (ಭಗವಂತ ಬಂದರೆ ಏರಿಸಲು).<br /> <br /> ಇಂತಹ ವಿಚಿತ್ರ-ವಿಷಯ- ವಿಕಟ-ವಿಕ್ಷಿಪ್ತ-ವಿಭ್ರಾಂತ ಸನ್ನಿವೇಶದಲ್ಲಿ ಡೋಹಣಗೇರಿ ಪಟ್ಟಣದ ರಾಜಕೀಯೇತರ ಸಂಘಟನೆಯೊಂದು ರಸಪ್ರಶ್ನೆ ಸ್ಪರ್ಧೆಯನ್ನು ಏರ್ಪಡಿಸಿತ್ತು. ಈ ಕೆಳಗಿನ ಪ್ರಶ್ನೆಗಳಿಗೆ ತಲಾ ನಾಲ್ಕು ಉತ್ತರಗಳಿದ್ದು ಸ್ಪರ್ಧಿಯು ಸರಿ ಉತ್ತರವನ್ನು ಬರೆಯಬೇಕಾಗಿತ್ತು. `ಕರೋಡ್ಪತಿ, ಕೋಟ್ಯಾಧಿಪತಿ~ ಕಾರ್ಯಕ್ರಮಗಳಲ್ಲಿರುವಂತೆ ಯಾವ ಲೈಫ್ಲೈನೂ ಇಲ್ಲಿ ಇರಲಿಲ್ಲ. ಸ್ಪರ್ಧಿಗಳನ್ನು ಲೈನಾಗಿ ಕೂರಿಸಿ, ಲೈನ್ ಹಾಕಿದ ಖಾಲಿಹಾಳೆಯನ್ನು ಅವರ ಕೈಗೆ ಕೊಡಲಾಗಿತ್ತು, ಅಷ್ಟೆ. ಪ್ರಶ್ನೆಗಳೂ ಉತ್ತರಗಳೂ ಹೀಗಿದ್ದವು.<br /> <br /> <strong>* ಬಿಜೆಪಿಯೊಳಗೆ ಕೆಜೆಪಿ. ಇದು ಸರಿಯೇ? ನ್ಯಾಯಬದ್ಧವೇ?<br /> </strong>1. ಹೌದು.<br /> 2. ಅಲ್ಲ.<br /> 3. ಭಾಗಶಃ ಹೌದು.<br /> 4. ನಿಮ್ಮದೇ ಉತ್ತರ ಬರೆಯಿರಿ.<br /> <br /> <strong>* ಯಡಿಯೂರಪ್ಪನವರ ಮೇಲೆ ಇನ್ನೂ ಶಿಸ್ತುಕ್ರಮ ಕೈಗೊಳ್ಳದಿರುವುದು ಶಿಸ್ತಿನ ಪಕ್ಷ ತಾನೆಂದು ಹೇಳಿಕೊಳ್ಳುತ್ತಿರುವ ಬಿಜೆಪಿಗೆ ಅಂಟಿದ ಕಳಂಕವಲ್ಲವೆ?</strong><br /> 1. ಹೌದು.<br /> 2. ಅಲ್ಲ.<br /> 3. ಭಾಗಶಃ ಹೌದು.<br /> 4. ನಿಮ್ಮದೇ ಉತ್ತರ ಬರೆಯಿರಿ.<br /> <br /> <strong>* ಕೆಜೆಪಿ ಸ್ಥಾಪನೆ ಕುರಿತು ಸಮಾಲೋಚಿಸಲು ಬಿಎಸ್ವೈ ಕರೆದ ಮೀಟಿಂಗ್ಗೆ ಬಿಜೆಪಿಯ ಕೆಲವು ಮಂತ್ರಿಗಳು ಹೋಗಿದ್ದಾಗ್ಯೂ ಅವರ ವಿರುದ್ಧ ಬಿಜೆಪಿಯು ಕ್ರಮ ಕೈಗೊಳ್ಳದಿರುವುದು ತಪ್ಪಲ್ಲವೆ?</strong><br /> 1. ಹೌದು.<br /> 2. ಅಲ್ಲ.<br /> 3. ಭಾಗಶಃ ಹೌದು.<br /> 4. ನಿಮ್ಮದೇ ಉತ್ತರ ಬರೆಯಿರಿ.<br /> <br /> <strong>* ಸೈಕಲ್ಲು ಕಮಲವನ್ನು ಹೊಸಕಿಹಾಕುತ್ತದೆ. ಸೈಕಲ್ ಸವಾರನ ಕಿವಿಗೆ (ಕಮಲದ) ಹೂ ಇಡಲಾಗುತ್ತದೆ. ಸೈಕಲ್ಲು, ಕಮಲ ಎರಡೂ ಮಣ್ಣು ಮುಕ್ಕುತ್ತವೆ.</strong><br /> 1. ಮೊದಲನೇ ಹೇಳಿಕೆ ನಿಜವಾಗುತ್ತದೆ.<br /> 2. ಎರಡನೇ ಹೇಳಿಕೆ ನಿಜವಾಗುತ್ತದೆ.<br /> 3. ಮೂರನೇ ಹೇಳಿಕೆ ನಿಜವಾಗುತ್ತದೆ.<br /> 4. ನಿಮ್ಮದೇ ಉತ್ತರ ಬರೆಯಿರಿ.<br /> <strong><br /> * ಇಬ್ಬರ ಜಗಳ, ಮೂರನೆಯವನಿಗೆ ಲಾಭ. ಇಬ್ಬರ ಜಗಳ, ಮೂರನೆಯವನಿಗೆ ನಷ್ಟ. ಇಬ್ಬರ ಜಗಳ, ಮೂರನೆಯವನಿಗೂ ನಷ್ಟ (ಹೀಗಾದರೆ ಕಷ್ಟ).</strong><br /> 1.ಮೊದಲನೇ ಗಾದೆ ನಿಜವಾಗುತ್ತದೆ.<br /> 2. ಎರಡನೇ ಗಾದೆ ನಿಜವಾಗುತ್ತದೆ.<br /> 3. ಮೂರನೇ ಗಾದೆ ನಿಜವಾಗುತ್ತದೆ.<br /> 4. ನಿಮ್ಮದೇ ಉತ್ತರ ಬರೆಯಿರಿ.<br /> <br /> ಈ ಪಂಚ ಪ್ರಶ್ನೆಗಳಿಗೆ ಪಾಂಚ್ ಸೌ ಮಂದಿ ಉತ್ತರಿಸಿದ್ದರು. ಬಹುಮಾನ ಬಂದದ್ದು ಏಕಮೇವಾದ್ವಿತೀಯ ಉತ್ತರಭೂಪನಾದಂಥ ತೆಪರನಿಗೆ. (ಸ್ಪರ್ಧೆಯ ದಿನ `ಫುಲ್~ ಫಾರ್ಮ್ನಲ್ಲಿದ್ದ ತೆಪರನ ಫುಲ್ಫಾರ್ಮ್, ತೆರದೂರು ಪರಪ್ಪ ರವಣಪ್ಪ). ತೆಪರನು ಅವನದೇ ಉತ್ತರ ಬರೆದಿದ್ದ. ವಿಶೇಷವೆಂದರೆ, ಐದೂ ಪ್ರಶ್ನೆಗಳಿಗೂ ಒಂದೇ ಉತ್ತರ ಬರೆದಿದ್ದ! ಅದು ಹೀಗಿತ್ತು.<br /> `ಯಲಕ್ಷನ್ ಬರ್ಲಿ, ಯಲ್ಲ ಗೊತ್ತಾಕ್ಕತಿ~.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>