<p>ಕನ್ನಡ ಚಿತ್ರರಂಗದ ಕ್ಲಾಸಿಕ್ಗಳಲ್ಲಿ ಒಂದಾಗಿರುವ ‘ಸಾಕ್ಷಾತ್ಕಾರ’ ಸಿನಿಮಾದಲ್ಲಿ ಪ್ರೇಕ್ಷಕರ ಹೃದಯವೇ ಕರಗಿ ಮರುಗುವಂಥ ಮನೋಜ್ಞ ಅಭಿನಯ ನೀಡಿದ್ದವರು ಡಾ.ರಾಜಕುಮಾರ್. ಆ ಸಿನಿಮಾ ಬಿಡುಗಡೆಯಾಗಿ ಹತ್ತು ವರ್ಷದ ಬಳಿಕ, ಆ ಪದದ ಅರ್ಥದಲ್ಲಿ ತಮ್ಮನ್ನು ತಾವೇ ಕಂಡುಕೊಂಡರು! ಹಾಗಾದರೆ, ಅಷ್ಟು ಸುದೀರ್ಘ ಅವಧಿಯ ಬಳಿಕ ಅವರಿಗೆ ಪದದ ಅರ್ಥ ಸಿಕ್ಕಿದ್ದಾದರೂ ಹೇಗೆ?</p>.<p>ಸಿನಿಮಾ ಶೂಟಿಂಗ್ ಆರಂಭವಾದಂದಿನಿಂದಲೂ ‘ಸಾಕ್ಷಾತ್ಕಾರ’ ಎಂದರೆ ಏನು ಎಂದು ಅವರು ಅರ್ಥಕ್ಕಾಗಿ ಹುಡುಕಾಡುತ್ತಿದ್ದರೆನಿಸುತ್ತದೆ. ಅದಕ್ಕೆ ಸರಿಯಾದ ಉತ್ತರ ಕೊಟ್ಟವರು ಯಾರು ಗೊತ್ತೆ? ಆಗ ಪ್ರಸಿದ್ಧ ಗೀತರಚನೆಕಾರರು, ನಿರ್ದೇಶಕರೂ ಆಗಿದ್ದ ಕಣಗಾಲ್ ಪ್ರಭಾಕರಶಾಸ್ತ್ರಿ.</p>.<p>ಅಂದ ಹಾಗೆ, ಈ ಪ್ರಶ್ನೆ ಕೇಳಿದ ರಾಜ್ ಅವರ ಹುಟ್ಟೂರಾದ ಗಾಜನೂರಿಗೂ, ಶಾಸ್ತ್ರಿಗಳ ಹುಟ್ಟೂರಾದ ಮೈಸೂರಿನ ಪಿರಿಯಾಪಟ್ಟಣದ ಕಣಗಾಲಿಗೂ ಸುಮಾರು 150 ಕಿಮೀ ಅಂತರ. ಮೈಸೂರಿನ ಪ್ರದೇಶದವರೇ ಆಗಿದ್ದ ಈ ಇಬ್ಬರ ವಯಸ್ಸು ಆ ಪ್ರಶ್ನೋತ್ತರ ಮೂಡಿದ ಹೊತ್ತಲ್ಲಿ ಒಂದೇ ಆಗಿತ್ತು. ಇಬ್ಬರೂ 34ರ ಹರೆಯದವರಾಗಿದ್ದರು. ಇದನ್ನು ಕಣಗಾಲಿಗೂ ಮೈಸೂರಿಗೂ ನಡುವೆ ಏರ್ಪಟ್ಟ ವಿಶೇಷ ಬಾಂಧವ್ಯ ಎನ್ನಲೂಬಹುದು.</p>.<p>ತಮಿಳುನಾಡಿನ ಗಾಜನೂರು, ಮೈಸೂರು ಭಾಗದ ಗಡಿಪ್ರದೇಶ. ಗಾಜನೂರು ಎಂದರೆ ಅದು ತಮಿಳುನಾಡಿನ ನೆಲವೆಂಬುದಕ್ಕಿಂತಲೂ, ಕರ್ನಾಟಕದ್ದೇ, ಮೈಸೂರಿನದ್ದೇ ನೆಲವೆನ್ನುವಷ್ಟರ ಮಟ್ಟಿಗೆ ಅದಕ್ಕೆ ಪ್ರಖ್ಯಾತಿ, ಕನ್ನಡತನವನ್ನು ತಂದುಕೊಟ್ಟ ಅಪ್ರತಿಮ ಕನ್ನಡಾಭಿಮಾನಿ ಡಾ.ರಾಜ್, ಪದ ಮತ್ತು ಪದಾರ್ಥಗಳ ವಿಚಾರದಲ್ಲಿ ಅಪ್ರತಿಮ ಕುತೂಹಲಿಯಾಗಿದ್ದರು ಎಂಬುದನ್ನು ಅವರ ಚಡಪಡಿಕೆ ಸೂಚಿಸುತ್ತದೆ. </p> <h2><strong>ಅರ್ಥ ಹೇಳಿದ ಗುರು: </strong></h2><p>‘ಭಾವಶಿಲ್ಪಿ ನಿರ್ದೇಶಕ’ ಎಂದೇ ಹೆಸರಾಗಿದ್ದ ಪುಟ್ಟಣ್ಣ ಕಣಗಾಲ್ ನಿರ್ದೇಶನದಲ್ಲಿ ಡಾ.ರಾಜ್ ಅಭಿನಯಿಸಿದ ಮೂರನೇ ಮತ್ತು ಕೊನೆಯ ಸಿನಿಮಾ ‘ಸಾಕ್ಷಾತ್ಕಾರ’. ಅದು ಬಿಡುಗಡೆಯಾಗಿದ್ದು 1971ರಲ್ಲಿ. ಸಿನಿಮಾ ಜನಪ್ರಿಯವಾಗಿ, ಜನರ ನಾಲಿಗೆಯ ಮೇಲೆ ಅದರ ಹಾಡುಗಳು ನಲಿದಾಡಿ, ದುಃಖಾಂತ್ಯ ಮನಗಳನ್ನು ಕಲಕಿ, ಹತ್ತು ವರ್ಷಗಳಾದ ಬಳಿಕ 1982ರಲ್ಲಿ ಡಾ.ರಾಜ್ ಅವರು ಪ್ರಸಿದ್ಧ ಗೀತರಚನೆಕರಾರರಾಗಿದ್ದ ಪ್ರಭಾಕರಶಾಸ್ತ್ರಿಯವರನ್ನು ಅರ್ಥದ ಕುರಿತು ಕೇಳಿದ್ದರು. ಶಾಸ್ತ್ರಿಗಳು ಕಣಗಾಲ್ ಪುಟ್ಟಣ್ಣನವರ ಅಣ್ಣ. ಕನ್ನಡ ಚಿತ್ರರಂಗದಲ್ಲಿ ಈ ಇಬ್ಬರು ಸಹೋದರರು ತೋರಿದ ಪ್ರತಿಭಾ ವಿಲಾಸದ ತೌಲನಿಕ ವಿಶ್ಲೇಷಣೆಯೂ ಅಗತ್ಯವಿದೆ.</p> <p>ರಾಜ್ ಅವರ ಪ್ರಶ್ನೆಗೆ, ‘ಅಮೂರ್ತ ಭಾವನೆಯ ಮೂರ್ತ ರೂಪವೇ ಸಾಕ್ಷಾತ್ಕಾರ’ ಎಂದು ಉತ್ತರಿಸಿದ್ದ ಶಾಸ್ತ್ರಿಯವರು, ‘ನೀವು ಕಲಾದೇವಿಯ ಸಾಕ್ಷಾತ್ಕಾರ’ ಎಂದು ರಾಜ್ ಅವರನ್ನೇ ‘ಸಾಕ್ಷಾತ್ಕಾರ’ ಎಂಬುದಕ್ಕೆ ಉದಾಹರಣೆಯನ್ನಾಗಿಸಿದ್ದರು! </p> <p>ಇದು, ಪ್ರಶ್ನೆ ಕೇಳಿದವರನ್ನೇ ಉತ್ತರವಾಗಿಸುವ ಪರಿ. ಪ್ರಶ್ನೆಯೂ, ಉತ್ತರವೂ ಒಬ್ಬರಲ್ಲೇ ಸಂಯೋಗಗೊಂಡಂಥ ಸ್ಥಿತಿ. ಪ್ರಶ್ನೆ ಕೇಳಿದವರ ವ್ಯಕ್ತಿತ್ವದಲ್ಲೇ ಉತ್ತರವನ್ನು ಕಾಣುವ ಅಪರೂಪದ ಔದಾರ್ಯದ ಮಾದರಿ. ಇದು ವ್ಯಕ್ತಿತ್ವದ ವಿಶ್ಲೇಷಣೆಗೂ ಮಾದರಿಯೇ. ಇಂಥದ್ದು ಅಪರೂಪದಲ್ಲಿ ಅಪರೂಪ.</p> <p>ಹಾಗೆ ಹೇಳುವ ಮೂಲಕ ಶಾಸ್ತ್ರಿ ಅವರು ರಾಜ್ ಅವರಿಗೆ ಆ ಪದದ ಅರ್ಥವನ್ನೂ ಹೇಳಿದ್ದರು. ಕಲಾವಿದನಾಗಿ ರಾಜ್ ಸ್ವತಃ ಅದಕ್ಕೆ ಅನ್ವರ್ಥನಾಮವಾಗಿದ್ದರು ಎಂದೂ ಹೇಳಿದ್ದರು. ಅವರ ಮಾತು ಕೇಳಿದ ಡಾ.ರಾಜ್, ಗಳಗಳನೆ ಅತ್ತು, ‘ನನ್ನ ಜನ್ಮ ಪಾವನವಾಯಿತು. ಪುರುಷ ಸರಸ್ವತಿಯೇ ಇಂದು ನನ್ನನ್ನು ಆದರಿಸಿತು’ ಎಂದು ಧನ್ಯತೆ, ಕೃತಜ್ಞತೆಯನ್ನು ಪ್ರಕಟಿಸಿದ್ದರು. ಇದು, ತಾನು ಅಭಿನಯಿಸಿದ ಮಹತ್ವದ ಸಿನಿಮಾವೊಂದರ ಶೀರ್ಷಿಕೆಯ ಅರ್ಥ ಹುಡುಕುತ್ತಾ ಹೊರಟ ಮಹಾನ್ ನಟನೊಬ್ಬ, ಅದು ತನ್ನನ್ನೇ ಕುರಿತದ್ದಾಗಿದೆ ಎಂದು ಅನಿರೀಕ್ಷಿತವಾಗಿ ತಿಳಿದುಕೊಂಡು ವಿನೀತನಾದ ಅಪರೂಪದ ಕ್ಷಣ. </p> <h2><strong>ಸಮಾನ ವಯಸ್ಕರಲ್ಲಿ ಗುರು–ಶಿಷ್ಯ ಸಂಬಂಧ</strong></h2><h2></h2><p>ಅರ್ಥ ಹೇಳಿದ ಶಾಸ್ತ್ರಿಯವರು ರಾಜ್ ಅವರ ಸಮಾನ ವಯಸ್ಕರಾಗಿದ್ದರೂ, ಅವರಿಬ್ಬರ ನಡುವೆ ಗುರು–ಶಿಷ್ಯ ಸಂಬಂಧವಿದ್ದಂತೆ ತೋರುತ್ತದೆ. ರಾಜ್ ಅವರು ಶಾಸ್ತ್ರಿಯವರನ್ನು ‘ಪುರುಷ ಸರಸ್ವತಿ‘ ಎಂದು ಕರೆಯುವುದನ್ನು ಗಮನಿಸಬೇಕು. ತಮ್ಮ ತಮ್ಮ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಇಬ್ಬರು ಮಹನೀಯರು ಪರಸ್ಪರರನ್ನು ಹೇಗೆ ಗ್ರಹಿಸಿದ್ದರು ಎಂಬುದೂ ಇದರಿಂದ ಗೊತ್ತಾಗುತ್ತದೆ. </p> <p>ಪ್ರಭಾಕರಶಾಸ್ತ್ರಿಯವರ ಮಗ ಕಣಗಾಲ್ ಪುರುಷೋತ್ತಮ್ ಅವರ ನೆನಪಿನಲ್ಲಿದ್ದ ಘಟನೆ ಇದು. ಇದು ಅವರ ಮುಂದೆ ನಡೆದ ಘಟನೆಯೇನೂ ಅಲ್ಲ. ಕಂಡ ಹಿರಿಯರಿಂದ, ಕೇಳಿ ತಿಳಿದ ಘಟನೆ ಎಂದು ಅವರು, ಗೌರಿ ಸುಂದರ್ ಸಂಪಾದಕತ್ವದ ‘ಕಲಾ ಕಂಠೀರವ ಡಾ.ರಾಜ್ಕುಮಾರ್’ ಕೃತಿಯಲ್ಲಿ ಇದನ್ನು ನೆನಪಿಸಿಕೊಂಡಿದ್ದಾರೆ.</p> <p>ಕಥೆ, ಚಿತ್ರಕತೆ, ಸಂಭಾಷಣೆ, ನಿರ್ದೇಶನದೊಂದಿಗೆ ಪ್ರಭಾಕರಶಾಸ್ತ್ರಿಯವರು ನಿರ್ಮಿಸಿದ್ದ ಡಾ.ರಾಜ್ ಅಭಿನಯಿಸಿದ ‘ಸತಿ ಶಕ್ತಿ’ ಕನ್ನಡದ ಇನ್ನೊಂದು ಮಾಸ್ಟರ್ ಪೀಸ್ ಸಿನಿಮಾ. ಅದು 1963ರಲ್ಲೇ ಬಿಡುಗಡೆಯಾಗಿತ್ತು. ಅದರಲ್ಲಿ ಡಾ.ರಾಜ್ ಅವರು ನಾಯಕ ಮತ್ತು ಖಳನಾಯಕ ಪಾತ್ರಗಳಲ್ಲಿ ಮಿಂಚಿದ್ದರು. ಇದು ‘ಮಂತ್ರವಾದಿ’ ಯಾಗಿ ರಾಜ್ ಅಭಿನಯಿಸಿದ ಏಕೈಕ ಚಿತ್ರ. ಪುಟ್ಟಣ್ಣ ಕಣಗಾಲ್ ಇಲ್ಲಿ ಸಹನಿರ್ದೇಶಕರಾಗಿದ್ದರು.</p> <h2><strong>ಕ್ಲಾಸಿಕ್ ಉತ್ತರ:</strong></h2><p>‘ರತ್ನಗಿರಿ ರಹಸ್ಯ’ದ (1957) ಮೂಲಕ ಸಂಭಾಷಣೆಕರಾರರಾಗಿ ಚಿತ್ರರಂಗಕ್ಕೆ ಕಾಲಿಟ್ಟ ಶಾಸ್ತ್ರಿಗಳು ಹಾಗೂ ಬೇಡರ ಕಣ್ಣಪ್ಪ (1954) ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಾಯಕ ನಟನಾಗಿ ಪದಾರ್ಪಣೆ ಮಾಡಿದ ಡಾ.ರಾಜ್ ತಮ್ಮ ಕ್ಷೇತ್ರದಲ್ಲಿ ಅಪಾರ ಅನುಭವಗಳನ್ನು ಗಳಿಸಿದ್ದವರು. ‘ಸಾಕ್ಷಾತ್ಕಾರ’ ಬಿಡುಗಡೆಯಾದ ವರ್ಷವೇ ‘ಕಸ್ತೂರಿ ನಿವಾಸ’ ಕೂಡ ಬಿಡುಗಡೆಯಾಗಿತ್ತು. ಎರಡೂ ಕೂಡ ಕನ್ನಡ ಸಿನಿಮಾ ಕ್ಷೇತ್ರದ ಜನಪ್ರಿಯತೆಯನ್ನು ಹೆಚ್ಚಿಸಿದ್ದವು.</p> <p>‘ಸಾಕ್ಷಾತ್ಕಾರ’ ರಾಜ್ ಅವರ 136ನೇ ಚಿತ್ರ. ನಟನೆ, ಗಾಯನದಲ್ಲಿ ತಮ್ಮ ಪ್ರತಿಭಾವಿಲಾಸದಿಂದ ಆಗಲೇ ಅಷ್ಟೊಂದು ಸಿನಿಮಾಗಳಿಂದ ಕರ್ನಾಟಕದಾಚೆಗೂ ಗಮನ ಸೆಳೆದಿದ್ದ ರಾಜ್ ಅವರು, ಒಂದು ಪದದ ಅರ್ಥಕ್ಕಾಗಿ ಸ್ವಯಂಸಂಶೋಧನೆಗೂ ಒಳಪಡಿಸಿಕೊಂಡಿದ್ದರು.</p> <p>‘ಸಾಕ್ಷಾತ್ಕಾರ‘ ಸಿನಿಮಾ ಬಿಡುಗಡೆಯಾಗುವುದಕ್ಕೂ ಒಂದು ದಶಕ ಮುಂಚಿನಿಂದಲೂ ಇಬ್ಬರ ನಡುವೆ ಅಮೃತ ವಾಹಿನಿಯೊಂದು ಎದೆಯಿಂದೆ ಎದೆಗೆ ಹರಿಯುತ್ತಿತ್ತೇನೋ. ‘ಸಾಕ್ಷಾತ್ಕಾರ’ ಸಿನಿಮಾಗಿಂತ ಎಂಟು ವರ್ಷ ಮುಂಚೆಯೇ ಶಾಸ್ತ್ರಿಗಳೊಂದಿಗೆ ನಿಕಟವಾಗಿ ಕೆಲಸ ಮಾಡಿದ್ದ ಅನುಭವವಿದ್ದರೂ ರಾಜ್ ಅವರು ಪದದ ಅರ್ಥವನ್ನು ಕೇಳಲು ಹತ್ತು ವರ್ಷ ಕಾದಿದ್ದೇಕೆ ಎಂಬ ಪ್ರಶ್ನೆ ಮೂಡುತ್ತದೆ. ಈ ಪ್ರಶ್ನೆಯನ್ನು ಬಿಟ್ಟುಬಿಡೋಣ. ಏಕೆಂದರೆ, ಶಾಸ್ತ್ರಿಯವರು ರಾಜ್ ಅವರಿಗೆ ಕೊಟ್ಟ ಉತ್ತರವು ‘ಸಾಕ್ಷಾತ್ಕಾರ’ ಸಿನಿಮಾದಂತೆ ಕ್ಲಾಸಿಕ್ ಉತ್ತರವೇ ಆಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕನ್ನಡ ಚಿತ್ರರಂಗದ ಕ್ಲಾಸಿಕ್ಗಳಲ್ಲಿ ಒಂದಾಗಿರುವ ‘ಸಾಕ್ಷಾತ್ಕಾರ’ ಸಿನಿಮಾದಲ್ಲಿ ಪ್ರೇಕ್ಷಕರ ಹೃದಯವೇ ಕರಗಿ ಮರುಗುವಂಥ ಮನೋಜ್ಞ ಅಭಿನಯ ನೀಡಿದ್ದವರು ಡಾ.ರಾಜಕುಮಾರ್. ಆ ಸಿನಿಮಾ ಬಿಡುಗಡೆಯಾಗಿ ಹತ್ತು ವರ್ಷದ ಬಳಿಕ, ಆ ಪದದ ಅರ್ಥದಲ್ಲಿ ತಮ್ಮನ್ನು ತಾವೇ ಕಂಡುಕೊಂಡರು! ಹಾಗಾದರೆ, ಅಷ್ಟು ಸುದೀರ್ಘ ಅವಧಿಯ ಬಳಿಕ ಅವರಿಗೆ ಪದದ ಅರ್ಥ ಸಿಕ್ಕಿದ್ದಾದರೂ ಹೇಗೆ?</p>.<p>ಸಿನಿಮಾ ಶೂಟಿಂಗ್ ಆರಂಭವಾದಂದಿನಿಂದಲೂ ‘ಸಾಕ್ಷಾತ್ಕಾರ’ ಎಂದರೆ ಏನು ಎಂದು ಅವರು ಅರ್ಥಕ್ಕಾಗಿ ಹುಡುಕಾಡುತ್ತಿದ್ದರೆನಿಸುತ್ತದೆ. ಅದಕ್ಕೆ ಸರಿಯಾದ ಉತ್ತರ ಕೊಟ್ಟವರು ಯಾರು ಗೊತ್ತೆ? ಆಗ ಪ್ರಸಿದ್ಧ ಗೀತರಚನೆಕಾರರು, ನಿರ್ದೇಶಕರೂ ಆಗಿದ್ದ ಕಣಗಾಲ್ ಪ್ರಭಾಕರಶಾಸ್ತ್ರಿ.</p>.<p>ಅಂದ ಹಾಗೆ, ಈ ಪ್ರಶ್ನೆ ಕೇಳಿದ ರಾಜ್ ಅವರ ಹುಟ್ಟೂರಾದ ಗಾಜನೂರಿಗೂ, ಶಾಸ್ತ್ರಿಗಳ ಹುಟ್ಟೂರಾದ ಮೈಸೂರಿನ ಪಿರಿಯಾಪಟ್ಟಣದ ಕಣಗಾಲಿಗೂ ಸುಮಾರು 150 ಕಿಮೀ ಅಂತರ. ಮೈಸೂರಿನ ಪ್ರದೇಶದವರೇ ಆಗಿದ್ದ ಈ ಇಬ್ಬರ ವಯಸ್ಸು ಆ ಪ್ರಶ್ನೋತ್ತರ ಮೂಡಿದ ಹೊತ್ತಲ್ಲಿ ಒಂದೇ ಆಗಿತ್ತು. ಇಬ್ಬರೂ 34ರ ಹರೆಯದವರಾಗಿದ್ದರು. ಇದನ್ನು ಕಣಗಾಲಿಗೂ ಮೈಸೂರಿಗೂ ನಡುವೆ ಏರ್ಪಟ್ಟ ವಿಶೇಷ ಬಾಂಧವ್ಯ ಎನ್ನಲೂಬಹುದು.</p>.<p>ತಮಿಳುನಾಡಿನ ಗಾಜನೂರು, ಮೈಸೂರು ಭಾಗದ ಗಡಿಪ್ರದೇಶ. ಗಾಜನೂರು ಎಂದರೆ ಅದು ತಮಿಳುನಾಡಿನ ನೆಲವೆಂಬುದಕ್ಕಿಂತಲೂ, ಕರ್ನಾಟಕದ್ದೇ, ಮೈಸೂರಿನದ್ದೇ ನೆಲವೆನ್ನುವಷ್ಟರ ಮಟ್ಟಿಗೆ ಅದಕ್ಕೆ ಪ್ರಖ್ಯಾತಿ, ಕನ್ನಡತನವನ್ನು ತಂದುಕೊಟ್ಟ ಅಪ್ರತಿಮ ಕನ್ನಡಾಭಿಮಾನಿ ಡಾ.ರಾಜ್, ಪದ ಮತ್ತು ಪದಾರ್ಥಗಳ ವಿಚಾರದಲ್ಲಿ ಅಪ್ರತಿಮ ಕುತೂಹಲಿಯಾಗಿದ್ದರು ಎಂಬುದನ್ನು ಅವರ ಚಡಪಡಿಕೆ ಸೂಚಿಸುತ್ತದೆ. </p> <h2><strong>ಅರ್ಥ ಹೇಳಿದ ಗುರು: </strong></h2><p>‘ಭಾವಶಿಲ್ಪಿ ನಿರ್ದೇಶಕ’ ಎಂದೇ ಹೆಸರಾಗಿದ್ದ ಪುಟ್ಟಣ್ಣ ಕಣಗಾಲ್ ನಿರ್ದೇಶನದಲ್ಲಿ ಡಾ.ರಾಜ್ ಅಭಿನಯಿಸಿದ ಮೂರನೇ ಮತ್ತು ಕೊನೆಯ ಸಿನಿಮಾ ‘ಸಾಕ್ಷಾತ್ಕಾರ’. ಅದು ಬಿಡುಗಡೆಯಾಗಿದ್ದು 1971ರಲ್ಲಿ. ಸಿನಿಮಾ ಜನಪ್ರಿಯವಾಗಿ, ಜನರ ನಾಲಿಗೆಯ ಮೇಲೆ ಅದರ ಹಾಡುಗಳು ನಲಿದಾಡಿ, ದುಃಖಾಂತ್ಯ ಮನಗಳನ್ನು ಕಲಕಿ, ಹತ್ತು ವರ್ಷಗಳಾದ ಬಳಿಕ 1982ರಲ್ಲಿ ಡಾ.ರಾಜ್ ಅವರು ಪ್ರಸಿದ್ಧ ಗೀತರಚನೆಕರಾರರಾಗಿದ್ದ ಪ್ರಭಾಕರಶಾಸ್ತ್ರಿಯವರನ್ನು ಅರ್ಥದ ಕುರಿತು ಕೇಳಿದ್ದರು. ಶಾಸ್ತ್ರಿಗಳು ಕಣಗಾಲ್ ಪುಟ್ಟಣ್ಣನವರ ಅಣ್ಣ. ಕನ್ನಡ ಚಿತ್ರರಂಗದಲ್ಲಿ ಈ ಇಬ್ಬರು ಸಹೋದರರು ತೋರಿದ ಪ್ರತಿಭಾ ವಿಲಾಸದ ತೌಲನಿಕ ವಿಶ್ಲೇಷಣೆಯೂ ಅಗತ್ಯವಿದೆ.</p> <p>ರಾಜ್ ಅವರ ಪ್ರಶ್ನೆಗೆ, ‘ಅಮೂರ್ತ ಭಾವನೆಯ ಮೂರ್ತ ರೂಪವೇ ಸಾಕ್ಷಾತ್ಕಾರ’ ಎಂದು ಉತ್ತರಿಸಿದ್ದ ಶಾಸ್ತ್ರಿಯವರು, ‘ನೀವು ಕಲಾದೇವಿಯ ಸಾಕ್ಷಾತ್ಕಾರ’ ಎಂದು ರಾಜ್ ಅವರನ್ನೇ ‘ಸಾಕ್ಷಾತ್ಕಾರ’ ಎಂಬುದಕ್ಕೆ ಉದಾಹರಣೆಯನ್ನಾಗಿಸಿದ್ದರು! </p> <p>ಇದು, ಪ್ರಶ್ನೆ ಕೇಳಿದವರನ್ನೇ ಉತ್ತರವಾಗಿಸುವ ಪರಿ. ಪ್ರಶ್ನೆಯೂ, ಉತ್ತರವೂ ಒಬ್ಬರಲ್ಲೇ ಸಂಯೋಗಗೊಂಡಂಥ ಸ್ಥಿತಿ. ಪ್ರಶ್ನೆ ಕೇಳಿದವರ ವ್ಯಕ್ತಿತ್ವದಲ್ಲೇ ಉತ್ತರವನ್ನು ಕಾಣುವ ಅಪರೂಪದ ಔದಾರ್ಯದ ಮಾದರಿ. ಇದು ವ್ಯಕ್ತಿತ್ವದ ವಿಶ್ಲೇಷಣೆಗೂ ಮಾದರಿಯೇ. ಇಂಥದ್ದು ಅಪರೂಪದಲ್ಲಿ ಅಪರೂಪ.</p> <p>ಹಾಗೆ ಹೇಳುವ ಮೂಲಕ ಶಾಸ್ತ್ರಿ ಅವರು ರಾಜ್ ಅವರಿಗೆ ಆ ಪದದ ಅರ್ಥವನ್ನೂ ಹೇಳಿದ್ದರು. ಕಲಾವಿದನಾಗಿ ರಾಜ್ ಸ್ವತಃ ಅದಕ್ಕೆ ಅನ್ವರ್ಥನಾಮವಾಗಿದ್ದರು ಎಂದೂ ಹೇಳಿದ್ದರು. ಅವರ ಮಾತು ಕೇಳಿದ ಡಾ.ರಾಜ್, ಗಳಗಳನೆ ಅತ್ತು, ‘ನನ್ನ ಜನ್ಮ ಪಾವನವಾಯಿತು. ಪುರುಷ ಸರಸ್ವತಿಯೇ ಇಂದು ನನ್ನನ್ನು ಆದರಿಸಿತು’ ಎಂದು ಧನ್ಯತೆ, ಕೃತಜ್ಞತೆಯನ್ನು ಪ್ರಕಟಿಸಿದ್ದರು. ಇದು, ತಾನು ಅಭಿನಯಿಸಿದ ಮಹತ್ವದ ಸಿನಿಮಾವೊಂದರ ಶೀರ್ಷಿಕೆಯ ಅರ್ಥ ಹುಡುಕುತ್ತಾ ಹೊರಟ ಮಹಾನ್ ನಟನೊಬ್ಬ, ಅದು ತನ್ನನ್ನೇ ಕುರಿತದ್ದಾಗಿದೆ ಎಂದು ಅನಿರೀಕ್ಷಿತವಾಗಿ ತಿಳಿದುಕೊಂಡು ವಿನೀತನಾದ ಅಪರೂಪದ ಕ್ಷಣ. </p> <h2><strong>ಸಮಾನ ವಯಸ್ಕರಲ್ಲಿ ಗುರು–ಶಿಷ್ಯ ಸಂಬಂಧ</strong></h2><h2></h2><p>ಅರ್ಥ ಹೇಳಿದ ಶಾಸ್ತ್ರಿಯವರು ರಾಜ್ ಅವರ ಸಮಾನ ವಯಸ್ಕರಾಗಿದ್ದರೂ, ಅವರಿಬ್ಬರ ನಡುವೆ ಗುರು–ಶಿಷ್ಯ ಸಂಬಂಧವಿದ್ದಂತೆ ತೋರುತ್ತದೆ. ರಾಜ್ ಅವರು ಶಾಸ್ತ್ರಿಯವರನ್ನು ‘ಪುರುಷ ಸರಸ್ವತಿ‘ ಎಂದು ಕರೆಯುವುದನ್ನು ಗಮನಿಸಬೇಕು. ತಮ್ಮ ತಮ್ಮ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಇಬ್ಬರು ಮಹನೀಯರು ಪರಸ್ಪರರನ್ನು ಹೇಗೆ ಗ್ರಹಿಸಿದ್ದರು ಎಂಬುದೂ ಇದರಿಂದ ಗೊತ್ತಾಗುತ್ತದೆ. </p> <p>ಪ್ರಭಾಕರಶಾಸ್ತ್ರಿಯವರ ಮಗ ಕಣಗಾಲ್ ಪುರುಷೋತ್ತಮ್ ಅವರ ನೆನಪಿನಲ್ಲಿದ್ದ ಘಟನೆ ಇದು. ಇದು ಅವರ ಮುಂದೆ ನಡೆದ ಘಟನೆಯೇನೂ ಅಲ್ಲ. ಕಂಡ ಹಿರಿಯರಿಂದ, ಕೇಳಿ ತಿಳಿದ ಘಟನೆ ಎಂದು ಅವರು, ಗೌರಿ ಸುಂದರ್ ಸಂಪಾದಕತ್ವದ ‘ಕಲಾ ಕಂಠೀರವ ಡಾ.ರಾಜ್ಕುಮಾರ್’ ಕೃತಿಯಲ್ಲಿ ಇದನ್ನು ನೆನಪಿಸಿಕೊಂಡಿದ್ದಾರೆ.</p> <p>ಕಥೆ, ಚಿತ್ರಕತೆ, ಸಂಭಾಷಣೆ, ನಿರ್ದೇಶನದೊಂದಿಗೆ ಪ್ರಭಾಕರಶಾಸ್ತ್ರಿಯವರು ನಿರ್ಮಿಸಿದ್ದ ಡಾ.ರಾಜ್ ಅಭಿನಯಿಸಿದ ‘ಸತಿ ಶಕ್ತಿ’ ಕನ್ನಡದ ಇನ್ನೊಂದು ಮಾಸ್ಟರ್ ಪೀಸ್ ಸಿನಿಮಾ. ಅದು 1963ರಲ್ಲೇ ಬಿಡುಗಡೆಯಾಗಿತ್ತು. ಅದರಲ್ಲಿ ಡಾ.ರಾಜ್ ಅವರು ನಾಯಕ ಮತ್ತು ಖಳನಾಯಕ ಪಾತ್ರಗಳಲ್ಲಿ ಮಿಂಚಿದ್ದರು. ಇದು ‘ಮಂತ್ರವಾದಿ’ ಯಾಗಿ ರಾಜ್ ಅಭಿನಯಿಸಿದ ಏಕೈಕ ಚಿತ್ರ. ಪುಟ್ಟಣ್ಣ ಕಣಗಾಲ್ ಇಲ್ಲಿ ಸಹನಿರ್ದೇಶಕರಾಗಿದ್ದರು.</p> <h2><strong>ಕ್ಲಾಸಿಕ್ ಉತ್ತರ:</strong></h2><p>‘ರತ್ನಗಿರಿ ರಹಸ್ಯ’ದ (1957) ಮೂಲಕ ಸಂಭಾಷಣೆಕರಾರರಾಗಿ ಚಿತ್ರರಂಗಕ್ಕೆ ಕಾಲಿಟ್ಟ ಶಾಸ್ತ್ರಿಗಳು ಹಾಗೂ ಬೇಡರ ಕಣ್ಣಪ್ಪ (1954) ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಾಯಕ ನಟನಾಗಿ ಪದಾರ್ಪಣೆ ಮಾಡಿದ ಡಾ.ರಾಜ್ ತಮ್ಮ ಕ್ಷೇತ್ರದಲ್ಲಿ ಅಪಾರ ಅನುಭವಗಳನ್ನು ಗಳಿಸಿದ್ದವರು. ‘ಸಾಕ್ಷಾತ್ಕಾರ’ ಬಿಡುಗಡೆಯಾದ ವರ್ಷವೇ ‘ಕಸ್ತೂರಿ ನಿವಾಸ’ ಕೂಡ ಬಿಡುಗಡೆಯಾಗಿತ್ತು. ಎರಡೂ ಕೂಡ ಕನ್ನಡ ಸಿನಿಮಾ ಕ್ಷೇತ್ರದ ಜನಪ್ರಿಯತೆಯನ್ನು ಹೆಚ್ಚಿಸಿದ್ದವು.</p> <p>‘ಸಾಕ್ಷಾತ್ಕಾರ’ ರಾಜ್ ಅವರ 136ನೇ ಚಿತ್ರ. ನಟನೆ, ಗಾಯನದಲ್ಲಿ ತಮ್ಮ ಪ್ರತಿಭಾವಿಲಾಸದಿಂದ ಆಗಲೇ ಅಷ್ಟೊಂದು ಸಿನಿಮಾಗಳಿಂದ ಕರ್ನಾಟಕದಾಚೆಗೂ ಗಮನ ಸೆಳೆದಿದ್ದ ರಾಜ್ ಅವರು, ಒಂದು ಪದದ ಅರ್ಥಕ್ಕಾಗಿ ಸ್ವಯಂಸಂಶೋಧನೆಗೂ ಒಳಪಡಿಸಿಕೊಂಡಿದ್ದರು.</p> <p>‘ಸಾಕ್ಷಾತ್ಕಾರ‘ ಸಿನಿಮಾ ಬಿಡುಗಡೆಯಾಗುವುದಕ್ಕೂ ಒಂದು ದಶಕ ಮುಂಚಿನಿಂದಲೂ ಇಬ್ಬರ ನಡುವೆ ಅಮೃತ ವಾಹಿನಿಯೊಂದು ಎದೆಯಿಂದೆ ಎದೆಗೆ ಹರಿಯುತ್ತಿತ್ತೇನೋ. ‘ಸಾಕ್ಷಾತ್ಕಾರ’ ಸಿನಿಮಾಗಿಂತ ಎಂಟು ವರ್ಷ ಮುಂಚೆಯೇ ಶಾಸ್ತ್ರಿಗಳೊಂದಿಗೆ ನಿಕಟವಾಗಿ ಕೆಲಸ ಮಾಡಿದ್ದ ಅನುಭವವಿದ್ದರೂ ರಾಜ್ ಅವರು ಪದದ ಅರ್ಥವನ್ನು ಕೇಳಲು ಹತ್ತು ವರ್ಷ ಕಾದಿದ್ದೇಕೆ ಎಂಬ ಪ್ರಶ್ನೆ ಮೂಡುತ್ತದೆ. ಈ ಪ್ರಶ್ನೆಯನ್ನು ಬಿಟ್ಟುಬಿಡೋಣ. ಏಕೆಂದರೆ, ಶಾಸ್ತ್ರಿಯವರು ರಾಜ್ ಅವರಿಗೆ ಕೊಟ್ಟ ಉತ್ತರವು ‘ಸಾಕ್ಷಾತ್ಕಾರ’ ಸಿನಿಮಾದಂತೆ ಕ್ಲಾಸಿಕ್ ಉತ್ತರವೇ ಆಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>