<p>ಕನ್ನಂಬಾಡಿ ಕಟ್ಟೆಯನ್ನು ಕಟ್ಟಲು ಹಣ ಸಾಲದಾದಾಗ ನಾಲ್ವಡಿಯವರು ತಮ್ಮ ತಾಯಿ ಕೆಂಪನಂಜಮ್ಮಣ್ಣಿಯವರ ಆಭರಣಗಳನ್ನು ಬಾಂಬೆ ಮಾರುಕಟ್ಟೆಯಲ್ಲಿ ಮಾರಿ ಹಣ ತಂದರು ಎಂದು ಎಲ್ಲರೂ ಹೇಳುತ್ತಾರೆ. ಆದರೆ ಅದಕ್ಕೆ ದಾಖಲೆ ಏನು? ಎಂದು ಇತಿಹಾಸದ ಅಧ್ಯಾಪಕರೊಬ್ಬರು ಆಕ್ಷೇಪಿಸಿದರು.</p><p>ದುರಿತ ಕಾಲದಲ್ಲಿ ಆಡಳಿತ ನಡೆಸಿದ ತಾಯಿ ಹಾಗೂ ನಂತರ ಅಧಿಕಾರಕ್ಕೆ ಬಂದ ಮಗ ಸೇರಿ ಮೈಸೂರು ಸಂಸ್ಥಾನದಲ್ಲಿ ರೂಪಿಸಿದ ಪ್ರಜಾಸತ್ತಾತ್ಮಕ ಕಾರ್ಯಕ್ರಮಗಳು, ಅದಕ್ಕಾಗಿ ಅವರ ತ್ಯಾಗ, ಬದ್ಧತೆಗಳ ಕುರಿತು ಕಳೆದ ವಾರ ‘ಮೈಸೂರು ಮಲ್ಲಿಗೆ’ ಅಂಕಣದಲ್ಲಿ ಉಲ್ಲೇಖಿಸಿದ ಪ್ರಚಲಿತ ಕಥನದ ಕುರಿತ ಆಕ್ಷೇಪ ಅದು. ಜನರ ಬದುಕಿನಲ್ಲಿ ಹಾಸುಹೊಕ್ಕಾಗಿಬಿಟ್ಟಿರುವ ಚರಿತ್ರೆಯ ಮಾತೊಂದು ಅವರನ್ನು ಒಂದೂವರೆ ದಶಕದಿಂದ ಕಾಡುತ್ತಿದೆ. ಅವರ ಆಕ್ಷೇಪಣೆಯೂ ಸರಿ ಇದೆ.</p><p>ಆದರೆ ಅವರು ಈ ಪ್ರಶ್ನೆಯನ್ನೇ ಮುಖ್ಯವಾಗಿರಿಸಿಕೊಂಡು ಈ ಸುದೀರ್ಘ ಅವಧಿಯಲ್ಲಿ ದಾಖಲೆ ಸಹಿತ ಏನನ್ನಾದರೂ ಬರೆದ ನಿದರ್ಶನವಿಲ್ಲ. ಆದರೆ ದಾಖಲೆಗಳನ್ನು ಹುಡುಕುವ ಪ್ರಯತ್ನ ಮಾತ್ರ ಜಾರಿಯಲ್ಲಿಟ್ಟಿದ್ದಾರೆ. ‘ಒಂದೆರಡು ಸಂಕಿರಣದಲ್ಲಿ ಈ ಬಗ್ಗೆ ಕೇಳಿದಾಗ ವಿದ್ವಾಂಸರಿಂದ ಸರಿಯಾದ ಉತ್ತರ ಸಿಗಲಿಲ್ಲ’ ಎಂಬುದಷ್ಟೇ ಅವರು ತಮ್ಮ ಅಸಮಾಧಾನಕ್ಕೆ ಕೊಟ್ಟ ಸ್ಪಷ್ಟನೆ. ಅಣೆಕಟ್ಟು ಕಟ್ಟಿದ ಯಶಸ್ಸಿನ ಕಥೆಗೆ ಮಾಡಿದ ತ್ಯಾಗದ ಕುರಿತ ಸಾಕ್ಷಿ ಇಲ್ಲ ಎಂದಾದರೆ, ಅದನ್ನು ದಿಟ್ಟತನದಿಂದ ಹೇಳುವ ಪ್ರಯತ್ನವೂ ಆಗಿಲ್ಲ.</p><p>‘ಅರಸರು ಈ ನಾಡಿಗೆ ನೀಡಿದ ಮಹಾನ್ ಕೊಡುಗೆಗಳನ್ನು ನೋಡಿದರೆ, ಇದು ಗಂಭೀರವಾಗಿ ಪರಿಗಣಿಸಬೇಕಾದ ಆಕ್ಷೇಪಣೆಯಲ್ಲ’ ಎಂಬುದು ‘ರಾಜಭಕ್ತಿ’ಯುಳ್ಳವರ ಪ್ರತಿಪಾದನೆ. ಆಡುಮಾತಿನ ಚರಿತ್ರೆ ಮತ್ತು ದಾಖಲೆಗಳು ಹೇಳುವ ಚರಿತ್ರೆಯಲ್ಲಿ ಯಾವುದನ್ನು ಹೇಗೆ ತೂಗಿ ನೋಡಬೇಕು? ಇದು ಸದ್ಯದ ಪ್ರಶ್ನೆ.</p><p>ಈ ನಡುವೆ, ಹನಸೋಗೆ ಸೋಮಶೇಖರ್ ಅವರ ರಚನೆಯ ‘ಮರೆಯೋದುಂಟೆ ಮೈಸೂರು ದೊರೆಯಾ‘ ಹಾಡು ಜನಪ್ರಿಯತೆಯ ಅಲೆಯ ಮೇಲೆ ತೇಲುತ್ತಿದೆ. ಈ ಹಾಡು ಹೇಳುವವರು ಮತ್ತು ಕೇಳುವವರಲ್ಲಿ ನಾಲ್ವಡಿಯರ ಕುರಿತು ಧನ್ಯತಾ ಭಾವ ಹೆಚ್ಚುತ್ತಲೇ ಇದೆ. ಅದರೊಂದಿಗೆ, ‘ಬಂಗಾರದ ಮನುಷ್ಯ’ ಸಿನಿಮಾದಲ್ಲಿ ಡಾ.ರಾಜ್ ಹಾಡುವ ‘ಕಾವೇರಿಯನು ಹರಿಯಲು ಬಿಟ್ಟು, ವಿಶ್ವೇಶ್ವರಯ್ಯ ಶ್ರಮ ಪಡದಿದ್ದರೆ, ಕನ್ನಂಬಾಡಿಯ ಕಟ್ಟದಿದ್ದರೆ, ಬಂಗಾರ ಬೆಳೆವ ಹೊನ್ನಾಡು, ಆಗುತ್ತಿತ್ತೇ ಈ ನಾಡು, ಕನ್ನಡ ಸಿರಿನಾಡು’ ಸಾಲುಗಳೂ ಕನ್ನಡಿಗರೆದೆಯಲ್ಲಿ ಅನುರಣಿಸುತ್ತಿವೆ. ಕನ್ನಂಬಾಡಿ ಕಟ್ಟೆಯ ‘ಕೊಡುಗೆ’ಯನ್ನು ಯಾರ ಹೆಸರಿಗೆ ಸೇರಿಸುವುದು? ಯೋಜನೆಗೆ ಹಣ ನೀಡಿ, ಕಟ್ಟಲು ವಿಶ್ವೇಶ್ವರಯ್ಯನವರಿಗೆ ಅವಕಾಶ ನೀಡಿದ ನಾಲ್ವಡಿಯವರಿಗೋ ಅಥವಾ ನಾಲ್ವಡಿಯವರ ನೇತೃತ್ವದಲ್ಲಿ ಕಟ್ಟಿದ ವಿಶ್ವೇಶ್ವರಯ್ಯನವರಿಗೋ?</p><p>‘ಸರ್.ಎಂ.ವಿಶ್ವೇಶ್ವರಯ್ಯನವರು ಇಲ್ಲದಿದ್ದರೆ ಅಣೆಕಟ್ಟು ನಿರ್ಮಾಣ ಬಹಳ ಕಷ್ಟವಿತ್ತು. ನಾಲ್ವಡಿಯವರೇ ಅಣಕಟ್ಟೆ ಕಟ್ಟಿದರು ಎಂದು ಹೇಳುವವರು, ಅಣೆಕಟ್ಟು ನಿರ್ಮಾಣ ಮಾಡುವಾಗ ಎಷ್ಟು ಬಾರಿ ಅಲ್ಲಿಗೆ ಭೇಟಿ ನೀಡಿದ್ದರು? ವಿಶ್ವೇಶ್ವರಯ್ಯ ಎಷ್ಟು ಬಾರಿ ಭೇಟಿ ನೀಡಿದ್ದರು ಎಂಬ ಬಗ್ಗೆ ದಾಖಲೆ ಇದೆಯಾ’ ಮತ್ತೆ ಆ ಅಧ್ಯಾಪಕರು ದಾಖಲೆಗಳ ಪ್ರಶ್ನೆ ಎತ್ತಿದರು.</p>.<p>ದಿವಾನರು ಮಹಾರಾಜರ ನೇತೃತ್ವದಲ್ಲಿ ನೇಮಕಗೊಂಡವರು. ಅವರು ಕೊಟ್ಟ ಕೆಲಸವನ್ನು ಮಾಡಿದರು. ಯಾರೇ ದಿವಾನರಾಗಿರಲಿ. ಮಹಾರಾಜರಿಗೆ ಅಧೀನರಾಗಿರಬೇಕು. ಸ್ವತಂತ್ರವಾಗಿ ತೀರ್ಮಾನ ಕೈಗೊಳ್ಳುವುದಾದರೆ ವಿಶ್ವೇಶ್ವರಯ್ಯ ಏಕೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು?– ರಾಜರ ಪರವಾದ ನಿಲುವುಳ್ಳವರ ಈ ಪ್ರಶ್ನೆಯನ್ನೂ ಇಲ್ಲಿ ಮುಖಾಮುಖಿ ಮಾಡಬೇಕು.</p><p>‘ಮೈಸೂರು ಸಂಸ್ಥಾನದ ಅಭಿವೃದ್ಧಿಗೆ ರಾಜರ ಕೊಡುಗೆ ಅಪಾರ’ ಎಂದು ಹಾಡಿಹೊಗಳುವ ಪರಿಪಾಠ ಹಾಗೂ ‘ರಾಜರು ಏನೂ ಮಾಡಲಿಲ್ಲ. ಮಾಡಿದ್ದೆಲ್ಲ ದಿವಾನರುಗಳು ಮತ್ತು ಆಡಳಿತ ಮಂಡಳಿಗಳು’ ಎಂಬ ಎರಡು ಪ್ರತಿಪಾದನೆಗಳು ಹೀಗೆ ಚರ್ಚೆ, ವಾಗ್ವಾದಗಳನ್ನು ಹುಟ್ಟುಹಾಕುತ್ತಲೇ ಇವೆ. ಆದರೆ ಯಾರ ಕೊಡುಗೆ ಎಷ್ಟು ಎಂಬ ಬಗ್ಗೆ ದಾಖಲೆಗಳನ್ನು ಆಧರಿಸಿದ ನಿರೂಪಣೆಗಳು ಬಹಳ ಕಡಿಮೆ. ಈ ಮಧ್ಯೆ ‘ಮೈಸೂರಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್ಗಿಂತಲೂ ಸಿದ್ದರಾಮಯ್ಯ ಕೊಡುಗೆ ಜಾಸ್ತಿ’ ಎಂದು ಕಳೆದ ವರ್ಷ ಅವರ ಮಗ, ವಿಧಾನಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಹೇಳಿದ್ದು ದೊಡ್ಡ ವಿವಾದವಾಗಿತ್ತು.</p><p>ದಿವಾನರುಗಳ ಬಗ್ಗೆ ತಿಳಿದುಕೊಳ್ಳಬೇಕೆನ್ನುವವರಿಗೆ ಹಲವರು ಶಿಫಾರಸು ಮಾಡುವ ಡಿ.ವಿ.ಗುಂಡಪ್ಪನವರ ‘ಮೈಸೂರಿನ ದಿವಾನರುಗಳು ಕೃತಿ ಕೂಡ ಪರಿಚಯ, ಸ್ನೇಹ, ಸೌಹಾರ್ದಗಳ ನೆಲೆಯಲ್ಲೇ ದಿವಾನರುಗಳ ಕಾರ್ಯವೈಖರಿಯನ್ನು ವಿವರಿಸುತ್ತದೆಯೇ ಹೊರತು ಒಂದು ಕಾಲಘಟ್ಟ ಮತ್ತು ಆ ಸಂದರ್ಭದ ರಾಜರು–ದಿವಾನರುಗಳ ಆಡಳಿತದ ಕುರಿತ ವಿಮರ್ಶಾತ್ಮಕ ಒಳನೋಟ ನೀಡುವ ಪ್ರಯತ್ನಗಳು ಕಡಿಮೆ. ದಿವಾನರುಗಳಾಗಿದ್ದವರ ಆತ್ಮಚರಿತ್ರೆ, ಜೀವನ ಚರಿತ್ರೆಗಳು, ಮೈಸೂರು ಸಂಸ್ಥಾನದ ದಾಖಲೆಗಳು, ಪತ್ರಾಗಾರ ಇಲಾಖೆಯಲ್ಲಿರುವ ಸಂಗ್ರಹಗಳು, ವಿದೇಶಿಯರು ಬರೆದ ಚರಿತ್ರೆಗಳ ಮೂಲಕವೇ ರಾಜರು ಮತ್ತು ದಿವಾನರ ಸಾಮರ್ಥ್ಯ ಮತ್ತು ಮಿತಿಗಳನ್ನು ಗುರುತಿಸಿಕೊಳ್ಳಬಹುದು. ಇದು ರಾಜರು ಮತ್ತು ಅವರ ಅವಧಿಯಲ್ಲಿ ದಿವಾನರಾಗಿ ನೇಮಕಗೊಂಡವರ ಚರಿತ್ರೆ. ಆ ನೆಲೆಯಲ್ಲೇ ‘ಶ್ರಮ’ ವಿಭಜನೆಯಾಗಬೇಕು. ಹೀಗೆ ಹೇಳುವ ಸಮಯದಲ್ಲಿ, ಹೈದರ್ ಆಲಿ ಮತ್ತು ಟಿಪ್ಪು ಸುಲ್ತಾನ್ ನೆನಪಾಗದೇ ಇರುವರೇ?</p><p>ಇನ್ನೊಂದು ಸಂಗತಿಯನ್ನು ಗಮನಿಸಬಹುದು. ಅದು ದಿವಾನರುಗಳ ಪಾತ್ರ ಮಹತ್ವದ ಪ್ರತಿಪಾದನೆಯಲ್ಲೂ ತಾರತಮ್ಯ ಭಾವವಿರುವುದು. ರಾಜರು ಹೆಚ್ಚೋ ದಿವಾನರು ಹೆಚ್ಚೋ ಎಂಬ ಪ್ರಶ್ನೆಯೊಂದಿಗೆ ‘ಯಾವ ದಿವಾನರು ಹೆಚ್ಚು‘ ಎಂಬುದೂ ಇದೆ. ಜನಮಾನಸದಲ್ಲಿ ಉಳಿದಿರುವ ದಿವಾನರೊಂದಿಗೆ. ಜನ ಮರೆತುಹೋದ ದಿವಾನರೂ ಇದ್ದಾರೆ! ಜನ ಅವರಾಗಿಯೇ ಮರೆತುಹೋದರೆ ಅಥವಾ ಮರೆಯುವಂತೆ ಮಾಡಲಾಯಿತೇ?</p>.<p>ಕೆಂಪನಂಜಮ್ಮಣ್ಣಿಯವರು ಹೇಗೆ ತಮ್ಮ ಸಹೋದರನಾದ ಸರ್.ಎಂ.ಕಾಂತರಾಜ ಅರಸರ ದಿವಾನಗಿರಿಯಲ್ಲಿ ಆಡಳಿತ ನಡೆಸಿದರು ಎಂಬುದು ಅರಸರ ಆಡಳಿತದ ಚರಿತ್ರೆಯಲ್ಲಿ ಭಿನ್ನ ಅಧ್ಯಾಯ. ಏಕೆಂದರೆ ಉಳಿದ ದಿವಾನರುಗಳೆಲ್ಲ ಅರಸೇತರ ಕುಟುಂದವರಾಗಿದ್ದರು. ಈ ನೆಲೆಯಲ್ಲೂ ಅಧ್ಯಯನಗಳು ನಡೆದಿಲ್ಲ.</p><p>ಯಾಕೆ ಕೆಲವೇ ದಿನಾನರುಗಳ ಚರಿತ್ರೆಯನ್ನಷ್ಟೆ ಸ್ಮರಿಸಲಾಗುತ್ತದೆ. ಸುದೀರ್ಘ ಆಡಳಿತ ನಡೆಸಿದ ಪೂರ್ಣಯ್ಯನವರನ್ನೂ ಅಷ್ಟಾಗಿ ಸ್ಮರಿಸದ ಸನ್ನೀವೇಶವೇ ಈಗಲೂ ಇದೆ. ಚರಿತ್ರೆ ಪಾಠ ಮಾಡುವವರಲ್ಲೂ ಇದೇ ಪ್ರವೃತ್ತಿ ಇದೆ. ಏಕೆಂದರೆ ಚರಿತ್ರೆಯ ಪಠ್ಯ ಪುಸ್ತಕಗಳಲ್ಲೂ ಅಷ್ಟೇ ಇದೆ.</p><p>ಮೊದಲ ದಿವಾನರಾದ ಸಿ.ವಿ. ರಂಗಾಚಾರ್ಲು ಅವರಿಂದ ಸ್ವಾತಂತ್ರ್ಯ ಪೂರ್ವ ಹಂತದಲ್ಲಿದ್ದ ಕೊನೆಯ ದಿವಾನರಾದ ಎನ್. ಮಾಧವ ರಾವ್ವರೆಗೆ ನೋಡಿದಾಗ, ಕೆ.ಶೇಷಾದ್ರಿ ಅಯ್ಯರ್, ಸರ್ ಎಂ.ವಿಶ್ವೇಶ್ವರಯ್ಯ, ಸರ್ ಮಿರ್ಜಾ ಇಸ್ಮಾಯಿಲ್, ಮಾಧವರಾವ್- ಇವರಷ್ಟೆ ಪ್ರಮುಖರೆಂಬುದು. ಲಕ್ಷಾಂತರ ಮಂದಿ ಓದುವ ಸ್ಪರ್ಧಾತ್ಮಕ ಪರೀಕ್ಷೆಗಳ ಪಠ್ಯಗಳಲ್ಲಿದೆ. ಆ ಪರೀಕ್ಷೆಗಳಲ್ಲಿ ಪಾಸಾಗಿ ಬಂದು ಅಧಿಕಾರಿಗಳಾದವರು ಮತ್ತೆ ಅಂಥದ್ದೇ ಚರಿತ್ರೆಯ ಪಠ್ಯಪುಸ್ತಕಗಳನ್ನು ರೂಪಿಸುತ್ತಾರಲ್ಲವೇ.</p><p>ಸರ್ ಎಂವಿ ಮತ್ತು ಸರ್ ಮಿರ್ಜಾ ಇಸ್ಮಾಯಿಲ್ ಅವರ ನಡುವಿನ ಅವಧಿಯ ದಿವಾನರ ಪಟ್ಟಿ ವಿಂಗಡಣೆಯಲ್ಲಿ ಕಾಂತರಾಜ ಅರಸ್ ಮತ್ತು ಮೊದಲ ದಕ್ಷಿಣ ಭಾರತೀಯೇತರ ದಿವಾನ್ ಆಲ್ಬಿಯನ್ ರಾಜ್ ಕುಮಾರ ಬ್ಯಾನರ್ಜಿ ಕಂಡುಬರುತ್ತಾರೆ. ಇವರ ಬಗ್ಗೆ ಓದದಿದ್ದರೂ ಪರವಾಗಿಲ್ಲ ಎಂಬ ಪರಿಸ್ಥಿತಿ ಇದೆ. ಇದರ ಹಿಂದಿನ ಮರ್ಮವೇನು?</p><p>ಯಾಕೆ ಇತಿಹಾಸದಲ್ಲಿ ಕೆಲವರನ್ನು ಮೆರೆಸಲಾಗುತ್ತದೆ? ಹಾಗೇ ಕೆಲವರನ್ನು ಮರೆಗೆ ಸರಿಸಲಾಗುತ್ತದೆ?</p>.ಮೈಸೂರು ಮಲ್ಲಿಗೆ ಅಂಕಣ: ‘ಕನ್ನಡ ಎಂ.ಎ’ಗೆ 99 ವರ್ಷ!.ಮೈಸೂರು ಮಲ್ಲಿಗೆ ಅಂಕಣ: ಮೈಸೂರೆನ್ನಿ, ಕನ್ನಡವೆನ್ನಿ, ಮಲ್ಲಿಗೆಯೆನ್ನಿ, ಒಂದೆ!.ಮೈಸೂರು ಮಲ್ಲಿಗೆ ಅಂಕಣ | ಮೈಸೂರು ಬ್ಯಾಂಕ್: ಮರೆತ ಅಭಿವೃದ್ಧಿಯ ಹಾಡು!.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕನ್ನಂಬಾಡಿ ಕಟ್ಟೆಯನ್ನು ಕಟ್ಟಲು ಹಣ ಸಾಲದಾದಾಗ ನಾಲ್ವಡಿಯವರು ತಮ್ಮ ತಾಯಿ ಕೆಂಪನಂಜಮ್ಮಣ್ಣಿಯವರ ಆಭರಣಗಳನ್ನು ಬಾಂಬೆ ಮಾರುಕಟ್ಟೆಯಲ್ಲಿ ಮಾರಿ ಹಣ ತಂದರು ಎಂದು ಎಲ್ಲರೂ ಹೇಳುತ್ತಾರೆ. ಆದರೆ ಅದಕ್ಕೆ ದಾಖಲೆ ಏನು? ಎಂದು ಇತಿಹಾಸದ ಅಧ್ಯಾಪಕರೊಬ್ಬರು ಆಕ್ಷೇಪಿಸಿದರು.</p><p>ದುರಿತ ಕಾಲದಲ್ಲಿ ಆಡಳಿತ ನಡೆಸಿದ ತಾಯಿ ಹಾಗೂ ನಂತರ ಅಧಿಕಾರಕ್ಕೆ ಬಂದ ಮಗ ಸೇರಿ ಮೈಸೂರು ಸಂಸ್ಥಾನದಲ್ಲಿ ರೂಪಿಸಿದ ಪ್ರಜಾಸತ್ತಾತ್ಮಕ ಕಾರ್ಯಕ್ರಮಗಳು, ಅದಕ್ಕಾಗಿ ಅವರ ತ್ಯಾಗ, ಬದ್ಧತೆಗಳ ಕುರಿತು ಕಳೆದ ವಾರ ‘ಮೈಸೂರು ಮಲ್ಲಿಗೆ’ ಅಂಕಣದಲ್ಲಿ ಉಲ್ಲೇಖಿಸಿದ ಪ್ರಚಲಿತ ಕಥನದ ಕುರಿತ ಆಕ್ಷೇಪ ಅದು. ಜನರ ಬದುಕಿನಲ್ಲಿ ಹಾಸುಹೊಕ್ಕಾಗಿಬಿಟ್ಟಿರುವ ಚರಿತ್ರೆಯ ಮಾತೊಂದು ಅವರನ್ನು ಒಂದೂವರೆ ದಶಕದಿಂದ ಕಾಡುತ್ತಿದೆ. ಅವರ ಆಕ್ಷೇಪಣೆಯೂ ಸರಿ ಇದೆ.</p><p>ಆದರೆ ಅವರು ಈ ಪ್ರಶ್ನೆಯನ್ನೇ ಮುಖ್ಯವಾಗಿರಿಸಿಕೊಂಡು ಈ ಸುದೀರ್ಘ ಅವಧಿಯಲ್ಲಿ ದಾಖಲೆ ಸಹಿತ ಏನನ್ನಾದರೂ ಬರೆದ ನಿದರ್ಶನವಿಲ್ಲ. ಆದರೆ ದಾಖಲೆಗಳನ್ನು ಹುಡುಕುವ ಪ್ರಯತ್ನ ಮಾತ್ರ ಜಾರಿಯಲ್ಲಿಟ್ಟಿದ್ದಾರೆ. ‘ಒಂದೆರಡು ಸಂಕಿರಣದಲ್ಲಿ ಈ ಬಗ್ಗೆ ಕೇಳಿದಾಗ ವಿದ್ವಾಂಸರಿಂದ ಸರಿಯಾದ ಉತ್ತರ ಸಿಗಲಿಲ್ಲ’ ಎಂಬುದಷ್ಟೇ ಅವರು ತಮ್ಮ ಅಸಮಾಧಾನಕ್ಕೆ ಕೊಟ್ಟ ಸ್ಪಷ್ಟನೆ. ಅಣೆಕಟ್ಟು ಕಟ್ಟಿದ ಯಶಸ್ಸಿನ ಕಥೆಗೆ ಮಾಡಿದ ತ್ಯಾಗದ ಕುರಿತ ಸಾಕ್ಷಿ ಇಲ್ಲ ಎಂದಾದರೆ, ಅದನ್ನು ದಿಟ್ಟತನದಿಂದ ಹೇಳುವ ಪ್ರಯತ್ನವೂ ಆಗಿಲ್ಲ.</p><p>‘ಅರಸರು ಈ ನಾಡಿಗೆ ನೀಡಿದ ಮಹಾನ್ ಕೊಡುಗೆಗಳನ್ನು ನೋಡಿದರೆ, ಇದು ಗಂಭೀರವಾಗಿ ಪರಿಗಣಿಸಬೇಕಾದ ಆಕ್ಷೇಪಣೆಯಲ್ಲ’ ಎಂಬುದು ‘ರಾಜಭಕ್ತಿ’ಯುಳ್ಳವರ ಪ್ರತಿಪಾದನೆ. ಆಡುಮಾತಿನ ಚರಿತ್ರೆ ಮತ್ತು ದಾಖಲೆಗಳು ಹೇಳುವ ಚರಿತ್ರೆಯಲ್ಲಿ ಯಾವುದನ್ನು ಹೇಗೆ ತೂಗಿ ನೋಡಬೇಕು? ಇದು ಸದ್ಯದ ಪ್ರಶ್ನೆ.</p><p>ಈ ನಡುವೆ, ಹನಸೋಗೆ ಸೋಮಶೇಖರ್ ಅವರ ರಚನೆಯ ‘ಮರೆಯೋದುಂಟೆ ಮೈಸೂರು ದೊರೆಯಾ‘ ಹಾಡು ಜನಪ್ರಿಯತೆಯ ಅಲೆಯ ಮೇಲೆ ತೇಲುತ್ತಿದೆ. ಈ ಹಾಡು ಹೇಳುವವರು ಮತ್ತು ಕೇಳುವವರಲ್ಲಿ ನಾಲ್ವಡಿಯರ ಕುರಿತು ಧನ್ಯತಾ ಭಾವ ಹೆಚ್ಚುತ್ತಲೇ ಇದೆ. ಅದರೊಂದಿಗೆ, ‘ಬಂಗಾರದ ಮನುಷ್ಯ’ ಸಿನಿಮಾದಲ್ಲಿ ಡಾ.ರಾಜ್ ಹಾಡುವ ‘ಕಾವೇರಿಯನು ಹರಿಯಲು ಬಿಟ್ಟು, ವಿಶ್ವೇಶ್ವರಯ್ಯ ಶ್ರಮ ಪಡದಿದ್ದರೆ, ಕನ್ನಂಬಾಡಿಯ ಕಟ್ಟದಿದ್ದರೆ, ಬಂಗಾರ ಬೆಳೆವ ಹೊನ್ನಾಡು, ಆಗುತ್ತಿತ್ತೇ ಈ ನಾಡು, ಕನ್ನಡ ಸಿರಿನಾಡು’ ಸಾಲುಗಳೂ ಕನ್ನಡಿಗರೆದೆಯಲ್ಲಿ ಅನುರಣಿಸುತ್ತಿವೆ. ಕನ್ನಂಬಾಡಿ ಕಟ್ಟೆಯ ‘ಕೊಡುಗೆ’ಯನ್ನು ಯಾರ ಹೆಸರಿಗೆ ಸೇರಿಸುವುದು? ಯೋಜನೆಗೆ ಹಣ ನೀಡಿ, ಕಟ್ಟಲು ವಿಶ್ವೇಶ್ವರಯ್ಯನವರಿಗೆ ಅವಕಾಶ ನೀಡಿದ ನಾಲ್ವಡಿಯವರಿಗೋ ಅಥವಾ ನಾಲ್ವಡಿಯವರ ನೇತೃತ್ವದಲ್ಲಿ ಕಟ್ಟಿದ ವಿಶ್ವೇಶ್ವರಯ್ಯನವರಿಗೋ?</p><p>‘ಸರ್.ಎಂ.ವಿಶ್ವೇಶ್ವರಯ್ಯನವರು ಇಲ್ಲದಿದ್ದರೆ ಅಣೆಕಟ್ಟು ನಿರ್ಮಾಣ ಬಹಳ ಕಷ್ಟವಿತ್ತು. ನಾಲ್ವಡಿಯವರೇ ಅಣಕಟ್ಟೆ ಕಟ್ಟಿದರು ಎಂದು ಹೇಳುವವರು, ಅಣೆಕಟ್ಟು ನಿರ್ಮಾಣ ಮಾಡುವಾಗ ಎಷ್ಟು ಬಾರಿ ಅಲ್ಲಿಗೆ ಭೇಟಿ ನೀಡಿದ್ದರು? ವಿಶ್ವೇಶ್ವರಯ್ಯ ಎಷ್ಟು ಬಾರಿ ಭೇಟಿ ನೀಡಿದ್ದರು ಎಂಬ ಬಗ್ಗೆ ದಾಖಲೆ ಇದೆಯಾ’ ಮತ್ತೆ ಆ ಅಧ್ಯಾಪಕರು ದಾಖಲೆಗಳ ಪ್ರಶ್ನೆ ಎತ್ತಿದರು.</p>.<p>ದಿವಾನರು ಮಹಾರಾಜರ ನೇತೃತ್ವದಲ್ಲಿ ನೇಮಕಗೊಂಡವರು. ಅವರು ಕೊಟ್ಟ ಕೆಲಸವನ್ನು ಮಾಡಿದರು. ಯಾರೇ ದಿವಾನರಾಗಿರಲಿ. ಮಹಾರಾಜರಿಗೆ ಅಧೀನರಾಗಿರಬೇಕು. ಸ್ವತಂತ್ರವಾಗಿ ತೀರ್ಮಾನ ಕೈಗೊಳ್ಳುವುದಾದರೆ ವಿಶ್ವೇಶ್ವರಯ್ಯ ಏಕೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು?– ರಾಜರ ಪರವಾದ ನಿಲುವುಳ್ಳವರ ಈ ಪ್ರಶ್ನೆಯನ್ನೂ ಇಲ್ಲಿ ಮುಖಾಮುಖಿ ಮಾಡಬೇಕು.</p><p>‘ಮೈಸೂರು ಸಂಸ್ಥಾನದ ಅಭಿವೃದ್ಧಿಗೆ ರಾಜರ ಕೊಡುಗೆ ಅಪಾರ’ ಎಂದು ಹಾಡಿಹೊಗಳುವ ಪರಿಪಾಠ ಹಾಗೂ ‘ರಾಜರು ಏನೂ ಮಾಡಲಿಲ್ಲ. ಮಾಡಿದ್ದೆಲ್ಲ ದಿವಾನರುಗಳು ಮತ್ತು ಆಡಳಿತ ಮಂಡಳಿಗಳು’ ಎಂಬ ಎರಡು ಪ್ರತಿಪಾದನೆಗಳು ಹೀಗೆ ಚರ್ಚೆ, ವಾಗ್ವಾದಗಳನ್ನು ಹುಟ್ಟುಹಾಕುತ್ತಲೇ ಇವೆ. ಆದರೆ ಯಾರ ಕೊಡುಗೆ ಎಷ್ಟು ಎಂಬ ಬಗ್ಗೆ ದಾಖಲೆಗಳನ್ನು ಆಧರಿಸಿದ ನಿರೂಪಣೆಗಳು ಬಹಳ ಕಡಿಮೆ. ಈ ಮಧ್ಯೆ ‘ಮೈಸೂರಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್ಗಿಂತಲೂ ಸಿದ್ದರಾಮಯ್ಯ ಕೊಡುಗೆ ಜಾಸ್ತಿ’ ಎಂದು ಕಳೆದ ವರ್ಷ ಅವರ ಮಗ, ವಿಧಾನಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಹೇಳಿದ್ದು ದೊಡ್ಡ ವಿವಾದವಾಗಿತ್ತು.</p><p>ದಿವಾನರುಗಳ ಬಗ್ಗೆ ತಿಳಿದುಕೊಳ್ಳಬೇಕೆನ್ನುವವರಿಗೆ ಹಲವರು ಶಿಫಾರಸು ಮಾಡುವ ಡಿ.ವಿ.ಗುಂಡಪ್ಪನವರ ‘ಮೈಸೂರಿನ ದಿವಾನರುಗಳು ಕೃತಿ ಕೂಡ ಪರಿಚಯ, ಸ್ನೇಹ, ಸೌಹಾರ್ದಗಳ ನೆಲೆಯಲ್ಲೇ ದಿವಾನರುಗಳ ಕಾರ್ಯವೈಖರಿಯನ್ನು ವಿವರಿಸುತ್ತದೆಯೇ ಹೊರತು ಒಂದು ಕಾಲಘಟ್ಟ ಮತ್ತು ಆ ಸಂದರ್ಭದ ರಾಜರು–ದಿವಾನರುಗಳ ಆಡಳಿತದ ಕುರಿತ ವಿಮರ್ಶಾತ್ಮಕ ಒಳನೋಟ ನೀಡುವ ಪ್ರಯತ್ನಗಳು ಕಡಿಮೆ. ದಿವಾನರುಗಳಾಗಿದ್ದವರ ಆತ್ಮಚರಿತ್ರೆ, ಜೀವನ ಚರಿತ್ರೆಗಳು, ಮೈಸೂರು ಸಂಸ್ಥಾನದ ದಾಖಲೆಗಳು, ಪತ್ರಾಗಾರ ಇಲಾಖೆಯಲ್ಲಿರುವ ಸಂಗ್ರಹಗಳು, ವಿದೇಶಿಯರು ಬರೆದ ಚರಿತ್ರೆಗಳ ಮೂಲಕವೇ ರಾಜರು ಮತ್ತು ದಿವಾನರ ಸಾಮರ್ಥ್ಯ ಮತ್ತು ಮಿತಿಗಳನ್ನು ಗುರುತಿಸಿಕೊಳ್ಳಬಹುದು. ಇದು ರಾಜರು ಮತ್ತು ಅವರ ಅವಧಿಯಲ್ಲಿ ದಿವಾನರಾಗಿ ನೇಮಕಗೊಂಡವರ ಚರಿತ್ರೆ. ಆ ನೆಲೆಯಲ್ಲೇ ‘ಶ್ರಮ’ ವಿಭಜನೆಯಾಗಬೇಕು. ಹೀಗೆ ಹೇಳುವ ಸಮಯದಲ್ಲಿ, ಹೈದರ್ ಆಲಿ ಮತ್ತು ಟಿಪ್ಪು ಸುಲ್ತಾನ್ ನೆನಪಾಗದೇ ಇರುವರೇ?</p><p>ಇನ್ನೊಂದು ಸಂಗತಿಯನ್ನು ಗಮನಿಸಬಹುದು. ಅದು ದಿವಾನರುಗಳ ಪಾತ್ರ ಮಹತ್ವದ ಪ್ರತಿಪಾದನೆಯಲ್ಲೂ ತಾರತಮ್ಯ ಭಾವವಿರುವುದು. ರಾಜರು ಹೆಚ್ಚೋ ದಿವಾನರು ಹೆಚ್ಚೋ ಎಂಬ ಪ್ರಶ್ನೆಯೊಂದಿಗೆ ‘ಯಾವ ದಿವಾನರು ಹೆಚ್ಚು‘ ಎಂಬುದೂ ಇದೆ. ಜನಮಾನಸದಲ್ಲಿ ಉಳಿದಿರುವ ದಿವಾನರೊಂದಿಗೆ. ಜನ ಮರೆತುಹೋದ ದಿವಾನರೂ ಇದ್ದಾರೆ! ಜನ ಅವರಾಗಿಯೇ ಮರೆತುಹೋದರೆ ಅಥವಾ ಮರೆಯುವಂತೆ ಮಾಡಲಾಯಿತೇ?</p>.<p>ಕೆಂಪನಂಜಮ್ಮಣ್ಣಿಯವರು ಹೇಗೆ ತಮ್ಮ ಸಹೋದರನಾದ ಸರ್.ಎಂ.ಕಾಂತರಾಜ ಅರಸರ ದಿವಾನಗಿರಿಯಲ್ಲಿ ಆಡಳಿತ ನಡೆಸಿದರು ಎಂಬುದು ಅರಸರ ಆಡಳಿತದ ಚರಿತ್ರೆಯಲ್ಲಿ ಭಿನ್ನ ಅಧ್ಯಾಯ. ಏಕೆಂದರೆ ಉಳಿದ ದಿವಾನರುಗಳೆಲ್ಲ ಅರಸೇತರ ಕುಟುಂದವರಾಗಿದ್ದರು. ಈ ನೆಲೆಯಲ್ಲೂ ಅಧ್ಯಯನಗಳು ನಡೆದಿಲ್ಲ.</p><p>ಯಾಕೆ ಕೆಲವೇ ದಿನಾನರುಗಳ ಚರಿತ್ರೆಯನ್ನಷ್ಟೆ ಸ್ಮರಿಸಲಾಗುತ್ತದೆ. ಸುದೀರ್ಘ ಆಡಳಿತ ನಡೆಸಿದ ಪೂರ್ಣಯ್ಯನವರನ್ನೂ ಅಷ್ಟಾಗಿ ಸ್ಮರಿಸದ ಸನ್ನೀವೇಶವೇ ಈಗಲೂ ಇದೆ. ಚರಿತ್ರೆ ಪಾಠ ಮಾಡುವವರಲ್ಲೂ ಇದೇ ಪ್ರವೃತ್ತಿ ಇದೆ. ಏಕೆಂದರೆ ಚರಿತ್ರೆಯ ಪಠ್ಯ ಪುಸ್ತಕಗಳಲ್ಲೂ ಅಷ್ಟೇ ಇದೆ.</p><p>ಮೊದಲ ದಿವಾನರಾದ ಸಿ.ವಿ. ರಂಗಾಚಾರ್ಲು ಅವರಿಂದ ಸ್ವಾತಂತ್ರ್ಯ ಪೂರ್ವ ಹಂತದಲ್ಲಿದ್ದ ಕೊನೆಯ ದಿವಾನರಾದ ಎನ್. ಮಾಧವ ರಾವ್ವರೆಗೆ ನೋಡಿದಾಗ, ಕೆ.ಶೇಷಾದ್ರಿ ಅಯ್ಯರ್, ಸರ್ ಎಂ.ವಿಶ್ವೇಶ್ವರಯ್ಯ, ಸರ್ ಮಿರ್ಜಾ ಇಸ್ಮಾಯಿಲ್, ಮಾಧವರಾವ್- ಇವರಷ್ಟೆ ಪ್ರಮುಖರೆಂಬುದು. ಲಕ್ಷಾಂತರ ಮಂದಿ ಓದುವ ಸ್ಪರ್ಧಾತ್ಮಕ ಪರೀಕ್ಷೆಗಳ ಪಠ್ಯಗಳಲ್ಲಿದೆ. ಆ ಪರೀಕ್ಷೆಗಳಲ್ಲಿ ಪಾಸಾಗಿ ಬಂದು ಅಧಿಕಾರಿಗಳಾದವರು ಮತ್ತೆ ಅಂಥದ್ದೇ ಚರಿತ್ರೆಯ ಪಠ್ಯಪುಸ್ತಕಗಳನ್ನು ರೂಪಿಸುತ್ತಾರಲ್ಲವೇ.</p><p>ಸರ್ ಎಂವಿ ಮತ್ತು ಸರ್ ಮಿರ್ಜಾ ಇಸ್ಮಾಯಿಲ್ ಅವರ ನಡುವಿನ ಅವಧಿಯ ದಿವಾನರ ಪಟ್ಟಿ ವಿಂಗಡಣೆಯಲ್ಲಿ ಕಾಂತರಾಜ ಅರಸ್ ಮತ್ತು ಮೊದಲ ದಕ್ಷಿಣ ಭಾರತೀಯೇತರ ದಿವಾನ್ ಆಲ್ಬಿಯನ್ ರಾಜ್ ಕುಮಾರ ಬ್ಯಾನರ್ಜಿ ಕಂಡುಬರುತ್ತಾರೆ. ಇವರ ಬಗ್ಗೆ ಓದದಿದ್ದರೂ ಪರವಾಗಿಲ್ಲ ಎಂಬ ಪರಿಸ್ಥಿತಿ ಇದೆ. ಇದರ ಹಿಂದಿನ ಮರ್ಮವೇನು?</p><p>ಯಾಕೆ ಇತಿಹಾಸದಲ್ಲಿ ಕೆಲವರನ್ನು ಮೆರೆಸಲಾಗುತ್ತದೆ? ಹಾಗೇ ಕೆಲವರನ್ನು ಮರೆಗೆ ಸರಿಸಲಾಗುತ್ತದೆ?</p>.ಮೈಸೂರು ಮಲ್ಲಿಗೆ ಅಂಕಣ: ‘ಕನ್ನಡ ಎಂ.ಎ’ಗೆ 99 ವರ್ಷ!.ಮೈಸೂರು ಮಲ್ಲಿಗೆ ಅಂಕಣ: ಮೈಸೂರೆನ್ನಿ, ಕನ್ನಡವೆನ್ನಿ, ಮಲ್ಲಿಗೆಯೆನ್ನಿ, ಒಂದೆ!.ಮೈಸೂರು ಮಲ್ಲಿಗೆ ಅಂಕಣ | ಮೈಸೂರು ಬ್ಯಾಂಕ್: ಮರೆತ ಅಭಿವೃದ್ಧಿಯ ಹಾಡು!.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>