‘ಅಶ್ವಿನ್ ತಂಡದಲ್ಲಿದ್ದಾಗ ಹರಭಜನ್ ಸಿಂಗ್ ಅವರನ್ನು ಕಡೆಗಣಿಸ ಲಾಯಿತು. ಈಗ ಅಶ್ವಿನ್ ಅವರನ್ನು ಹೊರಗಿಟ್ಟು ಹೊಸಬರಿಗೆ ಅವಕಾಶ ನೀಡಲಾಗುತ್ತಿದೆ. ಅವರ್ಯಾರು ಅಶ್ವಿನ್ ಹಾಗೆ ಶ್ರೇಷ್ಠ ಸಾಮರ್ಥ್ಯ ತೋರುತ್ತಿಲ್ಲ. ಹರಭಜನ್ ಅವರನ್ನು ತಂಡದಿಂದ ಹೊರಗಿಟ್ಟಾಗಲೂ ನನಗೆ ಆಶ್ಚರ್ಯವಾಗಿತ್ತು. ಅಶ್ವಿನ್ ಹಾಗೂ ಹರಭಜನ್ ಅವರ ಬೌಲಿಂಗ್ ಶೈಲಿ ಭಿನ್ನವಾಗಿತ್ತು. ಇಬ್ಬರು ಬಲಗೈ ವೇಗಿಗಳಿಗೆ ಆಡುವ ಹನ್ನೊಂದರ ಬಳಗದಲ್ಲಿ ಅವಕಾಶ ನೀಡ ಲಾಗುತ್ತದೆ. ಆದರೆ ಇಬ್ಬರು ಬಲಗೈ ಸ್ಪಿನ್ನರ್ಗಳನ್ನು ಆಡಿಸಲು ಹಿಂದೇಟು ಹಾಕಲಾಗುತ್ತದೆ. ಇದು ಯಾವ ನ್ಯಾಯ’ ಎಂದು ಅವರು ಪ್ರಶ್ನಿಸಿದ್ದಾರೆ.