ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ನಾಯಕ ವಿರಾಟ್ ಕೊಹ್ಲಿ ನಿರ್ಧಾರವನ್ನು ಸಮರ್ಥಿಸುವಂತೆ ಆಡಿದ ಬೌಲರ್ಗಳು ಆತಿಥೇಯರಿಗೆ ಆರಂಭದಲ್ಲೇ ಆಘಾತ ನೀಡಿದರು. ಮೊದಲ ಹತ್ತು ಓವರ್ ಮುಗಿಯುವ ಮುನ್ನವೇ ಆರಂಭಿಕರಿಬ್ಬರನ್ನೂ ಪೆವಿಲಿಯನ್ಗೆ ಕಳುಹಿಸಿದ ಭುವನೇಶ್ವರ್ ಕುಮಾರ್, ಆಸಿಸ್ರನ್ ಗಳಿಕೆಗೆ ತಡೆ ನೀಡಿದರು.