ರಾಜ್ಯ ಸಂಸ್ಥೆಯ ಮಾಜಿ ಅಧ್ಯಕ್ಷ ಶಿವಲಾಲ್ ಯಾದವ್ ಅಥವಾ ತಮಿಳುನಾಡಿನ ಎನ್. ಶ್ರೀನಿವಾಸನ್ ಅವರು ಎಚ್ಸಿಎ ಪ್ರತಿನಿಧಿಯಾಗಿ ಬಿಸಿಸಿಐ ಸಭೆಗೆ ತೆರಳುವರು ಎಂಬ ವದಂತಿ ಇತ್ತು. ಇದೀಗ ಅಜರ್ ಹೆಸರು ಅಧಿಕೃತವಾಗಿ ಘೋಷಣೆಯಾಗಿದೆ. ಅವರು ಪ್ರತಿನಿಧಿಯಾಗಿ ಭಾಗವಹಿಸುವರು. ಒಂದೊಮ್ಮೆ ಬಿಸಿಸಿಐ ಚುನಾವಣೆ ನಡೆದರೆ ಮತ ಕೂಡ ಚಲಾಯಿಸುವರು.