<p><strong>ಬೆಂಗಳೂರು</strong>: ಬೆಂಗಳೂರಿನಲ್ಲಿ ನಡೆಯಬೇಕಿದ್ದ ಈ ವರ್ಷದ ಐಪಿಎಲ್ ಫೈನಲ್ ಪಂದ್ಯದ ಗುಜರಾತ್ಗೆ ಎತ್ತಂಗಡಿ ಆಗಿದೆ. ಅಲ್ಲದೇ ಈ ಬೆಳವಣಿಗೆ ಕ್ರಿಕೆಟ್ ವಲಯದಲ್ಲಿ ವಿವಾದಕ್ಕೂ ಕಾರಣವಾಗಿದೆ.</p><p>ಫೈನಲ್ ಪಂದ್ಯ ಬೆಂಗಳೂರಿನಿಂದ ಎತ್ತಂಗಡಿ ಆಗಲು ರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯೇ (ಕೆಎಸ್ಸಿಎ) ಕಾರಣ ಎಂದು ಬೆರಳು ತೋರಿಸಲಾಗಿದ್ದು ಇದೀಗ ಸಂಸ್ಥೆಯ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸಿಬ್ಬಂದಿ ತೀವ್ರ ಮುಜುಗರಕ್ಕೆ ಒಳಗಾಗಿದ್ದಾರೆ ಎನ್ನಲಾಗಿದೆ</p><p><strong>ಕೆಎಸ್ಸಿಎ ಮೇಲೆ ಬಿಸಿಸಿಐ ನೇರ ಆರೋಪ!</strong></p><p>ಫೈನಲ್ ಪಂದ್ಯದಲ್ಲಿ 10 ಸಾವಿರ ಹೆಚ್ಚುವರಿ ಉಚಿತ ಟಿಕೆಟ್ಗಳಿಗಾಗಿ ಕೆಎಸ್ಸಿಎ ಬೇಡಿಕೆ ಇಟ್ಟಿತ್ತು. ಅದನ್ನು ಈಡೇರಿಸುವುದು ಅಸಾಧ್ಯವಾದ ಕಾರಣ ಫೈನಲ್ ಪಂದ್ಯವನ್ನು ಸ್ಥಳಾಂತರಿಸಬೇಕಾದ ಕಠಿಣ ನಿರ್ಧಾರ ಕೈಗೊಳ್ಳಬೇಕಾಯಿತು ಎಂದು ಸ್ವತಃ ಬಿಸಿಸಿಐ ಕಾರ್ಯದರ್ಶಿ ದೇವಜೀತ್ ಸೈಕಿಯಾ ಆರೋಪಿಸಿದ್ದಾರೆ.</p><p>‘ಐಪಿಎಲ್ ಶಿಷ್ಟಾಚಾರದ ಪ್ರಕಾರ ಆತಿಥ್ಯ ವಹಿಸುವ ರಾಜ್ಯ ಕ್ರಿಕೆಟ್ ಸಂಸ್ಥೆಗೆ ಆಯಾ ಕ್ರೀಡಾಂಗಣದ ಆಸನ ಸಾಮರ್ಥ್ಯದ ಶೇ 15ರಷ್ಟು ಟಿಕೆಟ್ಗಳನ್ನು ಉಚಿತವಾಗಿ ನೀಡಲಾಗುತ್ತದೆ. ಆದರೆ ಕೆಎಸ್ಸಿಎ ನಿಗದಿಯ ಕೋಟಾ ಅಲ್ಲದೇ ಹೆಚ್ಚುವರಿ 10 ಸಾವಿರ ಟಿಕೆಟ್ಗಳನ್ನೂ ಕೇಳಿತ್ತು. ಲೀಗ್ ಪಂದ್ಯಗಳ ಸಂದರ್ಭದಲ್ಲಿಯೂ<br>ಕೆಎಸ್ಸಿಎ ನಿಗದಿತ ಸಂಖ್ಯೆಗಿಂತಲೂ ಹೆಚ್ಚುವರಿ ಉಚಿತ ಟಿಕೆಟ್ಗಳನ್ನು ಪಡೆದಿತ್ತು ಎಂದು ಬೇರೆ ಬೇರೆ ಮೂಲಗಳಿಂದ ನಮಗೆ ತಿಳಿದುಬಂದಿತು‘ ಎಂದು ಸೈಕಿಯಾ ಹೇಳಿರುವುದಾಗಿ ದಿ ಸಂಡೇ ಗಾರ್ಡಿಯನ್ ವೆಬ್ಸೈಟ್ ವರದಿ ಮಾಡಿದೆ.</p><p>‘ಕೆಎಸ್ಸಿಎ ಬೇಡಿಕೆ ಕೇಳಿ ನನಗೆ ಶಾಕ್ ಆಗಿತ್ತು’ ಎಂದು ದೇವಜೀತ್ ಸೈಕಿಯಾ ಅಚ್ಚರಿ ವ್ಯಕ್ತಪಡಿಸಿದ್ದಾರೆ.</p><p>‘ಕೆಎಸ್ಸಿಎಯು ತನ್ನ ಸದಸ್ಯರು, ಮಾನ್ಯತೆ ಪಡೆದ ಕ್ಲಬ್ಗಳು, ಮತ್ತಿತರರಿಗೆ ನೀಡಲು ಉಚಿತ ಟಿಕೆಟ್ ಕೇಳಿತ್ತು. ಸ್ಥಳೀಯ ಶಾಸಕರು ಮತ್ತು ವಿಧಾನಪರಿಷತ್ ಸದಸ್ಯರಿಗೆ ಉಚಿತ ಟಿಕೆಟ್ ಹಂಚಲು ಕೂಡ ಉಚಿತ ಟಿಕೆಟ್ಗಾಗಿ ಮನವಿ ಮಾಡಿತ್ತು‘ ಎಂದು ತಿಳಿಸಿದರು.</p><p>ಮೇ 31ರಂದು ಐಪಿಎಲ್ ಫೈನಲ್ ಪಂದ್ಯ ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಚಿನ್ನಸ್ವಾಮಿ ಕ್ರೀಡಾಂಗಣದ ಆಸನ ಸಾಮರ್ಥ್ಯವು 36 ಸಾವಿರ ಇದೆ. ಆದರೆ ಅಹಮದಾಬಾದಿನಲ್ಲಿ 1.32 ಲಕ್ಷ ಇದೆ.</p>.ಶಾಸಕರ IPL ಟಿಕೆಟ್ ಬೇಡಿಕೆಯಿಂದಾಗಿ ಫೈನಲ್ ಆತಿಥ್ಯ ಬೆಂಗಳೂರಿಗೆ ಕೈತಪ್ಪುವ ಭೀತಿ.ಸೇಡು| IPL ಪಂದ್ಯದ ವೇಳೆ 240 ಸಿ.ಸಿ.ಟಿವಿ ಕ್ಯಾಮೆರಾ ಸಂಪರ್ಕ ಕಡಿತ: ಇಬ್ಬರ ಬಂಧನ .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ಬೆಂಗಳೂರಿನಲ್ಲಿ ನಡೆಯಬೇಕಿದ್ದ ಈ ವರ್ಷದ ಐಪಿಎಲ್ ಫೈನಲ್ ಪಂದ್ಯದ ಗುಜರಾತ್ಗೆ ಎತ್ತಂಗಡಿ ಆಗಿದೆ. ಅಲ್ಲದೇ ಈ ಬೆಳವಣಿಗೆ ಕ್ರಿಕೆಟ್ ವಲಯದಲ್ಲಿ ವಿವಾದಕ್ಕೂ ಕಾರಣವಾಗಿದೆ.</p><p>ಫೈನಲ್ ಪಂದ್ಯ ಬೆಂಗಳೂರಿನಿಂದ ಎತ್ತಂಗಡಿ ಆಗಲು ರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯೇ (ಕೆಎಸ್ಸಿಎ) ಕಾರಣ ಎಂದು ಬೆರಳು ತೋರಿಸಲಾಗಿದ್ದು ಇದೀಗ ಸಂಸ್ಥೆಯ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸಿಬ್ಬಂದಿ ತೀವ್ರ ಮುಜುಗರಕ್ಕೆ ಒಳಗಾಗಿದ್ದಾರೆ ಎನ್ನಲಾಗಿದೆ</p><p><strong>ಕೆಎಸ್ಸಿಎ ಮೇಲೆ ಬಿಸಿಸಿಐ ನೇರ ಆರೋಪ!</strong></p><p>ಫೈನಲ್ ಪಂದ್ಯದಲ್ಲಿ 10 ಸಾವಿರ ಹೆಚ್ಚುವರಿ ಉಚಿತ ಟಿಕೆಟ್ಗಳಿಗಾಗಿ ಕೆಎಸ್ಸಿಎ ಬೇಡಿಕೆ ಇಟ್ಟಿತ್ತು. ಅದನ್ನು ಈಡೇರಿಸುವುದು ಅಸಾಧ್ಯವಾದ ಕಾರಣ ಫೈನಲ್ ಪಂದ್ಯವನ್ನು ಸ್ಥಳಾಂತರಿಸಬೇಕಾದ ಕಠಿಣ ನಿರ್ಧಾರ ಕೈಗೊಳ್ಳಬೇಕಾಯಿತು ಎಂದು ಸ್ವತಃ ಬಿಸಿಸಿಐ ಕಾರ್ಯದರ್ಶಿ ದೇವಜೀತ್ ಸೈಕಿಯಾ ಆರೋಪಿಸಿದ್ದಾರೆ.</p><p>‘ಐಪಿಎಲ್ ಶಿಷ್ಟಾಚಾರದ ಪ್ರಕಾರ ಆತಿಥ್ಯ ವಹಿಸುವ ರಾಜ್ಯ ಕ್ರಿಕೆಟ್ ಸಂಸ್ಥೆಗೆ ಆಯಾ ಕ್ರೀಡಾಂಗಣದ ಆಸನ ಸಾಮರ್ಥ್ಯದ ಶೇ 15ರಷ್ಟು ಟಿಕೆಟ್ಗಳನ್ನು ಉಚಿತವಾಗಿ ನೀಡಲಾಗುತ್ತದೆ. ಆದರೆ ಕೆಎಸ್ಸಿಎ ನಿಗದಿಯ ಕೋಟಾ ಅಲ್ಲದೇ ಹೆಚ್ಚುವರಿ 10 ಸಾವಿರ ಟಿಕೆಟ್ಗಳನ್ನೂ ಕೇಳಿತ್ತು. ಲೀಗ್ ಪಂದ್ಯಗಳ ಸಂದರ್ಭದಲ್ಲಿಯೂ<br>ಕೆಎಸ್ಸಿಎ ನಿಗದಿತ ಸಂಖ್ಯೆಗಿಂತಲೂ ಹೆಚ್ಚುವರಿ ಉಚಿತ ಟಿಕೆಟ್ಗಳನ್ನು ಪಡೆದಿತ್ತು ಎಂದು ಬೇರೆ ಬೇರೆ ಮೂಲಗಳಿಂದ ನಮಗೆ ತಿಳಿದುಬಂದಿತು‘ ಎಂದು ಸೈಕಿಯಾ ಹೇಳಿರುವುದಾಗಿ ದಿ ಸಂಡೇ ಗಾರ್ಡಿಯನ್ ವೆಬ್ಸೈಟ್ ವರದಿ ಮಾಡಿದೆ.</p><p>‘ಕೆಎಸ್ಸಿಎ ಬೇಡಿಕೆ ಕೇಳಿ ನನಗೆ ಶಾಕ್ ಆಗಿತ್ತು’ ಎಂದು ದೇವಜೀತ್ ಸೈಕಿಯಾ ಅಚ್ಚರಿ ವ್ಯಕ್ತಪಡಿಸಿದ್ದಾರೆ.</p><p>‘ಕೆಎಸ್ಸಿಎಯು ತನ್ನ ಸದಸ್ಯರು, ಮಾನ್ಯತೆ ಪಡೆದ ಕ್ಲಬ್ಗಳು, ಮತ್ತಿತರರಿಗೆ ನೀಡಲು ಉಚಿತ ಟಿಕೆಟ್ ಕೇಳಿತ್ತು. ಸ್ಥಳೀಯ ಶಾಸಕರು ಮತ್ತು ವಿಧಾನಪರಿಷತ್ ಸದಸ್ಯರಿಗೆ ಉಚಿತ ಟಿಕೆಟ್ ಹಂಚಲು ಕೂಡ ಉಚಿತ ಟಿಕೆಟ್ಗಾಗಿ ಮನವಿ ಮಾಡಿತ್ತು‘ ಎಂದು ತಿಳಿಸಿದರು.</p><p>ಮೇ 31ರಂದು ಐಪಿಎಲ್ ಫೈನಲ್ ಪಂದ್ಯ ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಚಿನ್ನಸ್ವಾಮಿ ಕ್ರೀಡಾಂಗಣದ ಆಸನ ಸಾಮರ್ಥ್ಯವು 36 ಸಾವಿರ ಇದೆ. ಆದರೆ ಅಹಮದಾಬಾದಿನಲ್ಲಿ 1.32 ಲಕ್ಷ ಇದೆ.</p>.ಶಾಸಕರ IPL ಟಿಕೆಟ್ ಬೇಡಿಕೆಯಿಂದಾಗಿ ಫೈನಲ್ ಆತಿಥ್ಯ ಬೆಂಗಳೂರಿಗೆ ಕೈತಪ್ಪುವ ಭೀತಿ.ಸೇಡು| IPL ಪಂದ್ಯದ ವೇಳೆ 240 ಸಿ.ಸಿ.ಟಿವಿ ಕ್ಯಾಮೆರಾ ಸಂಪರ್ಕ ಕಡಿತ: ಇಬ್ಬರ ಬಂಧನ .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>