‘ಜನರು ಈ ಪರಿಸ್ಥಿತಿಯಲ್ಲಿ ಸರ್ಕಾರದ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ವೈರಸ್ ಸೋಂಕಿನ ಕುರಿತು ಯಾವುದೇ ರೀತಿಯ ಉಡಾಫೆ ಸಲ್ಲದು. ಪ್ರತಿಯೊಬ್ಬರೂ ಯೋಧನಂತೆ ಹೋರಾಡುವ ಸ್ಥಿತಿ ಇದು. ದೇಶಕ್ಕಾಗಿ ಸೇವೆ ಸಲ್ಲಿಸುವ ಅಪೂರ್ವ ಅವಕಾಶ ಇದು. ಅದಕ್ಕಾಗಿ ತಮ್ಮ ಕುಟುಂಬದೊಂದಿಗೆ ಮನೆಯೊಳಗೆ ನೆಮ್ಮದಿಯಾಗಿರಿ’ ಎಂದು ಪೂಜಾರ ಹೇಳಿದ್ದಾರೆ.