ಧಾರ್ಮಿಕ ದತ್ತಿ ಇಲಾಖೆಯ ಅನುದಾನವನ್ನು ಖರ್ಚು ಮಾಡಲು ಮಂಗಳೂರು ಮತ್ತು ಉಡುಪಿ ಜಿಲ್ಲೆಗಳ ಹಲವಾರು ದೇವಸ್ಥಾನಗಳಲ್ಲಿ ‘ಬ್ರಹ್ಮಕಲಶೋತ್ಸವ’ ನಡೆಸಲಾಗುತ್ತಿದೆ. ಇದನ್ನು ಧಾರ್ಮಿಕ ವಿಧಿ ಎನ್ನಲಾಗುತ್ತಿದ್ದರೂ, ವಾಸ್ತವದಲ್ಲಿ ಚುನಾವಣೆಗೂ ಮುನ್ನ ಲಕ್ಷಾಂತರ ರೂಪಾಯಿ ವೆಚ್ಚ ಮಾಡಲು ಏರ್ಪಡಿಸಿದ ಭ್ರಷ್ಟ ನಡೆಯಾಗಿದೆ.
ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ನೂರಾರು ಕಟ್ಟಡಗಳು ದುರಸ್ತಿ ಕಾಣದೆ, ಕಂಪ್ಯೂಟರ್ ಮುಂತಾದ ಅಗತ್ಯ ಸೌಲಭ್ಯಗಳಿಲ್ಲದೆ ಸೊರಗುತ್ತಿವೆ. ರಾಜ್ಯ ಸರ್ಕಾರವು ಮಕ್ಕಳ ವಿದ್ಯಾಭ್ಯಾಸಕ್ಕೆ ಸವಲತ್ತು ನೀಡುವುದನ್ನು ಬಿಟ್ಟು, ಈಗ ನಡೆಸುತ್ತಿರುವ ಬ್ರಹ್ಮಕಲಶೋತ್ಸವದಲ್ಲಿ ಬ್ರಹ್ಮನಿಗೆಷ್ಟು ಸಮರ್ಪಣೆ?
ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಬ್ರಹ್ಮಕಲಶೋತ್ಸವ ಏರ್ಪಡಿಸುವ ದೇವಸ್ಥಾನಗಳ ವ್ಯವಸ್ಥಾಪನಾ ಸಮಿತಿಗಳು ಮತ್ತು ಕಾರ್ಯನಿರ್ವಾಹಕ ಅಧಿಕಾರಿಗಳ ವಿರುದ್ಧ ತನಿಖೆ ಮಾಡಬಾರದೇಕೆ? –ಶ್ಯಾಮರಾವ್ ಕೆ., ಬಂಟ್ವಾಳ