<p><strong>ಬೆಂಗಳೂರು:</strong> ರೈಲು ಗಾಲಿ ಕಾರ್ಖಾನೆ ಕ್ರೀಡಾ ಅಸೋಸಿಯೇಶನ್ ತಂಡವು ಕೆಎಸ್ಸಿಎ ಗುಂಪು 2, ಡಿವಿಷನ್ –1ರ ಲೀಗ್ ಕಮ್ ನಾಕೌಟ್ ಟಿ20 ಕ್ರಿಕೆಟ್ ಟೂರ್ನಿಯ ಫೈನಲ್ನಲ್ಲಿ ಬುಧವಾರ 50 ರನ್ಗಳಿಂದ ಕೆನರಾ ಬ್ಯಾಂಕ್ ತಂಡವನ್ನು ಮಣಿಸಿ, ಚಾಂಪಿಯನ್ ಆಗಿ ಹೊರಹೊಮ್ಮಿತು.</p>.<p>ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ರೈಲು ಗಾಲಿ ಕಾರ್ಖಾನೆ ತಂಡವು ನಿಗದಿತ ಓವರ್ಗಳಲ್ಲಿ 7 ವಿಕೆಟ್ಗೆ 182 ರನ್ ಪೇರಿಸಿತು. ಜಾಸ್ಪರ್ ಇ.ಜೆ. 51 ಎಸೆತಗಳಲ್ಲಿ ಅಜೇಯ 93 ರನ್ ಸಿಡಿಸಿದರು. ಅವರ ಇನಿಂಗ್ಸ್ನಲ್ಲಿ 7 ಬೌಂಡರಿ ಹಾಗೂ 5 ಸಿಕ್ಸರ್ಗಳಿದ್ದವು. ಆಲ್ರೌಂಡರ್ ಅಕ್ಷಯ್ ಸಿ.ಕೆ. 43 ರನ್ ಗಳಿಸಿದರು.</p>.<p>ಸವಾಲಿನ ಗುರಿ ಬೆನ್ನಟ್ಟಿದ ಕೆನರಾ ಬ್ಯಾಂಕ್ ತಂಡವು ಅಕ್ಷಯ್ (13ಕ್ಕೆ4) ಹಾಗೂ ಸಯ್ಯದ್ ಖಾಜಾ ಮೊಯಿನುದ್ದೀನ್ (11ಕ್ಕೆ3) ಅವರ ಪರಿಣಾಮಕಾರಿ ಬೌಲಿಂಗ್ ಎದುರು 19.1 ಓವರ್ಗಳಲ್ಲಿ 132 ರನ್ಗಳಿಗೆ ಸರ್ವಪತನವಾಯಿತು. ಕೃಷವ್ ಸೋಮಸುಂದರ್ (56; 44ಎ) ಹೊರತುಪಡಿಸಿ ಉಳಿದ ಬ್ಯಾಟರ್ಗಳು ವಿಫಲರಾದರು.</p>.<p><strong>ಸಂಕ್ಷಿಪ್ತ ಸ್ಕೋರು:</strong> ರೈಲು ಗಾಲಿ ಕಾರ್ಖಾನೆ ಕ್ರೀಡಾ ಅಸೋಸಿಯೇಶನ್: 20 ಓವರ್ಗಳಲ್ಲಿ 7 ವಿಕೆಟ್ಗೆ 182 (ಜಾಸ್ಪರ್ ಇ.ಜೆ. ಔಟಾಗದೇ 93, ಅಕ್ಷಯ್ ಸಿ.ಕೆ. 43; ನವೀನ್ ಎಂ.ಜಿ. 37ಕ್ಕೆ2, ಲವಿಶ್ ಕೌಶಲ್ 46ಕ್ಕೆ2). ಕೆನರಾ ಬ್ಯಾಂಕ್: 19.1 ಓವರ್ಗಳಲ್ಲಿ 132 (ಕೃಷವ್ ಸೋಮಸುಂದರ್ 56; ಅಕ್ಷಯ್ ಸಿ.ಕೆ. 13ಕ್ಕೆ4, ಎಸ್.ಕೆ. ಮೊಯಿನುದ್ದೀನ್ 11ಕ್ಕೆ3, ಮನ್ವಂತ್ ಕುಮಾರ್ ಎಲ್. 17ಕ್ಕೆ2).</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ರೈಲು ಗಾಲಿ ಕಾರ್ಖಾನೆ ಕ್ರೀಡಾ ಅಸೋಸಿಯೇಶನ್ ತಂಡವು ಕೆಎಸ್ಸಿಎ ಗುಂಪು 2, ಡಿವಿಷನ್ –1ರ ಲೀಗ್ ಕಮ್ ನಾಕೌಟ್ ಟಿ20 ಕ್ರಿಕೆಟ್ ಟೂರ್ನಿಯ ಫೈನಲ್ನಲ್ಲಿ ಬುಧವಾರ 50 ರನ್ಗಳಿಂದ ಕೆನರಾ ಬ್ಯಾಂಕ್ ತಂಡವನ್ನು ಮಣಿಸಿ, ಚಾಂಪಿಯನ್ ಆಗಿ ಹೊರಹೊಮ್ಮಿತು.</p>.<p>ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ರೈಲು ಗಾಲಿ ಕಾರ್ಖಾನೆ ತಂಡವು ನಿಗದಿತ ಓವರ್ಗಳಲ್ಲಿ 7 ವಿಕೆಟ್ಗೆ 182 ರನ್ ಪೇರಿಸಿತು. ಜಾಸ್ಪರ್ ಇ.ಜೆ. 51 ಎಸೆತಗಳಲ್ಲಿ ಅಜೇಯ 93 ರನ್ ಸಿಡಿಸಿದರು. ಅವರ ಇನಿಂಗ್ಸ್ನಲ್ಲಿ 7 ಬೌಂಡರಿ ಹಾಗೂ 5 ಸಿಕ್ಸರ್ಗಳಿದ್ದವು. ಆಲ್ರೌಂಡರ್ ಅಕ್ಷಯ್ ಸಿ.ಕೆ. 43 ರನ್ ಗಳಿಸಿದರು.</p>.<p>ಸವಾಲಿನ ಗುರಿ ಬೆನ್ನಟ್ಟಿದ ಕೆನರಾ ಬ್ಯಾಂಕ್ ತಂಡವು ಅಕ್ಷಯ್ (13ಕ್ಕೆ4) ಹಾಗೂ ಸಯ್ಯದ್ ಖಾಜಾ ಮೊಯಿನುದ್ದೀನ್ (11ಕ್ಕೆ3) ಅವರ ಪರಿಣಾಮಕಾರಿ ಬೌಲಿಂಗ್ ಎದುರು 19.1 ಓವರ್ಗಳಲ್ಲಿ 132 ರನ್ಗಳಿಗೆ ಸರ್ವಪತನವಾಯಿತು. ಕೃಷವ್ ಸೋಮಸುಂದರ್ (56; 44ಎ) ಹೊರತುಪಡಿಸಿ ಉಳಿದ ಬ್ಯಾಟರ್ಗಳು ವಿಫಲರಾದರು.</p>.<p><strong>ಸಂಕ್ಷಿಪ್ತ ಸ್ಕೋರು:</strong> ರೈಲು ಗಾಲಿ ಕಾರ್ಖಾನೆ ಕ್ರೀಡಾ ಅಸೋಸಿಯೇಶನ್: 20 ಓವರ್ಗಳಲ್ಲಿ 7 ವಿಕೆಟ್ಗೆ 182 (ಜಾಸ್ಪರ್ ಇ.ಜೆ. ಔಟಾಗದೇ 93, ಅಕ್ಷಯ್ ಸಿ.ಕೆ. 43; ನವೀನ್ ಎಂ.ಜಿ. 37ಕ್ಕೆ2, ಲವಿಶ್ ಕೌಶಲ್ 46ಕ್ಕೆ2). ಕೆನರಾ ಬ್ಯಾಂಕ್: 19.1 ಓವರ್ಗಳಲ್ಲಿ 132 (ಕೃಷವ್ ಸೋಮಸುಂದರ್ 56; ಅಕ್ಷಯ್ ಸಿ.ಕೆ. 13ಕ್ಕೆ4, ಎಸ್.ಕೆ. ಮೊಯಿನುದ್ದೀನ್ 11ಕ್ಕೆ3, ಮನ್ವಂತ್ ಕುಮಾರ್ ಎಲ್. 17ಕ್ಕೆ2).</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>