’ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ವತಿಯಿಂದ ಸಿರಾಜ್ ಅವರೊಂದಿಗೆ ನಾವು ಮಾತನಾಡಿದ್ದೇವೆ. ಅವರಿಗೆ ತವರೂರಿಗೆ ತೆರಳಲು ಅನುಮತಿ ಕೂಡ ನೀಡಿದ್ದೆವು. ನಿರ್ಧಾರ ಅವರಿಗೆ ಬಿಡಲಾಗಿತ್ತು. ಈ ಸಂದರ್ಭದಲ್ಲಿ ಕುಟುಂಬದೊಂದಿಗೆ ಇರಲು, ಭಾರತಕ್ಕೆ ಮರಳಲು ಎಲ್ಲ ವ್ಯವಸ್ಥೆ ಮಾಡಲು ಸಿದ್ಧರಿದ್ದೆವು. ಆದರೆ, ಅವರು ತಂಡದೊಂದಿಗೇ ಉಳಿಯಲು ತೀರ್ಮಾನಿಸಿದರು. ರಾಷ್ಟ್ರೀಯ ತಂಡದ ಕರ್ತವ್ಯವನ್ನು ನಿಭಾಯಿಸುವುದಾಗಿ ಹೇಳಿದ್ದಾರೆ‘ ಎಂದು ಮಂಡಳಿಯ ಕಾರ್ಯದರ್ಶಿ ಜಯ್ ಶಾ ಹೇಳಿದ್ದಾರೆ.