ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಲೆಂಜರ್ಸ್‌ ಟ್ರೋಫಿ: ಭಾರತ ಸಿ ತಂಡಕ್ಕೆ ಶುಭಾಂಗ್ ನಾಯಕ

Last Updated 8 ನವೆಂಬರ್ 2019, 18:11 IST
ಅಕ್ಷರ ಗಾತ್ರ

ನವದೆಹಲಿ: ಕರ್ನಾಟಕದ ಎಡಗೈ ಆಲ್‌ರೌಂಡರ್ ಶುಭಾಂಗ್ ಹೆಗ್ಡೆ ಅವರನ್ನು 19 ವರ್ಷದೊಳಗಿನವರ ಚಾಲೆಂಜರ್ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಆಡುವ ಭಾರತ ಸಿ ತಂಡದ ನಾಯಕರನ್ನಾಗಿ ನೇಮಕ ಮಾಡಲಾಗಿದೆ.

ನವೆಂಬರ್ 11ರಿಂದ ಹೈದರಾಬಾದ್‌ನಲ್ಲಿ ನಡೆಯಲಿರುವ ಟೂರ್ನಿಯಲ್ಲಿ ಭಾರತ ಎ, ಬಿ ಮತ್ತು ಸಿ ತಂಡಗಳು ಆಡಲಿವೆ. ನೇಪಾಳ ‘ಎ’ ಕೂಡ ಸ್ಪರ್ಧಿಸಲಿದೆ. ಶುಕ್ರವಾರ ನಡೆದ ರಾಷ್ಟ್ರೀಯ ಜೂನಿಯರ್ ಕ್ರಿಕೆಟ್ ಆಯ್ಕೆ ಸಮಿತಿಯ ಸಭೆಯಲ್ಲಿ ಎ.ಬಿ ಮತ್ತು ಸಿ ತಂಡಗಳನ್ನು ಪ್ರಕಟಿಸಲಾಯಿತು. ಸಿ ತಂಡದಲ್ಲಿ ಕರ್ನಾಟಕದ ವಿದ್ಯಾಧರ್ ಪಾಟೀಲ ಸ್ಥಾನ ಪಡೆದಿದ್ದಾರೆ. ಹಿರಿಯ ಕ್ರಿಕೆಟಿಗ ಹೃಷಿಕೇಶ್ ಕಾನಿಟ್ಕರ್ ಅವರು ಈ ತಂಡಕ್ಕೆ ಕೋಚ್ ಆಗಿದ್ಧಾರೆ.

ವಿಕೆಟ್‌ಕೀಪರ್ ಧ್ರುವ ಚಾಂದ್ ಜುರೇಲ್ ಮತ್ತು ಪ್ರಿಯಂ ಗಾರ್ಗ್ ಅವರು ಕ್ರಮವಾಗಿ ಎ ಮತ್ತು ಬಿ ತಂಡಗಳ ನಾಯಕತ್ವ ವಹಿಸುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT