ಬೆಂಗಳೂರು: ವಿಶಾಲ್ ಒನಟ್ (ಬ್ಯಾಟಿಂಗ್ 170) ಹಾಗೂ ಚಿನ್ಮಯ್ ಎನ್.ಎ. (ಬ್ಯಾಟಿಂಗ್ 153) ಅವರ ಭರ್ಜರಿ ಶತಕ ಗಳಿಸಿದರು. ಅವರ ಆಟದ ನೆರವಿನಿಂದ ಕರ್ನಾಟಕ ತಂಡವು ಕೂಚ್ ಬೆಹಾರ್ ಟ್ರೋಫಿ 19 ವರ್ಷದೊಳಗಿನವರ ಕ್ರಿಕೆಟ್ ಪಂದ್ಯದಲ್ಲಿ ಉತ್ತಮ ಮೊತ್ತ ಗಳಿಸಿತು.
ಆಂಧ್ರಪ್ರದೇಶದ ವಿಜಯನಗರಂನ ಕಂದುಕೂರಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದ ಮೊದಲ ದಿನ ಕರ್ನಾಟಕ ತಂಡವು ಬರೋಡಾ ಎದುರು 90 ಓವರ್ಗಳಲ್ಲಿ 3 ವಿಕೆಟ್ಗೆ 356 ರನ್ ಗಳಿಸಿತು. 280 ಎಸೆತಗಳನ್ನು ಎದುರಿಸಿದ ವಿಶಾಲ್ 26 ಬೌಂಡರಿ ಒಂದು ಸಿಕ್ಸರ್ ಹೊಡೆದರೆ, ಚಿನ್ಮಯ್ ಅವರ 236 ಎಸೆತಗಳಲ್ಲಿ ಇನಿಂಗ್ಸ್ನಲ್ಲಿ 23 ಬೌಂಡರಿಗಳಿದ್ದವು.