ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೂಚ್‌ ಬಿಹಾರ್‌ ಟ್ರೋಫಿ ಕ್ರಿಕೆಟ್: ಕರ್ನಾಟಕದ ಬ್ಯಾಟಿಂಗ್‌ ವೈಫಲ್ಯ

Last Updated 19 ಜನವರಿ 2020, 19:45 IST
ಅಕ್ಷರ ಗಾತ್ರ

ಮೈಸೂರು:ಗಂಗೋತ್ರಿ ಗ್ಲೇಡ್ಸ್‌ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದ ಎರಡನೇ ದಿನವಾದ ಭಾನುವಾರ ಆತಿಥೇಯ ತಂಡ ಮೊದಲ ಇನಿಂಗ್ಸ್‌ನಲ್ಲಿ ಕೇವಲ 121 ರನ್‌ಗಳಿಗೆ ಆಲೌಟಾಯಿತು. ಮೋಹಿತ್‌ ಶಿಬು (37ಕ್ಕೆ 5) ಅವರ ಮೊನಚಿನ ದಾಳಿಗೆ ಕರ್ನಾಟಕ ಕುಸಿಯಿತು.

ತನ್ನ ಮೊದಲ ಇನಿಂಗ್ಸ್‌ನಲ್ಲಿ 194 ರನ್‌ ಗಳಿಸಿದ್ದ ಕೇರಳ, ದಿನದಾಟದ ಅಂತ್ಯಕ್ಕೆ ಎರಡನೇ ಇನಿಂಗ್ಸ್‌ನಲ್ಲಿ 7 ವಿಕೆಟ್‌ಗೆ 114 ರನ್‌ ಗಳಿಸಿದೆ. ತಾಹಾ ಖಾನ್‌ (32ಕ್ಕೆ 4) ಅವರು ಎದುರಾಳಿ ತಂಡಕ್ಕೆ ಆಘಾತ ನೀಡಿದರು. ಪ್ರವಾಸಿ ತಂಡ ಇದೀಗ ಒಟ್ಟಾರೆ 187 ರನ್‌ಗಳ ಮುನ್ನಡೆಯಲ್ಲಿದೆ.

ಸಂಕ್ಷಿಪ್ತ ಸ್ಕೋರ್: ಕೇರಳ ಮೊದಲ ಇನಿಂಗ್ಸ್: 77.1 ಓವರ್‌ಗಳಲ್ಲಿ 194, ಎರಡನೇ ಇನಿಂಗ್ಸ್ 56 ಓವರ್‌ಗಳಲ್ಲಿ 7 ವಿಕೆಟ್‌ಗೆ 114 (ಜೆ.ಅನಂತಕೃಷ್ಣನ್ 38, ಅಭಿಷೇಕ್‌ ನಾಯರ್‌ 22, ನಿಖಿಲ್‌ ಜೋಸ್‌ ಬ್ಯಾಟಿಂಗ್ 24, ತಾಹಾ ಖಾನ್‌ 32ಕ್ಕೆ 4, ರೋಹಿತ್‌ ಕುಮಾರ್‌ 22ಕ್ಕೆ 2) ಕರ್ನಾಟಕ ಮೊದಲ ಇನಿಂಗ್ಸ್: 49.5 ಓವರ್‌ಗಳಲ್ಲಿ 121 (ಚಿರಾಗ್‌ ನಾಯಕ್ 24, ಕೆ.ವಿ.ಅನೀಶ್‌ 24, ಆರ್‌.ಸ್ಮರಣ್‌ 22, ಮೋಹಿತ್‌ ಶಿಬು 37ಕ್ಕೆ 5, ಅಖಿನ್‌ 34ಕ್ಕೆ 2, ಕಿರಣ್‌ ಸಾಗರ್‌ 37ಕ್ಕೆ 2).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT