‘ಮಹಾರಾಷ್ಟ್ರದ ಗಣ್ಯ ಉದ್ಯಮಿ ಪುನಿತ್ ಬಾಲನ್ ಅವರು ₹ 50 ಸಾವಿರ ಕೊಟ್ಟಿದ್ದಾರೆ. ವಿದರ್ಭ ಕ್ರಿಕೆಟ್ ತಂಡದ ಆಟಗಾರ ಆದಿತ್ಯ ಸರವಟೆ, ಕೇರಳ ಆಟಗಾರ ಪ್ರಶಾಂತ್ ಪರಮೇಶ್ವರ್, ಪಂಜಾಬ್ ತಂಡದ ಮನನ್ ವೊಹ್ರಾ, ನಮ್ಮ ತಂಡದ ಋತುರಾಜ್ ಗಾಯಕವಾಡ್, ಸತ್ಯಜೀತ್ ಬಚ್ಚಾವ್ ಅವರೂ ನೆರವು ನೀಡಿದ್ದಾರೆ. ಬಹಳಷ್ಟು ಆಟಗಾರರು ಬೆಂಬಲಿಸುತ್ತಿದ್ದಾರೆ’ ಎಂದು ನೌಷಾದ್ ತಿಳಿಸಿದ್ದಾರೆ.