ಕೋಲ್ಕತ್ತ: ಶನಿವಾರ ಇಲ್ಲಿ ಆರಂಭವಾದ ಮಣಿಪುರ ಮತ್ತು ಅರುಣಾಚಲ ಪ್ರದೇಶ ತಂಡಗಳ ನಡುವಣ ರಣಜಿ ಟ್ರೋಫಿ ಪ್ಲೇಟ್ ಗುಂಪಿನ ಪಂದ್ಯದ 23 ವಿಕೆಟ್ಗಳು ಪತನವಾದವು. ಮಣಿಪುರ 211 ರನ್ಗಳ ಮಹತ್ವದ ಮುನ್ನಡೆ ಗಳಿಸಿದೆ.
ಪಂದ್ಯದ ಮೊದಲ ದಿನವೇ ನಾಟಕೀಯ ತಿರುವುಗಳನ್ನು ಕಂಡ ಪಂದ್ಯದಲ್ಲಿ ಮಣಿಪುರ ತಂಡವು ಪುಟಿದೆದ್ದಿತು. ಮೊದಲ ಇನಿಂಗ್ಸ್ನಲ್ಲಿ 85 ರನ್ಗಳಿಗೆ ಆಲೌಟ್ ಆಗಿತ್ತು. ಮಣಿಪುರ ತಂಡವು ಅರುಣಾಚಲ ಪ್ರದೇಶವನ್ನು 66 ರನ್ಗಳಿಗೆ ಆಲೌಟ್ ಮಾಡಿತು. ತೊಕೊಮ್ ಸಿಂಗ್ ಐದು ಮತ್ತು ಬಿಸ್ವಜೀತ್ ನಾಲ್ಕು ವಿಕೆಟ್ ಪಡೆದು ಮಿಂಚಿದರು. ಎರಡನೇ ಇನಿಂಗ್ಸ್ ಆರಂಭಿಸಿದ ಮಣಿಪುರಕ್ಕೆ ಹೃತಿಕ್ ಕನೋಜಿಯಾ (ಬ್ಯಾಟಿಂಗ್ 79 ) ಮತ್ತು ಯಶಪಾಲ್ ಸಿಂಗ್ (51 ರನ್) ಅರ್ಧಶತಕ ಗಳಿಸಿ ಆಸರೆಯಾದರು.