‘ನಾನು ಸಮಗ್ರವಾಗಿ ಯೋಚಿಸುತ್ತಿದ್ದೇನೆ. ಕ್ರಿಕೆಟ್ ಒಂದೇ ಈಗಿನ ಮಹತ್ವದ ವಿಷಯವೆಂದು ನಿಮಗನಿಸುತ್ತದೆಯೇ? ಆದರೆ, ಅದಕ್ಕಿಂತಲೂ ನನಗೆ ಇಂದಿನ ಮಕ್ಕಳು ಮತ್ತು ಯುವಕರ ಶಿಕ್ಷಣದ ಕುರಿತು ಚಿಂತೆಯಾಗಿದೆ. ಆದ್ದರಿಂದ ಪರಿಸ್ಥಿತಿ ನಿಯಂತ್ರಣಕ್ಕೆ ಬಂದ ಮೇಲೆ ಶಿಕ್ಷಣ ಸಂಸ್ಥೆಗಳ ಆರಂಭಕ್ಕೆ ಆದ್ಯತೆ ನೀಡಬೇಕು. ಆಮೇಲೆ ಫುಟ್ಬಾಲ್, ಕ್ರಿಕೆಟ್ ಮತ್ತಿತರ ಚಟುವಟಿಕೆಗಳು ತಾನಾಗಿಯೇ ಆರಂಭವಾಗುತ್ತವೆ’ ಎಂದು ಯೂಟ್ಯೂಬ್ ಚಾನೆಲ್ನ ಸ್ಪೋರ್ಟ್ಸ್ ಟಾಕ್ನಲ್ಲಿ ಹೇಳಿದ್ದಾರೆ.