ಏಳು ಅಡಿ ಆಳದಲ್ಲಿ ಮಣ್ಣಿನ ಮಡಿಕೆಯಲ್ಲಿ ಹೂತಿದ್ದ ಮೃತರ ಅಸ್ಥಿ ಅವಶೇಷ ದೊರಕಿದೆ. ಮೇಲ್ಬಾಗದ ಮಣ್ಣಿನ ಒತ್ತಡದಿಂದ ಮಡಿಕೆ ದುರ್ಬಲವಾಗಿದ್ದು, ಇಡೀ ಮಡಿಕೆಯನ್ನು ಹೊರತೆಗೆಯಲು ಆಗಲಿಲ್ಲ. ಒಡೆದ ಮಡಿಕೆಯ ಚೂರುಗಳನ್ನು ಹೊರತೆಗೆದು ಹೆಚ್ಚಿನ ಅಧ್ಯಯನ ಮಾಡಲಾಗುವುದು. ಹಾಗೆಯೇ ಮಡಿಕೆಯ ಒಳಭಾಗದಲ್ಲಿ ಬೂದಿ ಮಿಶ್ರಿತ ಮಣ್ಣು ಸಿಕ್ಕಿದ್ದು, ಅದನ್ನು ಹೆಚ್ಚಿನ ಸಂಶೋಧನೆಗಾಗಿ ಪುಣೆಯ ಡೆಕ್ಕನ್ ಕಾಲೇಜಿಗೆ ಕಳುಹಿಸಿಕೊಡಲಾಗುವುದು ಎಂದು ಅವರು ಮಾಹಿತಿ ನೀಡಿದರು.