2018 ಹಾಗೂ 2019ರ ಕೆಪಿಎಲ್ ಟೂರ್ನಿಗಳ ವೇಳೆ ಆಟಗಾರರಿಗೆ ಎಲ್ಲಿ ಔತಣ ಕೂಟಗಳನ್ನು ಏರ್ಪಡಿಸಲಾಗಿತ್ತು, ಔತಣ ಕೂಟ ಏರ್ಪಡಿಸಿದ್ದು ಯಾರು ಎಂಬ ಮಾಹಿತಿ ನೀಡಬೇಕು. ಆ ಕೂಟದ ಸಂಪೂರ್ಣ ವಿಡಿಯೊ ನೀಡಬೇಕು. ಪ್ರತಿ ತಂಡ 18 ಜನ ಆಟಗಾರರನ್ನು ಹರಾಜಿನ ಮೂಲಕ ಖರೀದಿ ಮಾಡಿದ್ದು, ಅವರನ್ನು ಹೊರತುಪಡಿಸಿ ಬೇರೆ ಆಟಗಾರರನ್ನು ತಂಡಕ್ಕೆ ಸೇರಿಸಿಕೊಂಡಿದ್ದರೆ ಅವರ ಬಗ್ಗೆಯೂ ಮಾಹಿತಿ ಕೊಡಬೇಕು. ಹಿಂದಿನ ಎರಡು ಟೂರ್ನಿಗಳ ವೇಳೆ ಆಟಗಾರರು ತಂಗಿದ್ದ ಹೋಟೆಲ್, ಅವರ ಖರ್ಚುವೆಚ್ಚಗಳನ್ನು ನೋಡಿಕೊಂಡವರು ಹಾಗೂ ಆದ ವೆಚ್ಚದ ಬಗ್ಗೆಯೂ ಮಾಹಿತಿ ನೀಡುವಂತೆ ಪೊಲೀಸರು ತಿಳಿಸಿದ್ದಾರೆ. ಕೆಪಿಎಲ್ ಟೂರ್ನಿಯಿಂದ ತಮ್ಮ ತಂಡಕ್ಕೆ ಬಂದ ಆದಾಯ ಎಷ್ಟು ಎಂಬುದರ ಲೆಕ್ಕ ನೀಡುವಂತೆಯೂ ನೋಟಿಸ್ನಲ್ಲಿ ತಿಳಿಸಿದ್ದಾರೆ.