ಬಸ್ ನಿಲ್ಲಿಸದಿರುವುದರಿಂದ ನಿತ್ಯ ಬೆಂಗಳೂರು, ತುಮಕೂರು ಮತ್ತು ರಾಜ್ಯದ ವಿವಿಧ ಜಿಲ್ಲೆಗಳಿಗೆ ಪ್ರಯಾಣಿಸುವ ಸಾರ್ವಜನಿಕರು, ವಿದ್ಯಾರ್ಥಿಗಳಿಗೆ ತೀವ್ರ ತೊಂದರೆಯಾಗಿದೆ. ಮಹಿಳೆಯರು, ವೃದ್ಧರಿಗೆ ತಡೆಗೋಡೆ ದಾಟಲಾಗುವುದಿಲ್ಲ. ಎಷ್ಟೋ ಬಾರಿ ಅನಾಹುತ ಸಂಭವಿಸಿವೆ. ಹಲವಾರು ಬಾರಿ ಪ್ರತಿಭಟಿಸಿದರೂ ಹೀಗೆ ಮುಂದುವರಿಯುತ್ತಿದೆ. ಮುಂದೆ ಉಗ್ರ ಪ್ರತಿಭಟನೆ ಮಾಡುತ್ತೇವೆ ಎಂದು ಭೀಮಯ್ಯ ಎಚ್ಚರಿಸಿದರು.