ಬೃಹತ್ ಗುರಿ ಬೆನ್ನತ್ತಿದ ಬಾಗಲಕೋಟೆ ತಂಡವು ವಿವೇಕ್ ನಾಯ್ಕ್ (26ಕ್ಕೆ 7) ಅವರ ದಾಳಿಗೆ ತತ್ತರಿಸಿತು. ತಂಡದ ಮೊತ್ತ 50 ರನ್ಗಳಾಗುವಷ್ಟರಲ್ಲಿ ಪ್ರಮುಖ 3 ವಿಕೆಟ್ ಕಳೆದುಕೊಂಡಿತು. ಈ ಹಂತದಲ್ಲಿ ಅಭಿಷೇಕ ಚಳಗೇರಿ (50 ರನ್, 12 ಬೌಂಡರಿ) ಅರ್ಧಶತಕ ಗಳಿಸಿ ನೆರವಾದರು. ಬಳಿಕ ತಂಡದ ನಾಯಕ ಶ್ರೀವರ್ಧಂತ್ 80 (85 ಎಸೆತ, 17 ಬೌಂಡರಿ) ರನ್ ಗಳಿಸಿದರೂ ಗೆಲುವು ಒಲಿಯಲಿಲ್ಲ.