<p><strong>ಚೆನ್ನೈ: </strong>ಐಪಿಎಲ್ನಲ್ಲಿ ಸನ್ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯವನ್ನು ಸೋತ ಬಳಿಕ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಪ್ಲೇಆಫ್ ಓಟದಿಂದ ಬಹುತೇಕ ಹೊರಬಿದ್ದಿದೆ. ಈ ನಡುವೆ ತಂಡದ ನಾಯಕ ಋತುರಾಜ್ ಗಾಯಕವಾಡ್ ಅವರು ನಾಯಕನಾಗಿ ಇನ್ನೂ ಪ್ರಗತಿ ಹೊಂದಬೇಕು ಎಂಬುದನ್ನು ತಂಡದ ಮುಖ್ಯ ತರಬೇತುದಾರ ಸ್ಟೀಫನ್ ಫ್ಲೆಮಿಂಗ್ ಒಪ್ಪಿಕೊಂಡಿದ್ದಾರೆ.</p><p>‘ಋತುರಾಜ್ ಗಾಯಕವಾಡ್ ಅವರು ನಾಯಕನಾಗಿ ಕಲಿಕೆ ಹಂತದಲ್ಲಿದ್ದಾರೆ. ಅವರು ಇನ್ನಷ್ಟು ಪ್ರಗತಿ ಹೊಂದುತ್ತಿದ್ದಾರೆ. ಅವರು ಕ್ರಿಕೆಟ್ನಲ್ಲಿ ಅತ್ಯುತ್ತಮ ನಾಯಕ ಎನಿಸಿಕೊಂಡ ಎಂ.ಎಸ್. ಧೋನಿ ಅವರು ಧೀರ್ಘಕಾಲ ಮುನ್ನಡೆಸಿದ ತಂಡವನ್ನು ಮುನ್ನಡೆಸುತ್ತಿದ್ದಾರೆ. ಇದೊಂದು ದೊಡ್ಡ ಪರಿವರ್ತನೆಯಾಗಿದೆ’ ಎಂದು ಫ್ಲೆಮಿಂಗ್ ಹೇಳಿದ್ದಾರೆ.</p><p>‘ಯುವಕರಾಗಿರುವುದರಿಂದ ಅವರು ಇನ್ನೂ ಸ್ವಲ್ಪ ಸಮಯ ತೆಗೆದುಕೊಳ್ಳುತ್ತಾರೆ. ಅವರು ಉತ್ತಮವಾಗಿ ಕಾರ್ಯತಂತ್ರ ರೂಪಿಸುತ್ತಾರೆ. ತಂಡದ ಇತರೆ ಆಟಗಾರರ ಮೇಲೆ ಅವರಿಗೆ ಅಪಾರ ಗೌರವವಿದೆ. ಅವರು ತಂಡದ ಸಹ ಆಟಗಾರರಿಂದಲೂ ಸಲಹೆಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಮಾತ್ರವಲ್ಲ, ನಾಯಕತ್ವದ ಜವಾಬ್ದಾರಿ ಏನೆಂಬುದನ್ನು ಇತರರಿಂದ ಕಲಿಯುತ್ತಿದ್ದಾರೆ’ ಎಂದಿದ್ದಾರೆ.</p><p>‘ಮುಂದಿನ ದಿನಗಳಲ್ಲಿ ಅವರು ಈ ಫ್ರಾಂಚೈಸಿಗೆ ಉತ್ತಮ ನಾಯಕನಾಗುತ್ತಾರೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ’ ಎಂದು ಫ್ಲೇಮಿಂಗ್ ಅವರು ತಿಳಿಸಿದ್ದಾರೆ. </p><p>ಈ ಋತುವಿನಲ್ಲಿ ಗಾಯಕವಾಡ್ ಅವರು ಕೇವಲ 29ರ ಬ್ಯಾಟಿಂಗ್ ಸರಾಸರಿಯಲ್ಲಿ ಬ್ಯಾಟ್ ಬೀಸಿದ್ದಾರೆ. ಅವರು ಆಡಿರುವ 13 ಪಂದ್ಯಗಳಿಂದ ಕೇವಲ 2 ಅರ್ಧಶತಕಗಳನ್ನು ಮಾತ್ರ ಕಲೆಹಾಕಿದ್ದಾರೆ. ‘ಈ ಋತುವು ನಮಗೆ ಸವಾಲಿನದ್ದಾಗಿತ್ತು. ಕಳೆದ ವರ್ಷ ಮಾಡಲಾದ ಕೆಲವು ಬದಲಾವಣೆಗಳಿಂದಾಗಿ ತಂಡವು ಇತರೆ ತಂಡಗಳಿಗಿಂತ ಒಂದು ಹೆಜ್ಜೆ ಹಿಂದಿದೆ’ ಎಂದು ಒಪ್ಪಿಕೊಂಡರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚೆನ್ನೈ: </strong>ಐಪಿಎಲ್ನಲ್ಲಿ ಸನ್ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯವನ್ನು ಸೋತ ಬಳಿಕ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಪ್ಲೇಆಫ್ ಓಟದಿಂದ ಬಹುತೇಕ ಹೊರಬಿದ್ದಿದೆ. ಈ ನಡುವೆ ತಂಡದ ನಾಯಕ ಋತುರಾಜ್ ಗಾಯಕವಾಡ್ ಅವರು ನಾಯಕನಾಗಿ ಇನ್ನೂ ಪ್ರಗತಿ ಹೊಂದಬೇಕು ಎಂಬುದನ್ನು ತಂಡದ ಮುಖ್ಯ ತರಬೇತುದಾರ ಸ್ಟೀಫನ್ ಫ್ಲೆಮಿಂಗ್ ಒಪ್ಪಿಕೊಂಡಿದ್ದಾರೆ.</p><p>‘ಋತುರಾಜ್ ಗಾಯಕವಾಡ್ ಅವರು ನಾಯಕನಾಗಿ ಕಲಿಕೆ ಹಂತದಲ್ಲಿದ್ದಾರೆ. ಅವರು ಇನ್ನಷ್ಟು ಪ್ರಗತಿ ಹೊಂದುತ್ತಿದ್ದಾರೆ. ಅವರು ಕ್ರಿಕೆಟ್ನಲ್ಲಿ ಅತ್ಯುತ್ತಮ ನಾಯಕ ಎನಿಸಿಕೊಂಡ ಎಂ.ಎಸ್. ಧೋನಿ ಅವರು ಧೀರ್ಘಕಾಲ ಮುನ್ನಡೆಸಿದ ತಂಡವನ್ನು ಮುನ್ನಡೆಸುತ್ತಿದ್ದಾರೆ. ಇದೊಂದು ದೊಡ್ಡ ಪರಿವರ್ತನೆಯಾಗಿದೆ’ ಎಂದು ಫ್ಲೆಮಿಂಗ್ ಹೇಳಿದ್ದಾರೆ.</p><p>‘ಯುವಕರಾಗಿರುವುದರಿಂದ ಅವರು ಇನ್ನೂ ಸ್ವಲ್ಪ ಸಮಯ ತೆಗೆದುಕೊಳ್ಳುತ್ತಾರೆ. ಅವರು ಉತ್ತಮವಾಗಿ ಕಾರ್ಯತಂತ್ರ ರೂಪಿಸುತ್ತಾರೆ. ತಂಡದ ಇತರೆ ಆಟಗಾರರ ಮೇಲೆ ಅವರಿಗೆ ಅಪಾರ ಗೌರವವಿದೆ. ಅವರು ತಂಡದ ಸಹ ಆಟಗಾರರಿಂದಲೂ ಸಲಹೆಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಮಾತ್ರವಲ್ಲ, ನಾಯಕತ್ವದ ಜವಾಬ್ದಾರಿ ಏನೆಂಬುದನ್ನು ಇತರರಿಂದ ಕಲಿಯುತ್ತಿದ್ದಾರೆ’ ಎಂದಿದ್ದಾರೆ.</p><p>‘ಮುಂದಿನ ದಿನಗಳಲ್ಲಿ ಅವರು ಈ ಫ್ರಾಂಚೈಸಿಗೆ ಉತ್ತಮ ನಾಯಕನಾಗುತ್ತಾರೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ’ ಎಂದು ಫ್ಲೇಮಿಂಗ್ ಅವರು ತಿಳಿಸಿದ್ದಾರೆ. </p><p>ಈ ಋತುವಿನಲ್ಲಿ ಗಾಯಕವಾಡ್ ಅವರು ಕೇವಲ 29ರ ಬ್ಯಾಟಿಂಗ್ ಸರಾಸರಿಯಲ್ಲಿ ಬ್ಯಾಟ್ ಬೀಸಿದ್ದಾರೆ. ಅವರು ಆಡಿರುವ 13 ಪಂದ್ಯಗಳಿಂದ ಕೇವಲ 2 ಅರ್ಧಶತಕಗಳನ್ನು ಮಾತ್ರ ಕಲೆಹಾಕಿದ್ದಾರೆ. ‘ಈ ಋತುವು ನಮಗೆ ಸವಾಲಿನದ್ದಾಗಿತ್ತು. ಕಳೆದ ವರ್ಷ ಮಾಡಲಾದ ಕೆಲವು ಬದಲಾವಣೆಗಳಿಂದಾಗಿ ತಂಡವು ಇತರೆ ತಂಡಗಳಿಗಿಂತ ಒಂದು ಹೆಜ್ಜೆ ಹಿಂದಿದೆ’ ಎಂದು ಒಪ್ಪಿಕೊಂಡರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>