<p>ಇಂಡಿಯನ್ ಪ್ರೀಮಿಯರ್ ಲೀಗ್ 19ನೇ ಆವೃತ್ತಿಯು ಮಾರ್ಚ್ 28ರಿಂದ ಆರಂಭವಾಗಲಿದೆ. ಈ ನಡುವೆ ಐದು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಮ್ಮ ಆರಂಭಿಕ ಆಟಗಾರರು ಯಾರು ಎಂಬುದನ್ನು ಬಹಿರಂಗಪಡಿಸಿದೆ. </p><p>ಕಳೆದ ಬಾರಿಯ ಆವೃತ್ತಿಯಲ್ಲಿ ನೀರಸ ಪ್ರದರ್ಶನ ತೋರಿ ಪ್ಲೇ ಆಫ್ ತಲುಪುವಲ್ಲಿ ವಿಫಲವಾಗಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಈ ಬಾರಿ ಪ್ರಶಸ್ತಿ ಗೆಲ್ಲುವ ವಿಶ್ವಾಸದೊಂದಿಗೆ, ಕೆಲವು ಬದಲಾವಣೆ ಮಾಡಿಕೊಂಡು ಬಲಿಷ್ಠ ತಂಡದ ಜೊತೆ ಕಣಕ್ಕಿಳಿಯುತ್ತಿದೆ.</p><p>ಅದಕ್ಕೆ ತಕ್ಕಂತೆ ಯೋಜನೆ ಕೂಡ ರೂಪಿಸಿರುವ ಸಿಎಸ್ಕೆ ತಂಡವು ಕಳೆದ ವರ್ಷ ಕೊನೆಯ ಕೆಲವು ಪಂದ್ಯಗಳಿಗೆ ಆರಂಭಿಕರಾಗಿ ಆಡಿದ್ದ ಯುವ ಬ್ಯಾಟರ್ ಆಯುಷ್ ಮ್ಹಾತ್ರೆ ಅವರು ಈ ಬಾರಿ ಆರಂಭಿಕರಾಗಿರುವುದಿಲ್ಲ ಎಂದು ತಂಡದ ನಾಯಕ ಋತುರಾಜ್ ಗಾಯಕವಾಡ್ ತಿಳಿಸಿದ್ದಾರೆ. ಮಾತ್ರವಲ್ಲ, ಸಂಜು ಸ್ಯಾಮ್ಸನ್ ಜೊತೆ ಆರಂಭಿಕರಾಗಿ ಯಾರು ಆಡುತ್ತಾರೆ ಎಂಬುದನ್ನು ಅವರು ಸ್ಪಷ್ಟಪಡಿಸಿದ್ದಾರೆ.</p><p>2026ರ ಐಪಿಎಲ್ ಆವೃತ್ತಿಗಾಗಿ ನಡೆದ ಮಿನಿ ಹರಾಜಿಗೂ ಮುನ್ನ ರಾಜಸ್ಥಾನ ರಾಯಲ್ಸ್ ತಂಡದ ಜೊತೆ ಟ್ರೇಡ್ ಮೂಲಕ ಸಂಜು ಸ್ಯಾಮ್ಸನ್ ಅವರನ್ನು ಸಿಎಸ್ಕೆ ತಂಡ ಖರೀದಿಸಿದೆ. ಸದ್ಯ, ಅಮೋಘ ಲಯದಲ್ಲಿರುವ ಅವರನ್ನು ಸಿಎಸ್ಕೆ ಆರಂಭಿಕರಾಗಿ ಆಡಿಸುವುದು ಖಚಿತವಾಗಿದೆ. ಇವರ ಜೊತೆಗೆ ಆಯುಷ್ ಮ್ಹಾತ್ರೆ ಅಥವಾ ಗಾಯಕವಾಡ್ ಯಾರು ಆಡುತ್ತಾರೆ? ಎಂಬ ಪ್ರಶ್ನೆಗೆ ನೇರವಾಗಿ ‘ಋತುರಾಜ್ ಗಾಯಕವಾಡ್’ ಎಂದು ಸ್ವತಃ ನಾಯಕ ಗಾಯಕವಾಡ್ ಉತ್ತರಿಸಿದ್ದಾರೆ.</p>. <p>ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಸಿಎಸ್ಕೆ ತಂಡದ ಮಾಜಿ ಆಟಗಾರ ರವಿಚಂದ್ರನ್ ಅಶ್ವಿನ್ ಕೂಡ ಆರಂಭಿಕರಾಗಿ ಗಾಯಕವಾಡ್ ಮತ್ತು ಸ್ಯಾಮ್ಸನ್ ಉತ್ತಮ ಆಯ್ಕೆ ಎಂದಿದ್ದಾರೆ. ಇಬ್ಬರೂ ಕೂಡ ಅನುಭವಿಗಳು ಹಾಗೂ ಉತ್ತಮ ಲಯದಲ್ಲಿದ್ದಾರೆ. ಹಾಗಾಗಿ, ಈ ಇಬ್ಬರು ಆರಂಭಿಕರಾಗಿ ಆಡುವುದರಿಂದ ಪವರ್ಪ್ಲೇನಲ್ಲಿ ಉತ್ತಮ ರನ್ ಕಲೆಹಾಕಬಹುದು ಎಂದು ಅವರು ಹೇಳಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಇಂಡಿಯನ್ ಪ್ರೀಮಿಯರ್ ಲೀಗ್ 19ನೇ ಆವೃತ್ತಿಯು ಮಾರ್ಚ್ 28ರಿಂದ ಆರಂಭವಾಗಲಿದೆ. ಈ ನಡುವೆ ಐದು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಮ್ಮ ಆರಂಭಿಕ ಆಟಗಾರರು ಯಾರು ಎಂಬುದನ್ನು ಬಹಿರಂಗಪಡಿಸಿದೆ. </p><p>ಕಳೆದ ಬಾರಿಯ ಆವೃತ್ತಿಯಲ್ಲಿ ನೀರಸ ಪ್ರದರ್ಶನ ತೋರಿ ಪ್ಲೇ ಆಫ್ ತಲುಪುವಲ್ಲಿ ವಿಫಲವಾಗಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಈ ಬಾರಿ ಪ್ರಶಸ್ತಿ ಗೆಲ್ಲುವ ವಿಶ್ವಾಸದೊಂದಿಗೆ, ಕೆಲವು ಬದಲಾವಣೆ ಮಾಡಿಕೊಂಡು ಬಲಿಷ್ಠ ತಂಡದ ಜೊತೆ ಕಣಕ್ಕಿಳಿಯುತ್ತಿದೆ.</p><p>ಅದಕ್ಕೆ ತಕ್ಕಂತೆ ಯೋಜನೆ ಕೂಡ ರೂಪಿಸಿರುವ ಸಿಎಸ್ಕೆ ತಂಡವು ಕಳೆದ ವರ್ಷ ಕೊನೆಯ ಕೆಲವು ಪಂದ್ಯಗಳಿಗೆ ಆರಂಭಿಕರಾಗಿ ಆಡಿದ್ದ ಯುವ ಬ್ಯಾಟರ್ ಆಯುಷ್ ಮ್ಹಾತ್ರೆ ಅವರು ಈ ಬಾರಿ ಆರಂಭಿಕರಾಗಿರುವುದಿಲ್ಲ ಎಂದು ತಂಡದ ನಾಯಕ ಋತುರಾಜ್ ಗಾಯಕವಾಡ್ ತಿಳಿಸಿದ್ದಾರೆ. ಮಾತ್ರವಲ್ಲ, ಸಂಜು ಸ್ಯಾಮ್ಸನ್ ಜೊತೆ ಆರಂಭಿಕರಾಗಿ ಯಾರು ಆಡುತ್ತಾರೆ ಎಂಬುದನ್ನು ಅವರು ಸ್ಪಷ್ಟಪಡಿಸಿದ್ದಾರೆ.</p><p>2026ರ ಐಪಿಎಲ್ ಆವೃತ್ತಿಗಾಗಿ ನಡೆದ ಮಿನಿ ಹರಾಜಿಗೂ ಮುನ್ನ ರಾಜಸ್ಥಾನ ರಾಯಲ್ಸ್ ತಂಡದ ಜೊತೆ ಟ್ರೇಡ್ ಮೂಲಕ ಸಂಜು ಸ್ಯಾಮ್ಸನ್ ಅವರನ್ನು ಸಿಎಸ್ಕೆ ತಂಡ ಖರೀದಿಸಿದೆ. ಸದ್ಯ, ಅಮೋಘ ಲಯದಲ್ಲಿರುವ ಅವರನ್ನು ಸಿಎಸ್ಕೆ ಆರಂಭಿಕರಾಗಿ ಆಡಿಸುವುದು ಖಚಿತವಾಗಿದೆ. ಇವರ ಜೊತೆಗೆ ಆಯುಷ್ ಮ್ಹಾತ್ರೆ ಅಥವಾ ಗಾಯಕವಾಡ್ ಯಾರು ಆಡುತ್ತಾರೆ? ಎಂಬ ಪ್ರಶ್ನೆಗೆ ನೇರವಾಗಿ ‘ಋತುರಾಜ್ ಗಾಯಕವಾಡ್’ ಎಂದು ಸ್ವತಃ ನಾಯಕ ಗಾಯಕವಾಡ್ ಉತ್ತರಿಸಿದ್ದಾರೆ.</p>. <p>ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಸಿಎಸ್ಕೆ ತಂಡದ ಮಾಜಿ ಆಟಗಾರ ರವಿಚಂದ್ರನ್ ಅಶ್ವಿನ್ ಕೂಡ ಆರಂಭಿಕರಾಗಿ ಗಾಯಕವಾಡ್ ಮತ್ತು ಸ್ಯಾಮ್ಸನ್ ಉತ್ತಮ ಆಯ್ಕೆ ಎಂದಿದ್ದಾರೆ. ಇಬ್ಬರೂ ಕೂಡ ಅನುಭವಿಗಳು ಹಾಗೂ ಉತ್ತಮ ಲಯದಲ್ಲಿದ್ದಾರೆ. ಹಾಗಾಗಿ, ಈ ಇಬ್ಬರು ಆರಂಭಿಕರಾಗಿ ಆಡುವುದರಿಂದ ಪವರ್ಪ್ಲೇನಲ್ಲಿ ಉತ್ತಮ ರನ್ ಕಲೆಹಾಕಬಹುದು ಎಂದು ಅವರು ಹೇಳಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>