<p><strong>ನವದೆಹಲಿ:</strong> ಕೋಲ್ಕತ್ತ ನೈಟ್ ರೈಡರ್ಸ್ ತಂಡದ ಸ್ಪಿನ್ನರ್ಗಳು ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಸಾಧಾರಣ ಮೊತ್ತಕ್ಕೆ ಕಟ್ಟಿಹಾಕಿದರು. ಫಿನ್ ಅಲೆನ್ ಶತಕ ಹೊಡೆದು ಡೆಲ್ಲಿಯ ಗಾಯಕ್ಕೆ ಉಪ್ಪು ಸವರಿದರು. ಇದರೊಂದಿಗೆ ಕೋಲ್ಕತ್ತ ತಂಡವು ಜಯಭೇರಿ ಬಾರಿಸಿತು. </p><p>ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಐಪಿಎಲ್ ಪಂದ್ಯದಲ್ಲಿ ಕೋಲ್ಕತ್ತ ತಂಡದ ಸ್ಪಿನ್ ತ್ರಿವಳಿಗಳಾದ ಅನುಕೂಲ್ ರಾಯ್ (31ಕ್ಕೆ2), ಸುನಿಲ್ ನಾರಾಯಣ್ (17ಕ್ಕೆ1) ಹಾಗೂ ವರುಣ್ ಚಕ್ರವರ್ತಿ (4-0-28-0) ಅವರ ಪರಿಣಾಮಕಾರಿ ದಾಳಿಯಿಂದಾಗಿ ಡೆಲ್ಲಿ ತಂಡವು 20 ಓವರ್ಗಳಲ್ಲಿ 8 ವಿಕೆಟ್ಗಳಿಗೆ 142 ರನ್ ಮಾತ್ರ ಗಳಿಸಿತು. ಫಿನ್ ಅಲೆನ್ ಅಜೇಯ ಶತಕ (100; 47ಎ, 4X5, 6X10)ದ ಬಲದಿಂದ ತಂಡವು 14. 2 ಓವರ್ಗಳಲ್ಲಿ 2 ವಿಕೆಟ್ಗಳಿಗೆ 147 ರನ್ ಗಳಿಸಿ ಜಯಿಸಿತು. </p><p>ಕೋಲ್ಕತ್ತ ತಂಡದ ವೇಗಿ ಕಾರ್ತಿಕ್ ತ್ಯಾಗಿ (25ಕ್ಕೆ2), ವೈಭವ್ ಅರೋರಾ (29ಕ್ಕೆ1) ಮತ್ತು ಕ್ಯಾಮರಾನ್ ಗ್ರೀನ್ (12ಕ್ಕೆ1) ಕೂಡ ಮಿಂಚಿದರು. </p><p>ಆಶುತೋಷ್ ಶರ್ಮಾ ಅವರು 28 ಎಸೆತಗಳಲ್ಲಿ 39 ರನ್ ಸಿಡಿಸದೇ ಹೋಗಿದ್ದರೆ ಡೆಲ್ಲಿ ತಂಡವು ಮೂರಂಕಿ ಮೊತ್ತ ಗಳಿಸುವುದೂ ದುಸ್ತರವಾಗುತ್ತಿತ್ತು. ಶರ್ಮಾ ಅವರು ಮೂರು ಬೌಂಡರಿ ಮತ್ತು ಅಷ್ಟೇ ಸಂಖ್ಯೆಯ ಸಿಕ್ಸರ್ ಬಾರಿಸಿದರು. </p><p>ಟಾಸ್ ಗೆದ್ದ ಕೋಲ್ಕತ್ತ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಆರಂಭಿಕ ಬ್ಯಾಟರ್ ನಿಸಾಂಕ (50; 29ಎ, 4X5, 6X3) ಮತ್ತು ಕೆ.ಎಲ್. ರಾಹುಲ್ (23; 14ಎ, 4X4) ಅವರು ಉತ್ತಮ ಆರಂಭ ನೀಡಿದರು. ಶ್ರೀಲಂಕಾದ ನಿಸಾಂಕ ಅವರ ಬೀಸಾಟವು ಭರ್ಜರಿಯಾಗಿತ್ತು.<br>ಇನಿಂಗ್ಸ್ನ ಮೊದಲ ಬೌಂಡರಿ ಮತ್ತು ಸಿಕ್ಸರ್ ದಾಖಲಾಗಿದ್ದು ಅವರ ಬ್ಯಾಟ್ನಿಂದಲೇ. </p><p>ಆದರೆ ಕೋಲ್ಕತ್ತ ತಂಡದ ಬೌಲರ್ಗಳು ತಮ್ಮ ಮೇಲಿನ ನಿರೀಕ್ಷೆಯನ್ನು ಹುಸಿಗೊಳಿಸಲಿಲ್ಲ. ಕೆ.ಎಲ್. ರಾಹುಲ್ ವಿಕೆಟ್ ಪಡೆದ ಕಾರ್ತಿಕ್ ತ್ಯಾಗಿ ಪವರ್ಪ್ಲೇ ಹಂತದಲ್ಲಿಯೇ ಆತಿಥೇಯರಿಗೆ ಆಘಾತ ನೀಡಿದರು. </p><p>ಇನ್ನೊಂದೆಡೆ ಗ್ರೀನ್ ಅವರು ನಿತೀಶ್ ರಾಣಾ (8 ರನ್) ಅವರನ್ನು ಪೆವಿಲಿಯನ್ಗೆ ಮರಳಿಸಿದರು. ನಂತರ ತಂಡದ ಸ್ಪಿನ್ನರ್ಗಳು ಮಧ್ಯಮ ಕ್ರಮಾಂಕಕ್ಕೆ ಪೆಟ್ಟುಕೊಟ್ಟರು. </p><p>ವರುಣ್ ಅವರು ವಿಕೆಟ್ ಪಡೆಯದಿದ್ದರೂ ರನ್ಗಳಿಗೆ ಕಡಿವಾಣ ಹಾಕಿದರು. ಇದರಿಂದಾಗಿ ಬ್ಯಾಟರ್ಗಳು ಒತ್ತಡಕ್ಕೊಳಗಾದರು. ಅದರ ಲಾಭ ಸ್ಪಿನ್ ಬೌಲರ್ಗಳಾದ ಸುನಿಲ್ ಮತ್ತು ಅನುಕೂಲ್ ಅವರಿಗಾಯಿತು.</p><p>ಉತ್ತಮ ಲಯದಲ್ಲಿರುವ ಸಮೀರ್ ರಿಜ್ವಿ, ನಾಯಕ ಅಕ್ಷರ್ ಪಟೇಲ್, ಟ್ರಿಸ್ಟನ್ ಸ್ಟಬ್ಸ್ ಅವರು ಸೇರಿದಂತೆ ಬಹುತೇಕ ಬ್ಯಾಟರ್ಗಳು ವಿಫಲರಾದರು. ನಿಸಾಂಕ ಮಾತ್ರ ಏಕಾಂಗಿ ಹೋರಾಟ ನಡೆಸಿದರು. ಅನುಕೂಲ್ ರಾಯ್ ಬೌಲಿಂಗ್ನಲ್ಲಿ ರಘುವಂಶಿ ಮಾಡಿದ ಸ್ಟಂಪಿಂಗ್ಗೆ ನಿಸಾಂಕ ಔಟಾದರು. ತಂಡವು 89 ರನ್ಗಳಿಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಆದರೆ ಆಶುತೋಷ್ ಅವರು ಬೀಸಾಟದ ಮೂಲಕ ಒಂದಿಷ್ಟು ಚೇತರಿಕೆ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ಕೋಲ್ಕತ್ತ ನೈಟ್ ರೈಡರ್ಸ್ ತಂಡದ ಸ್ಪಿನ್ನರ್ಗಳು ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಸಾಧಾರಣ ಮೊತ್ತಕ್ಕೆ ಕಟ್ಟಿಹಾಕಿದರು. ಫಿನ್ ಅಲೆನ್ ಶತಕ ಹೊಡೆದು ಡೆಲ್ಲಿಯ ಗಾಯಕ್ಕೆ ಉಪ್ಪು ಸವರಿದರು. ಇದರೊಂದಿಗೆ ಕೋಲ್ಕತ್ತ ತಂಡವು ಜಯಭೇರಿ ಬಾರಿಸಿತು. </p><p>ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಐಪಿಎಲ್ ಪಂದ್ಯದಲ್ಲಿ ಕೋಲ್ಕತ್ತ ತಂಡದ ಸ್ಪಿನ್ ತ್ರಿವಳಿಗಳಾದ ಅನುಕೂಲ್ ರಾಯ್ (31ಕ್ಕೆ2), ಸುನಿಲ್ ನಾರಾಯಣ್ (17ಕ್ಕೆ1) ಹಾಗೂ ವರುಣ್ ಚಕ್ರವರ್ತಿ (4-0-28-0) ಅವರ ಪರಿಣಾಮಕಾರಿ ದಾಳಿಯಿಂದಾಗಿ ಡೆಲ್ಲಿ ತಂಡವು 20 ಓವರ್ಗಳಲ್ಲಿ 8 ವಿಕೆಟ್ಗಳಿಗೆ 142 ರನ್ ಮಾತ್ರ ಗಳಿಸಿತು. ಫಿನ್ ಅಲೆನ್ ಅಜೇಯ ಶತಕ (100; 47ಎ, 4X5, 6X10)ದ ಬಲದಿಂದ ತಂಡವು 14. 2 ಓವರ್ಗಳಲ್ಲಿ 2 ವಿಕೆಟ್ಗಳಿಗೆ 147 ರನ್ ಗಳಿಸಿ ಜಯಿಸಿತು. </p><p>ಕೋಲ್ಕತ್ತ ತಂಡದ ವೇಗಿ ಕಾರ್ತಿಕ್ ತ್ಯಾಗಿ (25ಕ್ಕೆ2), ವೈಭವ್ ಅರೋರಾ (29ಕ್ಕೆ1) ಮತ್ತು ಕ್ಯಾಮರಾನ್ ಗ್ರೀನ್ (12ಕ್ಕೆ1) ಕೂಡ ಮಿಂಚಿದರು. </p><p>ಆಶುತೋಷ್ ಶರ್ಮಾ ಅವರು 28 ಎಸೆತಗಳಲ್ಲಿ 39 ರನ್ ಸಿಡಿಸದೇ ಹೋಗಿದ್ದರೆ ಡೆಲ್ಲಿ ತಂಡವು ಮೂರಂಕಿ ಮೊತ್ತ ಗಳಿಸುವುದೂ ದುಸ್ತರವಾಗುತ್ತಿತ್ತು. ಶರ್ಮಾ ಅವರು ಮೂರು ಬೌಂಡರಿ ಮತ್ತು ಅಷ್ಟೇ ಸಂಖ್ಯೆಯ ಸಿಕ್ಸರ್ ಬಾರಿಸಿದರು. </p><p>ಟಾಸ್ ಗೆದ್ದ ಕೋಲ್ಕತ್ತ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಆರಂಭಿಕ ಬ್ಯಾಟರ್ ನಿಸಾಂಕ (50; 29ಎ, 4X5, 6X3) ಮತ್ತು ಕೆ.ಎಲ್. ರಾಹುಲ್ (23; 14ಎ, 4X4) ಅವರು ಉತ್ತಮ ಆರಂಭ ನೀಡಿದರು. ಶ್ರೀಲಂಕಾದ ನಿಸಾಂಕ ಅವರ ಬೀಸಾಟವು ಭರ್ಜರಿಯಾಗಿತ್ತು.<br>ಇನಿಂಗ್ಸ್ನ ಮೊದಲ ಬೌಂಡರಿ ಮತ್ತು ಸಿಕ್ಸರ್ ದಾಖಲಾಗಿದ್ದು ಅವರ ಬ್ಯಾಟ್ನಿಂದಲೇ. </p><p>ಆದರೆ ಕೋಲ್ಕತ್ತ ತಂಡದ ಬೌಲರ್ಗಳು ತಮ್ಮ ಮೇಲಿನ ನಿರೀಕ್ಷೆಯನ್ನು ಹುಸಿಗೊಳಿಸಲಿಲ್ಲ. ಕೆ.ಎಲ್. ರಾಹುಲ್ ವಿಕೆಟ್ ಪಡೆದ ಕಾರ್ತಿಕ್ ತ್ಯಾಗಿ ಪವರ್ಪ್ಲೇ ಹಂತದಲ್ಲಿಯೇ ಆತಿಥೇಯರಿಗೆ ಆಘಾತ ನೀಡಿದರು. </p><p>ಇನ್ನೊಂದೆಡೆ ಗ್ರೀನ್ ಅವರು ನಿತೀಶ್ ರಾಣಾ (8 ರನ್) ಅವರನ್ನು ಪೆವಿಲಿಯನ್ಗೆ ಮರಳಿಸಿದರು. ನಂತರ ತಂಡದ ಸ್ಪಿನ್ನರ್ಗಳು ಮಧ್ಯಮ ಕ್ರಮಾಂಕಕ್ಕೆ ಪೆಟ್ಟುಕೊಟ್ಟರು. </p><p>ವರುಣ್ ಅವರು ವಿಕೆಟ್ ಪಡೆಯದಿದ್ದರೂ ರನ್ಗಳಿಗೆ ಕಡಿವಾಣ ಹಾಕಿದರು. ಇದರಿಂದಾಗಿ ಬ್ಯಾಟರ್ಗಳು ಒತ್ತಡಕ್ಕೊಳಗಾದರು. ಅದರ ಲಾಭ ಸ್ಪಿನ್ ಬೌಲರ್ಗಳಾದ ಸುನಿಲ್ ಮತ್ತು ಅನುಕೂಲ್ ಅವರಿಗಾಯಿತು.</p><p>ಉತ್ತಮ ಲಯದಲ್ಲಿರುವ ಸಮೀರ್ ರಿಜ್ವಿ, ನಾಯಕ ಅಕ್ಷರ್ ಪಟೇಲ್, ಟ್ರಿಸ್ಟನ್ ಸ್ಟಬ್ಸ್ ಅವರು ಸೇರಿದಂತೆ ಬಹುತೇಕ ಬ್ಯಾಟರ್ಗಳು ವಿಫಲರಾದರು. ನಿಸಾಂಕ ಮಾತ್ರ ಏಕಾಂಗಿ ಹೋರಾಟ ನಡೆಸಿದರು. ಅನುಕೂಲ್ ರಾಯ್ ಬೌಲಿಂಗ್ನಲ್ಲಿ ರಘುವಂಶಿ ಮಾಡಿದ ಸ್ಟಂಪಿಂಗ್ಗೆ ನಿಸಾಂಕ ಔಟಾದರು. ತಂಡವು 89 ರನ್ಗಳಿಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಆದರೆ ಆಶುತೋಷ್ ಅವರು ಬೀಸಾಟದ ಮೂಲಕ ಒಂದಿಷ್ಟು ಚೇತರಿಕೆ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>