ಪಾಠ ಕಲಿಸಿದ ವೈಫಲ್ಯ
ದೆಹಲಿಯ ಪ್ರತಿಯೊಬ್ಬ ಪೊಲೀಸ್ ಕೂಡ ಉತ್ತಮ ತರಬೇತಿ ಪಡೆದುಕೊಂಡಿದ್ದಾರೆ. ತುರ್ತು ಸಂದರ್ಭಗಳಲ್ಲಿ ಕಡಿಮೆ ಅವಧಿಯಲ್ಲಿ ಅತ್ಯುತ್ತಮವಾಗಿ ಗ್ರೀನ್ ಕಾರಿಡಾರ್ ರೂಪಿಸುವ ನಿಟ್ಟಿನಲ್ಲಿ ಸದಾ ಸನ್ನದ್ಧರಾಗಿರುತ್ತಾರೆ ಎಂದು ಸಿಂಗ್ ಹೇಳಿದ್ದಾರೆ. ʼಇತ್ತೀಚೆಗೆ ಆಯೋಜನೆಗೊಂಡಿದ್ದ ಎಐ ಕಾರ್ಯಕ್ರಮವೊಂದು ಸಂಚಾರ ದಟ್ಟಣೆಯಿಂದಾಗಿ ಭಾರಿ ಅಡಚಣೆ ಎದುರಿಸಿತು. ಆ ಸಮಾವೇಶಕ್ಕೆ ವಿದೇಶಗಳಿಂದಲೂ ಅತಿಥಿಗಳು ಪಾಲ್ಗೊಂಡಿದ್ದರು. ಅದರಿಂದ ಹಿನ್ನಡೆಯಾಗಿತ್ತು. ಎಚ್ಚೆತ್ತ ಅಧಿಕಾರಿಗಳು, ಉನ್ನತ ಮಟ್ಟದ ತರಬೇತಿ ಕಲ್ಪಿಸಿದರು. ಅದರ ಫಲವಾಗಿ, ಯಾವುದೇ ಸಂದರ್ಭದಲ್ಲೂ ಗ್ರೀನ್ ಕಾರಿಡಾರ್ ರೂಪಿಸಲು, ತ್ವರಿತವಾಗಿ ಕಾರ್ಯಗತಗೊಳಿಸಲು ಶಕ್ತರಾಗಿದ್ದೇವೆ. ಇದರ ಸಂಪೂರ್ಣ ಶ್ರೇಯ ಮೇಲಧಿಕಾರಿಗಳಿಗೆ ಸಲ್ಲುತ್ತದೆʼ ಎಂದು ಹೇಳಿಕೊಂಡಿದ್ದಾರೆ.