ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಧಾನಮಂತ್ರಿ ಪರಿಹಾರ ನಿಧಿಗೆ 9 ಪೈಸೆ ಚೆಕ್ ಕಳಿಸಿ ವಿನೂತನ ಪ್ರತಿಭಟನೆ

Last Updated 5 ಜೂನ್ 2018, 14:51 IST
ಅಕ್ಷರ ಗಾತ್ರ

ಹೈದರಾಬಾದ್: ಇಂಧನ ಬೆಲೆಯಲ್ಲಿ ಕೇವಲ 9 ಪೈಸೆ ಇಳಿಕೆ ಮಾಡಿದ ಕೇಂದ್ರ ಸರ್ಕಾರದ ನಿರ್ಧಾರವನ್ನು ಖಂಡಿಸಿ ತೆಲಂಗಾಣದ ನಿವಾಸಿಯೊಬ್ಬರು ಪ್ರಧಾನಿಮಂತ್ರಿ ಪರಿಹಾರ ನಿಧಿಗೆ 9 ಪೈಸೆ ಚೆಕ್ ನೀಡಿ ಪ್ರತಿಭಟಿಸಿದ್ದಾರೆ.

ಇಲ್ಲಿನ ಸಿರ್ಸಿಲ್ಲಾ ಜಿಲ್ಲೆಯ ವಿ. ಚಂದ್ರಯ್ಯ ಎಂಬವರು ಪ್ರಜಾ  ವಾಣಿ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಗೆ ಈ ಚೆಕ್ ಹಸ್ತಾಂತರಿಸಿದ್ದಾರೆ.

ಇಂಧನ ಬೆಲೆಯಲ್ಲಿ ನೀವು  9 ಪೈಸೆ ಇಳಿಕೆ ಮಾಡಿದ್ದಾರೆ.  ಪೆಟ್ರೋಲ್ ಬೆಲೆಯಲ್ಲಾದ ಈ ಇಳಿಕೆಯಿಂದ ನಾನು ಉಳಿಸಿದ 9 ಪೈಸೆಯನ್ನು ಪ್ರಧಾನಮಂತ್ರಿ ಪರಿಹಾರನಿಧಿಗೆ ನೀಡುತ್ತಿದ್ದೇನೆ. ಈ ಹಣವನ್ನು ಉತ್ತಮ ಕಾರ್ಯಕ್ಕಾಗಿ ಬಳಸಲಾಗುತ್ತದೆ ಎಂಬ ಆಶಯ ನನ್ನದು ಎಂದು ಚಂದ್ರಯ್ಯ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT